ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಇಂದೂ ಮಂಜು ಮುಸುಕಿದ ವಾತಾವರಣ ಇರಲಿದ್ದು, ಇನ್ನೆರಡು ದಿನ ವಿಪರೀತ ಚಳಿ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಧ್ಯಕ್ಕೆ ಮಳೆಯ ವಾತಾವರಣ ಮರೆಯಾಗಿದ್ದು, ಒಣ ಹವೆಯಿರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 26-11
ಮಂಗಳೂರು: 31-23
ಶಿವಮೊಗ್ಗ: 30-17
ಬೆಳಗಾವಿ: 28-18
ಮೈಸೂರು: 30-18
ಮಂಡ್ಯ: 30-17
ಮಡಿಕೇರಿ: 28-16
ರಾಮನಗರ: 28-17
ಹಾಸನ: 27-16
ಚಾಮರಾಜನಗರ: 30-17
ಚಿಕ್ಕಬಳ್ಳಾಪುರ: 25-15
ಕೋಲಾರ: 24-15
ತುಮಕೂರು: 26-16
ಉಡುಪಿ: 31-22
ಕಾರವಾರ: 33-23
ಚಿಕ್ಕಮಗಳೂರು: 26-14
ದಾವಣಗೆರೆ: 29-17
ಹುಬ್ಬಳ್ಳಿ: 29-17
ಚಿತ್ರದುರ್ಗ: 27-17
ಹಾವೇರಿ: 31-18
ಬಳ್ಳಾರಿ: 28-17
ಗದಗ: 28-16
ಕೊಪ್ಪಳ: 28-17
ರಾಯಚೂರು: 30-18
ಯಾದಗಿರಿ: 30-18
ವಿಜಯಪುರ: 29-18
ಬೀದರ್: 27-13
ಕಲಬುರಗಿ: 29-17
ಬಾಗಲಕೋಟೆ: 29-18

