ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 33-23
ಮಂಗಳೂರು: 32-26
ಶಿವಮೊಗ್ಗ: 35-23
ಬೆಳಗಾವಿ: 33-22
ಮೈಸೂರು: 37-23
ಮಂಡ್ಯ: 36-23
ಮಡಿಕೇರಿ: 31-21
ರಾಮನಗರ: 35-23
ಹಾಸನ: 33-21
ಚಾಮರಾಜನಗರ: 36-23
ಚಿಕ್ಕಬಳ್ಳಾಪುರ: 34-22
ಕೋಲಾರ: 34-23
ತುಮಕೂರು: 34-23
ಉಡುಪಿ: 33-27
ಕಾರವಾರ: 34-28
ಚಿಕ್ಕಮಗಳೂರು: 31-20
ದಾವಣಗೆರೆ: 34-24
ಹುಬ್ಬಳ್ಳಿ: 36-24
ಚಿತ್ರದುರ್ಗ: 34-23
ಹಾವೇರಿ: 36-24
ಬಳ್ಳಾರಿ: 39-26
ಗದಗ: 36-24
ಕೊಪ್ಪಳ: 38-26
ರಾಯಚೂರು: 41-29
ಯಾದಗಿರಿ: 39-28
ವಿಜಯಪುರ: 39-28
ಬೀದರ್: 38-29
ಕಲಬುರಗಿ: 41-29
ಬಾಗಲಕೋಟೆ: 39-27