ಹಲವು ಜಿಲ್ಲೆಗಳಲ್ಲಿ ಮುಂಜಾನೆ ಸ್ವಲ್ಪ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ನಂತರ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯಕ್ಕೆ ಮತ್ತೆ ಮತ್ತೆ ಮಳೆ ಕಂಟಕ ಶುರುವಾಗಲಿದೆ. ನವೆಂಬರ್ ಮೊದಲ ವಾರದಲ್ಲಿ ಮತ್ತೆ ವರುಣನ ಅಬ್ಬರ ಸಾಧ್ಯತೆಯಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆ ಅಬ್ಬರಿಸುವ ಸಾಧ್ಯತೆಯಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 23-16
ಮಂಗಳೂರು: 32-24
ಶಿವಮೊಗ್ಗ: 31-20
ಬೆಳಗಾವಿ: 29-17
ಮೈಸೂರು: 27-19
ಮಂಡ್ಯ: 27-20
ಮಡಿಕೇರಿ: 26-16
ರಾಮನಗರ: 25-20
ಹಾಸನ: 27-18
ಚಾಮರಾಜನಗರ: 26-20
ಚಿಕ್ಕಬಳ್ಳಾಪುರ: 22-19
ಕೋಲಾರ: 23-19
ತುಮಕೂರು: 25-19
ಉಡುಪಿ: 33-24
ಕಾರವಾರ: 33-24
ಚಿಕ್ಕಮಗಳೂರು: 27-18
ದಾವಣಗೆರೆ: 30-20
ಚಿತ್ರದುರ್ಗ: 28-20
ಹಾವೇರಿ: 31-19
ಬಳ್ಳಾರಿ: 29-21
ಗದಗ: 31-17
ಕೊಪ್ಪಳ: 31-19
ರಾಯಚೂರು: 29-21
ಯಾದಗಿರಿ: 31-22
ವಿಜಯಪುರ: 31-19
ಬೀದರ್: 28-19
ಕಲಬುರಗಿ: 31-20
ಬಾಗಲಕೋಟೆ: 32-20