ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಮುಂಜಾನೆ ತಂಪಾದ ವಾತಾವಾರಣ ಇರಲಿದ್ದು, ಮೈ ಕೊರೆಯುವ ಚಳಿ ಇರಲಿದೆ.
ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಮಂಗಳೂರು, ಉಡುಪಿ ಕಾರವಾರ ನಗರಗಳಲ್ಲಿ ಹೆಚ್ಚಾಗಿ ಬಿಸಿಲಿನ ವಾತಾವರಣ ಇರಲಿದೆ. ಇನ್ನೂ ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂಜಾನೆ ಎಂದಿನಂತೆ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-17
ಮಂಗಳೂರು: 32-22
ಶಿವಮೊಗ್ಗ: 30-18
ಬೆಳಗಾವಿ: 29-17
ಮೈಸೂರು: 27-16
ಮಂಡ್ಯ: 27-17
ಮಡಿಕೇರಿ: 26-13
ರಾಮನಗರ: 27-18
ಹಾಸನ: 27-16
ಚಾಮರಾಜನಗರ: 26-17
ಚಿಕ್ಕಬಳ್ಳಾಪುರ: 21-16
ಕೋಲಾರ: 22-18
ತುಮಕೂರು: 26-17
ಉಡುಪಿ: 32-22
ಕಾರವಾರ: 33-22
ಚಿಕ್ಕಮಗಳೂರು: 26-15
ದಾವಣಗೆರೆ: 28-19
ಹುಬ್ಬಳ್ಳಿ: 29-18
ಚಿತ್ರದುರ್ಗ: 27-18
ಹಾವೇರಿ: 30-18
ಬಳ್ಳಾರಿ: 28-20
ಗದಗ: 28-19
ಕೊಪ್ಪಳ: 28-20
ರಾಯಚೂರು: 27-20
ಯಾದಗಿರಿ: 29-21
ವಿಜಯಪುರ: 29-19
ಬೀದರ್: 28-17
ಕಲಬುರಗಿ: 30-20
ಬಾಗಲಕೋಟೆ: 30-20