ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸಂಜೆ ವೇಳೆ ಗಾಳಿ ಗಂಟೆಗೆ 60-70 ಕಿ.ಮೀ . ವೇಗದಲ್ಲಿ ಬೀಸಲಿದೆ. ಇಂದಿನಿಂದ ಡಿ.3 ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 31-24
ಶಿವಮೊಗ್ಗ: 29-18
ಬೆಳಗಾವಿ: 28-17
ಮೈಸೂರು: 26-20
ಮಂಡ್ಯ: 27-20
ಮಡಿಕೇರಿ: 27-14
ರಾಮನಗರ: 26-20
ಹಾಸನ: 24-18
ಚಾಮರಾಜನಗರ: 26-19
ಚಿಕ್ಕಬಳ್ಳಾಪುರ: 24-18
ಕೋಲಾರ: 24-18
ತುಮಕೂರು: 25-18
ಉಡುಪಿ: 32-24
ಕಾರವಾರ: 32-23
ಚಿಕ್ಕಮಗಳೂರು: 24-16
ದಾವಣಗೆರೆ: 30-18
ಹುಬ್ಬಳ್ಳಿ: 29-17
ಚಿತ್ರದುರ್ಗ: 27-18
ಹಾವೇರಿ: 30-18
ಬಳ್ಳಾರಿ: 29-18
ಗದಗ: 28-16
ಕೊಪ್ಪಳ: 28-17
ರಾಯಚೂರು: 30-18
ಯಾದಗಿರಿ: 30-18
ವಿಜಯಪುರ: 29-16
ಬೀದರ್: 28-14
ಕಲಬುರಗಿ: 30-17
ಬಾಗಲಕೋಟೆ: 29-17