ಚಿಕ್ಕಬಳ್ಳಾಪುರ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ, ಬತ್ತಳಿಕೆ ಅವರೇ ಮಾಡಿಕೊಂಡವ್ರೆ ನಾನು ಕೇವಲ ಮತದಾರ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆ ಫಲಿತಾಂಶ ನಮಗೆ ಸಮಾಧಾನ ತಂದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ರವಿ ಕಣಕ್ಕಿಳಿಸಿದ್ದೇವು. ರವಿಗೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತ ಹಾಕಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷದವರು ಮಾತ್ರ ವೋಟು ಹಾಕಿಲ್ಲ. ಪಕ್ಷೇತರ ಬಿಜೆಪಿ ಜನತಾದಳದವರು ವೋಟು ಹಾಕಿ ರವಿ ಗೆಲುವು ಸಾಧಿಸಿದ್ದಾರೆ. ಇದರಿಂದ ಭಾರೀ ಅಂತರದಿಂದ ರವಿ ಗೆಲುವು ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ
ರಾಜ್ಯದಲ್ಲಿ 11 ಸ್ಥಾನ ಗೆದ್ದಿದ್ದೇವೆ. ಡಬಲ್ ಡಿಜಿಟ್ ಕ್ರಾಸ್ ಮಾಡುವುದಾಗಿ ನಾನು ಹೇಳಿದ್ದೆ. ಇನ್ನೂ ಮೂರು ಸೀಟು ಗೆಲ್ಲುವ ಎಲ್ಲಾ ಸಾಧ್ಯತೆ ಇತ್ತು. ನಮ್ಮ ಲೆಕ್ಕಾಚಾರ ತಪ್ಪಿರುವುದರಿಂದ ಮೂರು ಸೀಟು ಕಳೆದುಕೊಂಡಿದ್ದೇವೆ. ಚಿಕ್ಕ ಅಂತರದಿಂದ ಗುಲ್ಬರ್ಗ ಚಿಕ್ಕ ಮಗಳೂರು ಕೊಡಗು ಕಳೆದುಕೊಂಡಿದ್ದೇವೆ. 12-13 ಅಂತ ನೀರೀಕ್ಷೆ ಇತ್ತು. ಆದರೂ 11 ಸಮಾಧಾನಕಾರ ತಂದಿದೆ. ಹಳೇ ಮೈಸೂರು ಭಾಗದ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಬೇಡ. ಮಂಡ್ಯದಲ್ಲಿ ಸಹ ಎಲ್ಲಾ ಪಕ್ಷದವರು ನಮಗೆ ಸಹಾಯ ಮಾಡಿದ್ದಾರೆ. ಚುನಾವಣೆಯಲ್ಲಿ ಮತ ಹಾಕಿದವರು ನಾಯಕರು, ಜನ ಪ್ರತಿನಿಧಿಗಳು ಕಾಂಗ್ರೆಸ್ ಪಕ್ಷ ಬರಲಿ ಅಂತ ಇಷ್ಟು ಸೀಟು ಕೊಟ್ಟಿದ್ದಾರೆ. ಇದು ರಾಜ್ಯಕ್ಕೆ ಯಾವ ದಿಕ್ಕಿನಲ್ಲಿ ಜನ ಸಾಗುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದರು. ಇದನ್ನೂ ಓದಿ: ನಾನು ಹೇಳಿದ್ದು ನಿಜವಾಗಿದೆ, ಬೊಮ್ಮಾಯಿ ನಾಯಕತ್ವಕ್ಕೆ ಬೆಂಬಲ: ಬಿಎಸ್ವೈ
ಇದೇ ವೇಳೆ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಕುಮಾರಸ್ವಾಮಿ ನಂಬಿಕೆ ಅವರ ನಂಬಿಕೆ ಅವರದ್ದು, ನಮ್ಮ ನಂಬಿಕೆ ನಮ್ಮದು. ಕುಮಾರಸ್ವಾಮಿ ಅವರಿಗೆ ಓಳ್ಳೆಯದಾಗಲಿ ಎಂದು ಹೇಳಿದ್ದಾರೆ.