ಇಂದಿನಿಂದ ಮಳೆ ಪ್ರಮಾಣ ಕಡಿಮೆಯಾಗಿ ಚಳಿಯ ವಾತಾವರಣ ಮುಂದುವರಿಯಲಿದೆ. ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ. ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ ನಗರಗಳಲ್ಲಿ ಬಿಸಿಲಿನ ವಾತಾವರಣ ಹೆಚ್ಚಲಿದೆ. ಉಳಿದಂತೆ ರಾಜ್ಯಾದ್ಯಂತ ಮುಂಜಾನೆ ಹಾಗೂ ರಾತ್ರಿಯ ವೇಳೆ ಚಳಿಯ ವಾತಾವರಣ ಏರಿಕೆಯಾಗಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 32-23
ಶಿವಮೊಗ್ಗ: 31-16
ಬೆಳಗಾವಿ: 30-15
ಮೈಸೂರು: 28-15
ಮಂಡ್ಯ: 29-14
ಮಡಿಕೇರಿ: 27-13
ರಾಮನಗರ: 29-14
ಹಾಸನ: 28-14
ಚಾಮರಾಜನಗರ: 28-16
ಚಿಕ್ಕಬಳ್ಳಾಪುರ: 26-12
ಕೋಲಾರ: 27-13
ತುಮಕೂರು: 28-14
ಉಡುಪಿ: 33-22
ಕಾರವಾರ: 33-22
ಚಿಕ್ಕಮಗಳೂರು: 28-13
ದಾವಣಗೆರೆ: 31-16
ಹುಬ್ಬಳ್ಳಿ: 32-16
ಚಿತ್ರದುರ್ಗ: 29-16
ಹಾವೇರಿ: 31-15
ಬಳ್ಳಾರಿ: 31-16
ಗದಗ: 31-16
ಕೊಪ್ಪಳ: 31-17
ರಾಯಚೂರು: 32-16
ಯಾದಗಿರಿ: 33-17
ವಿಜಯಪುರ: 32-17
ಬೀದರ್: 29-14
ಕಲಬುರಗಿ: 32-16
ಬಾಗಲಕೋಟೆ: 33-19