ಕರಾವಳಿ ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿಂದ ಹೈರಾಣಾಗಿರುವ ಜನರಿಗೆ ಮಳೆಯ ಸಿಂಚನವಾಗಲಿದೆ. ಮಲೆನಾಡಲ್ಲಿಯೂ 2-3 ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಶ್ರೀಲಂಕಾ ಆಗ್ನೇಯ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಪಶ್ಚಿಮಾಭಿಮುಖವಾಗಿ ಚಲಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 31-18
ಮಂಗಳೂರು: 32-24
ಶಿವಮೊಗ್ಗ: 33-21
ಬೆಳಗಾವಿ: 33-20
ಮೈಸೂರು: 32-19

ಮಂಡ್ಯ: 33-19
ಮಡಿಕೇರಿ: 30-18
ರಾಮನಗರ: 32-19
ಹಾಸನ: 31-18
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 31-18

ಕೋಲಾರ: 30-17
ತುಮಕೂರು: 32-18
ಉಡುಪಿ: 32-24
ಕಾರವಾರ: 29-24
ಚಿಕ್ಕಮಗಳೂರು: 29-18
ದಾವಣಗೆರೆ: 33-21

ಹುಬ್ಬಳ್ಳಿ: 33-21
ಚಿತ್ರದುರ್ಗ: 32-20
ಹಾವೇರಿ: 34-21
ಬಳ್ಳಾರಿ: 33-20
ಗದಗ: 33-21
ಕೊಪ್ಪಳ: 33-21

ರಾಯಚೂರು: 34-21
ಯಾದಗಿರಿ: 33-21
ವಿಜಯಪುರ: 33-21
ಬೀದರ್: 32-20
ಕಲಬುರಗಿ: 33-21
ಬಾಗಲಕೋಟೆ: 32-21

