ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಹಲವು ಭಾಗಗಳಲ್ಲಿ ಚಳಿಯ ಅಬ್ಬರ ಹೆಚ್ಚಾಗಿದೆ. ವಿಜಯಪುರ, ಬೀದರ್, ಶಿವಮೊಗ್ಗ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಿರಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ಜನರಿಗೆ ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ನೀರು ಬಳಸುವುದು ಹಾಗೂ ಮುಂಜಾನೆ ಮತ್ತು ಸಂಜೆ ವಾಕಿಂಗ್ಗೆ ತೆರಳದಂತೆ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 27-16
ಮಂಗಳೂರು: 32-22
ಶಿವಮೊಗ್ಗ: 31-15
ಬೆಳಗಾವಿ: 29-16
ಮೈಸೂರು: 30-16
ಮಂಡ್ಯ: 31-16
ಮಡಿಕೇರಿ: 28-14
ರಾಮನಗರ: 29-15
ಹಾಸನ: 27-13
ಚಾಮರಾಜನಗರ: 30-14
ಚಿಕ್ಕಬಳ್ಳಾಪುರ: 26-14
ಕೋಲಾರ: 26-14
ತುಮಕೂರು: 27-14
ಉಡುಪಿ: 32-21
ಕಾರವಾರ: 33-20
ಚಿಕ್ಕಮಗಳೂರು: 26-13
ದಾವಣಗೆರೆ: 31-15
ಹುಬ್ಬಳ್ಳಿ: 30-13
ಚಿತ್ರದುರ್ಗ: 28-15
ಹಾವೇರಿ: 31-15
ಬಳ್ಳಾರಿ: 29-14
ಗದಗ: 29-13
ಕೊಪ್ಪಳ: 29-14
ರಾಯಚೂರು: 31-16
ಯಾದಗಿರಿ: 31-16
ವಿಜಯಪುರ: 29-14
ಬೀದರ್: 28-12
ಕಲಬುರಗಿ: 31-14
ಬಾಗಲಕೋಟೆ: 30-14




