ರಾಜ್ಯದಲ್ಲಿ ಇನ್ನೂ 2 ದಿನ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ 2 ದಿನಗಳ ಕಾಲ ಮಳೆ ಮುಂದುವರಿಯಲಿದೆ. ಇನ್ನೂ ಬೆಂಗಳೂರಿನಲ್ಲಿ ಮೋಡ ಕವಿದ ಇರಲಿದ್ದು, ಅಲ್ಲಲ್ಲಿ ಹಗುರ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-21
ಮಂಗಳೂರು: 28-25
ಶಿವಮೊಗ್ಗ: 24-22
ಬೆಳಗಾವಿ: 23-21
ಮೈಸೂರು: 26-22
ಮಂಡ್ಯ: 28-22
ಮಡಿಕೇರಿ: 20-17
ರಾಮನಗರ: 28-22
ಹಾಸನ: 23-20
ಚಾಮರಾಜನಗರ: 27-22
ಚಿಕ್ಕಬಳ್ಳಾಪುರ: 27-21
ಕೋಲಾರ: 28-22
ತುಮಕೂರು: 27-21
ಉಡುಪಿ: 27-25
ಕಾರವಾರ: 28-26
ಚಿಕ್ಕಮಗಳೂರು: 22-19
ದಾವಣಗೆರೆ: 26-22
ಹುಬ್ಬಳ್ಳಿ: 24-21
ಚಿತ್ರದುರ್ಗ: 25-21
ಹಾವೇರಿ: 25-22
ಬಳ್ಳಾರಿ: 29-24
ಗದಗ: 26-22
ಕೊಪ್ಪಳ: 27-22
ರಾಯಚೂರು: 29-24
ಯಾದಗಿರಿ: 29-24
ವಿಜಯಪುರ: 26-22
ಬೀದರ್: 26-22
ಕಲಬುರಗಿ: 27-23
ಬಾಗಲಕೋಟೆ: 27-23