ಬೆಂಗಳೂರು: ಸಮ್ಮಿಶ್ರ ಸರ್ಕಾರದ ಜಂಟಿ ಅಧಿವೇಶನ ಮೊದಲ ದಿನವೇ ಮಾನ್ಯ ಎಲ್ಲಾ ಸದಸ್ಯರುಗಳಿಗೆ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಅವರು ಸುಗಮ ಅಧಿವೇಶನದ ನಡೆಸುವ ಸೂಚನೆ ನೀಡಿದ್ದಾರೆ.
ಸರ್ಕಾರದ ಜಂಟಿ ಅಧಿವೇಶನ ಕುರಿತು ಗವರ್ನರ್ ಭಾಷಣ ಮುಗಿಯುತ್ತಿದ್ದಂತೆ ಎಲ್ಲಾ ಶಾಸಕರು ಆ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳದೆ ಓಡಾಡುತ್ತಿದ್ದರು. ಇದನ್ನು ನೋಡಿದ ಸ್ಪೀಕರ್ ರಮೇಶ್ ಕುಮಾರ್ ಫುಲ್ ಕ್ಲಾಸ್ ತೆಗೆದುಕೊಂಡರು
ಶಾಸಕರು ತಮ್ಮ ತಮ್ಮ ಸ್ಥಳಗಳಿಗೆ ಹೋಗುವಂತೆ ಮೊದಲು ಮನವಿ ಮಾಡಿದರು. ಆದರೆ ಸ್ಪೀಕರ್ ಮಾತನ್ನು ಯಾರು ಗಮನಿಸದ ವೇಳೆ ಶಾಸಕರ ಹೆಸರು ಕರೆದ ಸ್ಪೀಕರ್ ಅವರು ರಹೀಂಖಾನ್, ಹ್ಯಾರಿಸ್, ರಾಜೇಗೌಡ ಹೆಸರು ಕೂಗಿ ನಿಮ್ಮ ಸ್ಥಾನದಲ್ಲಿ ನೀವು ಕುಳಿತು ಕೊಳ್ಳಿ ಎಂದು ಸೂಚಿಸಿದರು. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಇದನ್ನು ಓದಿ: ಅರೇ, ಹೊರಟ್ಟಿಯವ್ರೇ ಸೈಡಿಗೆ ಬನ್ರಿ: ಸ್ಪೀಕರ್ ರಮೇಶ್ ಕುಮಾರ್
ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಮಾತನಾಡಿದ ಸ್ಪೀಕರ್, ಸದನದ ನಿಯಮಾವಳಿಗಳು ಕೆಲವು ಬದಲಾವಣೆ ಆಗಿದೆ. ಈ ಕುರಿತು ಮಾಹಿತಿ ನೀಡಲಾಗಿದೆ. ಈ ಬಾರಿ ಸಭೆಯಲ್ಲಿ ಸುಮಾರು 100 ಹೊಸ ಶಾಸಕರಿದ್ದು ಅವರು ಸೇರಿದಂತೆ ಎಲ್ಲರಿಗೂ ಮೊದಲು ಮನವಿ ಮಾಡುತ್ತೇನೆ, ಬಳಿಕ ಸೂಚನೆ ನೀಡುತ್ತೇನೆ. ಸದನ ಕಲಾಪ ಆರಂಭದ ವೇಳೆಗೆ ಶಾಸಕರು ಮುಖ್ಯಮಂತ್ರಿಗಳಿಗೆ ಯಾವುದೇ ಅರ್ಜಿಗಳನ್ನು ಸದನದಲ್ಲಿ ನೀಡುವಂತಿಲ್ಲ. ಇದರಿಂದ ಸದನದ ಚರ್ಚೆ ಬಗ್ಗೆ ಸಿಎಂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅದ್ದರಿಂದ ಶಾಸಕರಿಗೆ ಅಂತಹ ತುರ್ತು ಕಾರ್ಯವಿದ್ದರೆ ಶಾಸಕರು ಸಿಎಂ ಅವರನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಬಹುದು. ಇದಕ್ಕೆ ನಾನು ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಒಬ್ಬ ಶಾಸಕನಾಗಿ ಇಂತಹ ಕಾರ್ಯವನ್ನು ನಾನು ಎಂದು ಮಾಡಿಲ್ಲ. ಅದ್ದರಿಂದ ಇದನ್ನು ನಾನು ಹೇಳುವ ನೈತಿಕ ಆರ್ಹತೆ ಹೊಂದಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮುಜುಗರ ಆಗಿದ್ದ ಸನ್ನಿವೇಶ ಗಮನಿಸಿದ್ದೇನೆ ಅದ್ದರಿಂದ ಯಾವುದೇ ಕಾರಣಕ್ಕೂ ಸದನಕ್ಕೆ ತೊಂದರೆ ನೀಡಬಾರದು ಎಂದು ಎಲ್ಲ ಶಾಸಕರಿಗೆ ಸೂಚನೆ ನೀಡಿದರು. ಇದನ್ನು ಓದಿ: ಕರ್ನಾಟಕ ರಾಜಕೀಯದಲ್ಲಿ ಹೊಸ ದಾಖಲೆ ಬರೆದ ಬಿಎಸ್ವೈ!