ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್ 24ನೇ ತಾರೀಖಿನವರೆಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗುಡುಗು ಸಹಿತ ಮಳೆಯಾಗಲಿದ್ದು, ಜೊತೆಗೆ ಉತ್ತರ ಒಳನಾಡಿನಲ್ಲೂ ಹವಾಮಾನ ವೈಪರಿತ್ಯವಾದ ಹಿನ್ನೆಲೆ ಮೂರು ದಿನ ಮಳೆಯಾಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 31-20
ಮಂಗಳೂರು: 32-26
ಶಿವಮೊಗ್ಗ: 34-22
ಬೆಳಗಾವಿ: 35-21
ಮೈಸೂರು: 33-22
ಮಂಡ್ಯ: 34-22
ರಾಮನಗರ: 34-19
ಹಾಸನ: 31-19
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 31-19
ಕೋಲಾರ: 32-21
ತುಮಕೂರು: 33-21
ಉಡುಪಿ: 33-27
ಕಾರವಾರ: 32-27
ಚಿಕ್ಕಮಗಳೂರು: 29-19
ದಾವಣಗೆರೆ: 35-22
ಚಿತ್ರದುರ್ಗ: 34-22
ಹಾವೇರಿ: 35-23
ಬಳ್ಳಾರಿ: 37-24
ಗದಗ: 36-22
ಕೊಪ್ಪಳ: 36-23
ರಾಯಚೂರು: 38-25
ಯಾದಗಿರಿ: 38-25
ವಿಜಯಪುರ: 37-25
ಬೀದರ್: 37-23
ಕಲಬುರಗಿ: 39-26
ಬಾಗಲಕೋಟೆ: 38-24