ರಾಜ್ಯದಲ್ಲಿ ದಿನಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಹೀಟ್ ವೇವ್ ಅಲರ್ಟ್ ನೀಡಿದ್ದು, ಮುಂದಿನ 3 ದಿನಗಳ ಕಾಲ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಇದರೊಂದಿಗೆ ಮುಂದಿನ ಮೂರು ದಿನಗಳ ಕಾಲ 3 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕೊಪ್ಪಳ, ಬಾಗಲಕೋಟೆ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಒಳನಾಡು ಪ್ರದೇಶಕ್ಕೆ ಅಲರ್ಟ್ ನೀಡಲಾಗಿದೆ. ವೃದ್ಧರು, ಶಿಶುಗಳ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಹೆಚ್ಚು ಬಿಸಿಲಲ್ಲಿ ಓಡಾಡದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 34-22
ಮಂಗಳೂರು: 31-26
ಶಿವಮೊಗ್ಗ: 38-22
ಬೆಳಗಾವಿ: 37-23
ಮೈಸೂರು: 37-22
ಮಂಡ್ಯ: 37-23
ಮಡಿಕೇರಿ: 36-19
ರಾಮನಗರ: 36-22
ಹಾಸನ: 35-20
ಚಾಮರಾಜನಗರ: 38-22
ಚಿಕ್ಕಬಳ್ಳಾಪುರ: 34-21
ಕೋಲಾರ: 34-20
ತುಮಕೂರು: 35-22
ಉಡುಪಿ: 31-26
ಕಾರವಾರ: 32-26
ಚಿಕ್ಕಮಗಳೂರು: 34-19
ದಾವಣಗೆರೆ: 38-23
ಹುಬ್ಬಳ್ಳಿ: 38-23
ಚಿತ್ರದುರ್ಗ: 37-22
ಹಾವೇರಿ: 38-23
ಬಳ್ಳಾರಿ: 39-25
ಗದಗ: 37-24
ಕೊಪ್ಪಳ: 38-24
ರಾಯಚೂರು: 40-27
ಯಾದಗಿರಿ: 39-27
ವಿಜಯಪುರ: 39-28
ಬೀದರ್: 38-28
ಕಲಬುರಗಿ: 39-28
ಬಾಗಲಕೋಟೆ: 39-26