ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಎಂದಿನಂತೆ ಚಳಿ ಇರಲಿದೆ. ಮಧ್ಯಾಹ್ನ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇರಲಿದೆ. ರಾಜ್ಯದ ಕೆಲವೆಡೆ ರಾತ್ರಿ ತುಂತೂರು ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ನಿಂದ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 31-17
ಮಂಗಳೂರು: 32-22
ಶಿವಮೊಗ್ಗ: 35-18
ಬೆಳಗಾವಿ: 33-16
ಮೈಸೂರು: 33-18
ಮಂಡ್ಯ: 33-19
ರಾಮನಗರ: 32-18
ಹಾಸನ: 32-17
ಚಾಮರಾಜನಗರ: 32-19
ಚಿಕ್ಕಬಳ್ಳಾಪುರ: 31-17
ಕೋಲಾರ: 31-17
ತುಮಕೂರು: 32-18
ಉಡುಪಿ: 33-23
ಕಾರವಾರ: 33-22
ಚಿಕ್ಕಮಗಳೂರು: 32-17
ದಾವಣಗೆರೆ: 32-18
ಚಿತ್ರದುರ್ಗ: 33-18
ಹಾವೇರಿ: 34-17
ಬಳ್ಳಾರಿ: 33-17
ಗದಗ: 33-16
ಕೊಪ್ಪಳ: 33-17
ರಾಯಚೂರು: 33-16
ಯಾದಗಿರಿ: 33-16
ವಿಜಯಪುರ: 33-16
ಬೀದರ್: 31-13
ಕಲಬುರಗಿ: 33-15
ಬಾಗಲಕೋಟೆ: 34-16