‘ಚಿಣಿಮಿಣಿ’ ಉಲ್ಲೇಖಿಸಿದ ನಾರಾಯಣಸ್ವಾಮಿ – ನಗೆಗಡಲಲ್ಲಿ ತೇಲಿದ ಸದಸ್ಯರು

Public TV
1 Min Read
c naryanaswamy congress mla

ಬೆಂಗಳೂರು: ಒಂದೊಂದು ಸಾರಿ ಒಂದೊಂದು ಪದಗಳು ಸಿಕ್ಕಾಪಟ್ಟೆ ಹೆಸರು ಮಾಡಿ ಬಿಡುತ್ತವೆ. ಆ ಹೆಸರು ಮಾಡಿದ ಪದಗಳು ಹೊಸ ಹೊಸ ಪದಗಳ ಸೃಷ್ಟಿಗೂ ಕಾರಣವಾಗಿ ಬಿಡುತ್ತವೆ. ಇತ್ತೀಚೆಗೆ ಫೇಮಸ್ ಆಗಿದ್ದ ಪದದಿಂದ ಈಗ ಹೊಸ ಪದವೊಂದು ಸೃಷ್ಟಿಯಾಗಿ ಪ್ರಚಾರ ಆಗ್ತಿದೆ. ಈ ಹೊಸ ಪದ ಸೃಷ್ಟಿಯಾಗಿದ್ದು, ವಿಧಾನ ಪರಿಷತ್ ನ ಕಲಾಪದಲ್ಲಿ.

ಕಲಾಪದಲ್ಲಿ ಮಂಗಳೂರು ಬಾಂಬ್ ಪ್ರಕರಣವನ್ನು ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಪ್ರಸ್ತಾಪ ಮಾಡಿದ್ರು. ವಿಮಾನ ನಿಲ್ದಾಣದಲ್ಲಿ ಇರಿಸಲಾಗಿದ್ದು ಬಾಂಬ್ ಮಾದರಿಯ ವಸ್ತುವಿನಲ್ಲಿ ‘ಚಿಣಿಮಿಣಿ’ ಪದಾರ್ಥ ಇತ್ತು ಎಂದ ನಾರಾಯಣಸ್ವಾಮಿ ಚರ್ಚೆ ವೇಳೆ ಹೇಳಿದ್ರು. ಈ ಪದ ಕೇಳಿದ ಕೂಡಲೇ ಸದನ ನಗೆಗಡಲಲ್ಲಿ ತೇಲಿತು.

Mangaluru Airport Live Bomb 1 copy

ಅಷ್ಟಕ್ಕೂ ಅ ಹೊಸ ಪದ ಸೃಷ್ಟಿ ಆಗಲು ಕೋರ್ಟ್ ಆದೇಶವೇ ಕಾರಣ. ಭಾರೀ ಟ್ರೋಲ್ ಆಗುತ್ತಿದ್ದ ಆ ಪದವನ್ನು ಬಳಕೆ ಮಾಡಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಸದನದಲ್ಲೂ ಕೂಡಾ ಆ ಪದವನ್ನು ಬಳಸಲು ನಾರಾಯಣಸ್ವಾಮಿ ಹಿಂದೇಟು ಹಾಕಿದರು. ಆ ಪದಕ್ಕೆ ಬದಲಾಗಿ ಚಿಣಿಮಿಣಿ ರೀತಿಯ ಪದಾರ್ಥ ಇತ್ತು ಅಂತ ಬಳಕೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *