ರಾಜ್ಯದಾದ್ಯಂತ ಒಣಹವೆ ಮುಂದುವರಿದಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಬಿಸಿ ವಾತಾವರಣದಿಂದ ಎಚ್ಚರಿಕೆಯಿಂದ ಇರುವಂತೆ ಉತ್ತರ ಕನ್ನಡ ಜಿಲ್ಲೆಗೆ ಅಲರ್ಟ್ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಹಲವು ತಾಲೂಕುಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗಿದ್ದು, ಬಿಸಿ ವಾತಾವರಣ ಹಾಗೂ ತೇವಾಂಶದ ವಾತಾವರಣ ಇರಲಿದೆ. ಮುಂದಿನ 3 ದಿನದ ವರೆಗೆ ಈ ಅಲರ್ಟ್ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-18
ಮಂಗಳೂರು: 33-24
ಶಿವಮೊಗ್ಗ: 34-21
ಬೆಳಗಾವಿ: 33-22
ಮೈಸೂರು: 34-19
ಮಂಡ್ಯ: 34-18
ಮಡಿಕೇರಿ: 33-17
ರಾಮನಗರ: 33-18
ಹಾಸನ: 32-18
ಚಾಮರಾಜನಗರ: 34-18
ಚಿಕ್ಕಬಳ್ಳಾಪುರ: 31-16
ಕೋಲಾರ: 30-16
ತುಮಕೂರು: 32-18
ಉಡುಪಿ: 32-24
ಕಾರವಾರ: 35-25
ಚಿಕ್ಕಮಗಳೂರು: 30-17
ದಾವಣಗೆರೆ: 34-22
ಹುಬ್ಬಳ್ಳಿ: 35-22
ಚಿತ್ರದುರ್ಗ: 32-20
ಹಾವೇರಿ: 35-21
ಬಳ್ಳಾರಿ: 35-21
ಗದಗ: 33-21
ಕೊಪ್ಪಳ: 34-21
ರಾಯಚೂರು: 36-22
ಯಾದಗಿರಿ: 35-22
ವಿಜಯಪುರ: 34-23
ಬೀದರ್: 34-21
ಕಲಬುರಗಿ: 36-21
ಬಾಗಲಕೋಟೆ: 34-23