ಮಡಿಕೇರಿ: ಕುಶಾಲನಗರದಲ್ಲಿರುವ ಇಬ್ಬರು ಸರ್ಕಾರಿ ಅಧಿಕಾರಿಗಳ (Government Officials) ಮನೆ ಮೇಲೆ ಇಂದು ಲೋಕಾಯುಕ್ತ (Karnataka Lokayukta) ದಾಳಿ ನಡೆಸಿದೆ.
ಇಲ್ಲಿನ ಪೊಲೀಸ್ (Police) ಇನ್ಸ್ಪೆಕ್ಟರ್ ಮಹೇಶ್ ದೇವರು ಹಾಗೂ ನೀರಾವರಿ ಇಲಾಖೆ ಇಂಜಿನಿಯರ್ (Engineer) ರಫೀಕ್ ಹಾಗೂ ಅವರ ಇಬ್ಬರು ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್
ಪೊಲೀಸ್ ಇನ್ಸ್ಪೆಕ್ಟರ್ ಅವರ ಮನೆಯಲ್ಲಿ ಅಕ್ರಮ ಚಿನ್ನ (Gold) ಇರುವುದಾಗಿ ಖಚಿತ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ಇಂದು ದಾಳಿ ನಡೆಸಿ ನಾಲ್ಕೂ ಮನೆಗಳನ್ನ ಜಾಲಾಡಿದ್ದಾರೆ. ಈಗ ಲೋಕಾಯುಕ್ತ ಪೊಲೀಸರು ದಾಖಲೆಯನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಬಾಬುರಾಯನ ಕೊಪ್ಪಲಿನ ಜೈ ಭುವನೇಶ್ವರಿ ಹೊಟೇಲ್ ಅಪ್ಪು ಫೇವರೆಟ್
ಈ ಹಿಂದೆ ಕುಶಾಲನಗರದ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಮಹೇಶ್ ದೇವರು ಅವರು ಸದ್ಯ ಬೆಂಗಳೂರಿನಲ್ಲಿ (Bengaluru) ಕರ್ತವ್ಯ ಮಾಡುತ್ತಿದ್ದಾರೆ. ಇಂದು ಅವರ ಮನೆ ಮೇಲೆ ಏಳು ಜನ ಲೋಕಾಯುಕ್ತ ಪೊಲೀಸರ (Lokayukta Police) ತಂಡ ದಾಳಿ ನಡೆಸಿದೆ.
Live Tv
[brid partner=56869869 player=32851 video=960834 autoplay=true]