ರಾಜ್ಯದಲ್ಲಿ ಬಿರು ಬಿಸಿಲಿನ ನಡುವೆಯು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೇ 12ರ ಬಳಿಕ ರಾಜ್ಯಾದ್ಯಂತ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಅದರಂತೆ ಇಂದೂ ಸಹ ರಾಜ್ಯದ ವಿವಿಧ ಜಿಲ್ಲೆಗಳಲಿ ಬಿಸಿಲು ಮಳೆಯ ಆಟ ಮುಂದುವರಿಲಿದೆ. ದಕ್ಷಿಣ ಕನ್ನಡ, ಬೆಳಗಾವಿ, ಮಡಿಕೇರಿ, ಚಿತ್ರದುರ್ಗ, ಗದಗ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-22
ಮಂಗಳೂರು: 31-24
ಶಿವಮೊಗ್ಗ: 31-22
ಬೆಳಗಾವಿ: 32-22
ಮೈಸೂರು: 34-22
ಮಂಡ್ಯ: 33-22
ಮಡಿಕೇರಿ: 29-19
ರಾಮನಗರ: 32-22
ಹಾಸನ: 29-19
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 31-22
ಕೋಲಾರ: 31-23
ತುಮಕೂರು: 31-22
ಉಡುಪಿ: 31-25
ಕಾರವಾರ: 33-28
ಚಿಕ್ಕಮಗಳೂರು: 27-18
ದಾವಣಗೆರೆ: 32-23
ಹುಬ್ಬಳ್ಳಿ: 34-23
ಚಿತ್ರದುರ್ಗ: 31-22
ಹಾವೇರಿ: 33-23
ಬಳ್ಳಾರಿ: 36-25
ಗದಗ: 33-23
ಕೊಪ್ಪಳ: 34-24
ರಾಯಚೂರು: 38-28
ಯಾದಗಿರಿ: 37-28
ವಿಜಯಪುರ: 37-24
ಬೀದರ್: 36-27
ಕಲಬುರಗಿ: 38-28
ಬಾಗಲಕೋಟೆ: 36-24