ರಾಜ್ಯದ ಕೆಲವೆಡೆ ಬಿಸಿಲಿನ ತಾಪ ಹೆಚ್ಚಾಗಿದೆ. ಇದರ ನಡುವೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಇದ್ದ ಮೋಡ ಕವಿದ ವಾತಾವರಣ ಇಂದು ಸಹ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಳಿದಂತೆ ಬೆಳಗಾವಿ, ಮೈಸೂರು, ಮಂಡ್ಯದಲ್ಲಿ ಹಗುರ ಮಳೆಯಾಗುವ ಸಾದ್ಯತೆ ಇದೆ. ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಡಿಕೇರಿ, ಕರಾವಳಿಯ ಭಾಗಗಳಾದ ಮಂಗಳೂರು, ಉಡುಪಿ ಹಾಗೂ ಕಾರವಾರದಲ್ಲೂ ಸಹ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-19
ಮಂಗಳೂರು: 32-25
ಶಿವಮೊಗ್ಗ: 31-21
ಬೆಳಗಾವಿ: 30-20
ಮೈಸೂರು: 30-21
ಮಂಡ್ಯ: 30-21
ಮಡಿಕೇರಿ: 25-17
ರಾಮನಗರ: 30-21
ಹಾಸನ: 28-19
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 27-18
ಕೋಲಾರ: 28-20
ತುಮಕೂರು: 29-20
ಉಡುಪಿ: 32-24
ಕಾರವಾರ: 33-26
ಚಿಕ್ಕಮಗಳೂರು: 28-19
ದಾವಣಗೆರೆ: 33-22
ಹುಬ್ಬಳ್ಳಿ: 33-22
ಚಿತ್ರದುರ್ಗ: 31-21
ಹಾವೇರಿ: 33-22
ಬಳ್ಳಾರಿ: 33-23
ಗದಗ: 33-22
ಕೊಪ್ಪಳ: 33-23
ರಾಯಚೂರು: 34-23
ಯಾದಗಿರಿ: 34-23
ವಿಜಯಪುರ: 34-23
ಬೀದರ್: 32-18
ಕಲಬುರಗಿ: 33-21
ಬಾಗಲಕೋಟೆ: 34-23
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]