ಸಿಲಿಕಾನ್ ಸಿಟಿಯಲ್ಲಿ ಊಟಿಯ ಕೂಲ್ ಕೂಲ್ ವಾತಾವರಣ ಮಾಯವಾಗಿದ್ದು, ಬಿಸಿಲು ತಲೆ ಎತ್ತಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಮಾಂಡಸ್ ಚಂಡಮಾರುತ ಎಫೆಕ್ಟ್ನಿಂದಾಗಿ ಅಬ್ಬರಿಸಿದ್ದ ವರುಣ ರಾಜ್ಯಕ್ಕೆ ಬಿಡುವು ನೀಡಿದೆ. ಮಡಿಕೇರಿ, ಉಡುಪಿ ಹಾಗೂ ಕಾರವಾರ ಬಿಸಿಲು ಹಾಗೂ ಕೊಂಚ ಮೋಡ ಕವಿದ ವಾತಾವರಣ ಇರಲಿದೆ.
ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಷ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 34-24
ಶಿವಮೊಗ್ಗ: 32-18
ಬೆಳಗಾವಿ: 31-19
ಮೈಸೂರು: 29-17
ಮಂಡ್ಯ: 29-18
ಮಡಿಕೇರಿ: 27-16
ರಾಮನಗರ: 29-18
ಹಾಸನ: 28-16
ಚಾಮರಾಜನಗರ: 29-17
ಚಿಕ್ಕಬಳ್ಳಾಪುರ: 26-15
ಕೋಲಾರ: 27-17
ತುಮಕೂರು: 29-17
ಉಡುಪಿ: 33-23
ಕಾರವಾರ: 34-24
ಚಿಕ್ಕಮಗಳೂರು: 28-16
ದಾವಣಗೆರೆ: 31-19
ಹುಬ್ಬಳ್ಳಿ: 32-19
ಚಿತ್ರದುರ್ಗ: 29-18
ಹಾವೇರಿ: 32-19
ಬಳ್ಳಾರಿ: 31-19
ಗದಗ: 31-19
ಕೊಪ್ಪಳ: 31-20
ರಾಯಚೂರು: 32-20
ಯಾದಗಿರಿ: 33-20
ವಿಜಯಪುರ: 32-20
ಬೀದರ್: 31-18
ಕಲಬುರಗಿ: 33-19
ಬಾಗಲಕೋಟೆ: 32-20