ರಾಜ್ಯದಲ್ಲಿ ದಿನಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಹೀಟ್ ವೇವ್ ಅಲರ್ಟ್ ನೀಡಿದ್ದು, ಮುಂದಿನ 2 ದಿನಗಳ ಕಾಲ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಇದರೊಂದಿಗೆ ಮುಂದಿನ ಎರಡು ದಿನಗಳ ಕಾಲ 3 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕೊಪ್ಪಳ, ಬಾಗಲಕೋಟೆ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಒಳನಾಡು ಪ್ರದೇಶಕ್ಕೆ ಅಲರ್ಟ್ ನೀಡಲಾಗಿದೆ. ವೃದ್ಧರು, ಶಿಶುಗಳ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಹೆಚ್ಚು ಬಿಸಿಲಲ್ಲಿ ಓಡಾಡದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
- Advertisement 2-
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
- Advertisement 3-
- Advertisement 4-
ನಗರಗಳ ಹವಾಮಾನ ವರದಿ:
ಬೆಂಗಳೂರು: 35-23
ಮಂಗಳೂರು: 32-26
ಶಿವಮೊಗ್ಗ: 38-23
ಬೆಳಗಾವಿ: 37-23
ಮೈಸೂರು: 38-23
ಮಂಡ್ಯ: 38-23
ಮಡಿಕೇರಿ: 35-21
ರಾಮನಗರ: 37-23
ಹಾಸನ: 36-21
ಚಾಮರಾಜನಗರ: 38-23
ಚಿಕ್ಕಬಳ್ಳಾಪುರ: 34-22
ಕೋಲಾರ: 34-22
ತುಮಕೂರು: 36-22
ಉಡುಪಿ: 32-26
ಕಾರವಾರ: 32-26
ಚಿಕ್ಕಮಗಳೂರು: 34-19
ದಾವಣಗೆರೆ: 38-24
ಹುಬ್ಬಳ್ಳಿ: 38-23
ಚಿತ್ರದುರ್ಗ: 37-23
ಹಾವೇರಿ: 38-23
ಬಳ್ಳಾರಿ: 40-26
ಗದಗ: 38-24
ಕೊಪ್ಪಳ: 38-25
ರಾಯಚೂರು: 40-29
ಯಾದಗಿರಿ: 39-28
ವಿಜಯಪುರ: 38-28
ಬೀದರ್: 39-28
ಕಲಬುರಗಿ: 40-28
ಬಾಗಲಕೋಟೆ: 39-27