ರಾಜ್ಯದ ಹಲವೆಡೆ ಮುಂದಿನ 5 ದಿನಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ವಿಜಯಪುರ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಹಾಸನ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಚಾಮರಾಜನಗರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-22
ಮಂಗಳೂರು: 31-26
ಶಿವಮೊಗ್ಗ: 36-22
ಬೆಳಗಾವಿ: 35-21
ಮೈಸೂರು: 32-22
ಮಂಡ್ಯ: 31-22
ಮಡಿಕೇರಿ: 29-19
ರಾಮನಗರ: 31-22
ಹಾಸನ: 28-20
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 28-20
ಕೋಲಾರ: 28-21
ತುಮಕೂರು: 31-21
ಉಡುಪಿ: 31-26
ಕಾರವಾರ: 32-25
ಚಿಕ್ಕಮಗಳೂರು: 30-19
ದಾವಣಗೆರೆ: 36-23
ಹುಬ್ಬಳ್ಳಿ: 37-22
ಚಿತ್ರದುರ್ಗ: 34-23
ಹಾವೇರಿ: 37-22
ಬಳ್ಳಾರಿ: 37-26
ಗದಗ: 36-23
ಕೊಪ್ಪಳ: 36-24
ರಾಯಚೂರು: 36-27
ಯಾದಗಿರಿ: 36-26
ವಿಜಯಪುರ: 37-24
ಬೀದರ್: 34-24
ಕಲಬುರಗಿ: 36-26
ಬಾಗಲಕೋಟೆ: 37-24