ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಧಗೆ ಹೆಚ್ಚುತ್ತಿರುವ ನಡುವೆಯೂ ಸಮುದ್ರದ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವೆಡೆ ಮಾರ್ಚ್ 18ರ ವರೆಗೆ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯ ಕೆಲವು ಕಡೆ ಮಾರ್ಚ್ 16 ರಿಂದ ಮಾರ್ಚ್ 18ರ ವರೆಗೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 32-18
ಮಂಗಳೂರು: 32-25
ಶಿವಮೊಗ್ಗ: 33-21
ಬೆಳಗಾವಿ: 32-21
ಮೈಸೂರು: 33-19
ಮಂಡ್ಯ: 34-20
ಮಡಿಕೇರಿ: 27-16
ರಾಮನಗರ: 34-20
ಹಾಸನ: 32-18
ಚಾಮರಾಜನಗರ: 34-20
ಚಿಕ್ಕಬಳ್ಳಾಪುರ: 32-18
ಕೋಲಾರ: 33-18
ತುಮಕೂರು: 33-19
ಉಡುಪಿ: 33-26
ಕಾರವಾರ: 32-26
ಚಿಕ್ಕಮಗಳೂರು: 30-18
ದಾವಣಗೆರೆ: 34-21
ಹುಬ್ಬಳ್ಳಿ: 34-21
ಚಿತ್ರದುರ್ಗ: 34-21
ಹಾವೇರಿ: 33-21
ಬಳ್ಳಾರಿ: 36-22
ಗದಗ: 34-21
ಕೊಪ್ಪಳ: 34-22
ರಾಯಚೂರು: 36-23
ಯಾದಗಿರಿ: 36-23
ವಿಜಯಪುರ: 35-22
ಬೀದರ್: 34-21
ಕಲಬುರಗಿ: 36-23
ಬಾಗಲಕೋಟೆ: 36-22