ಮಳೆಗಾಲ ಮುಗಿದು ಚಳಿ ಆರಂಭಗೊಂಡರೂ ಸಹ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಕೆಲವು ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡಿ.12ರವರೆಗೆ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ವರದಿ ಮಾಡಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-21
ಮಂಗಳೂರು: 30-24
ಶಿವಮೊಗ್ಗ: 28-20
ಬೆಳಗಾವಿ: 28-22
ಮೈಸೂರು: 29-19
ಮಂಡ್ಯ: 29-20
ಮಡಿಕೇರಿ: 28-18
ರಾಮನಗರ: 29-21
ಹಾಸನ: 27-18
ಚಾಮರಾಜನಗರ: 30-20
ಚಿಕ್ಕಬಳ್ಳಾಪುರ: 27-20
ಕೋಲಾರ: 27-21
ತುಮಕೂರು: 27-20
ಉಡುಪಿ: 29-24
ಕಾರವಾರ: 31-24
ಚಿಕ್ಕಮಗಳೂರು: 26-18
ದಾವಣಗೆರೆ: 29-21
ಹುಬ್ಬಳ್ಳಿ: 28-20
ಚಿತ್ರದುರ್ಗ: 27-21
ಹಾವೇರಿ: 29-21
ಬಳ್ಳಾರಿ: 28-21
ಗದಗ: 28-21
ಕೊಪ್ಪಳ: 28-21
ರಾಯಚೂರು: 30-23
ಯಾದಗಿರಿ: 29-23
ವಿಜಯಪುರ: 31-23
ಬೀದರ್: 29-21
ಕಲಬುರಗಿ: 30-22
ಬಾಗಲಕೋಟೆ: 30-22