ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಮುಂದಿನ 4 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದ ಕರಾವಳಿಯಲ್ಲಿ ಮ್ಯಾಂಡೌಸ್ ಚಂಡಮಾರುತ ಅಬ್ಬರದ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ದಕ್ಷಿಣ ಒಳನಾಡಿಗೆ ಇಂದಿನಿಂದ 4 ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ ಹಾಗೂ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿರಲಿದೆ. ಗರಿಷ್ಠ ಉಷ್ಣಾಂಶ 21 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 21-16
ಮಂಗಳೂರು: 30-23
ಶಿವಮೊಗ್ಗ: 27-18
ಬೆಳಗಾವಿ: 29-16
ಮೈಸೂರು: 22-17
ಮಂಡ್ಯ: 22-17
ಮಡಿಕೇರಿ: 21-14
ರಾಮನಗರ: 22-17
ಹಾಸನ: 23-17
ಚಾಮರಾಜನಗರ: 20-17
ಚಿಕ್ಕಬಳ್ಳಾಪುರ: 19-14
ಕೋಲಾರ: 19-17
ತುಮಕೂರು: 23-16
ಉಡುಪಿ: 32-23
ಕಾರವಾರ: 32-22
ಚಿಕ್ಕಮಗಳೂರು: 23-16
ದಾವಣಗೆರೆ: 27-18
ಹುಬ್ಬಳ್ಳಿ: 29-18
ಚಿತ್ರದುರ್ಗ: 25-18
ಹಾವೇರಿ: 29-19
ಬಳ್ಳಾರಿ: 27-20
ಗದಗ: 28-18
ಕೊಪ್ಪಳ: 28-20
ರಾಯಚೂರು: 29-21
ಯಾದಗಿರಿ: 31-21
ವಿಜಯಪುರ: 29-18
ಬೀದರ್: 27-16
ಕಲಬುರಗಿ: 30-18
ಬಾಗಲಕೋಟೆ: 30-19