ರಾಜ್ಯದಲ್ಲಿ ಮುಂದಿನ ಮೂರು ದಿನ ತೀವ್ರ ಶೀತದ ಅಲೆಗಳು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲಬುರಗಿ ಹಾಗೂ ವಿಜಯಪುರದಲ್ಲಿ ತೀವ್ರ ಶೀತದ ಅಲೆಗಳು ಬೀಸಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಡಿ.21ರಿಂದ ಮತ್ತೆ ಮಳೆಯಾಗುವ ಸಂಭವವಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನನಗರಕ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಸನ ಮತ್ತು ವಿಜಯನಗರದಲ್ಲಿ ಡಿ.21 ರಿಂದ ಡಿ.23ರವರೆಗೆ ಮಳೆಯಾಗುವ ಸಂಭವವಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-20
ಮಂಗಳೂರು: 29-23
ಶಿವಮೊಗ್ಗ: 29-17
ಬೆಳಗಾವಿ: 28-17
ಮೈಸೂರು: 29-19
ಮಂಡ್ಯ: 28-19
ಮಡಿಕೇರಿ: 29-18
ರಾಮನಗರ: 28-21
ಹಾಸನ: 27-17
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 26-19
ಕೋಲಾರ: 26-20
ತುಮಕೂರು: 27-19
ಉಡುಪಿ: 29-23
ಕಾರವಾರ: 30-21
ಚಿಕ್ಕಮಗಳೂರು: 26-16
ದಾವಣಗೆರೆ: 29-18
ಹುಬ್ಬಳ್ಳಿ: 29-18
ಚಿತ್ರದುರ್ಗ: 28-19
ಹಾವೇರಿ: 29-18
ಬಳ್ಳಾರಿ: 31-21
ಗದಗ: 29-18
ಕೊಪ್ಪಳ: 30-19
ರಾಯಚೂರು: 31-22
ಯಾದಗಿರಿ: 31-20
ವಿಜಯಪುರ: 31-18
ಬೀದರ್: 29-18
ಕಲಬುರಗಿ: 31-19
ಬಾಗಲಕೋಟೆ: 31-19