ಸರ್ಕಾರ ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ಕೊಡಬೇಕು: ಜಿಟಿ ದೇವೇಗೌಡ

Public TV
1 Min Read
gt devegowda

ಬೆಂಗಳೂರು: ಸರ್ಕಾರ ರೈತರಿಗೆ 5 ಗಂಟೆ ಬದಲಾಗಿ 7 ಗಂಟೆ ವಿದ್ಯುತ್ (Electricity) ಕೊಡಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ಸರ್ಕಾರವನ್ನ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಕತ್ತಲೆ ಭಾಗ್ಯ ಶುರುವಾಗಿದೆ.ಕರೆಂಟ್ ಕೊಡಿ ಅಂದ್ರೆ ಬಿಜೆಪಿ (BJP) ಮೇಲೆ ಕಾಂಗ್ರೆಸ್ (Congress) ಆರೋಪ ಮಾಡ್ತಿದೆ.ಕೇವಲ ಗ್ಯಾರಂಟಿಗೆ ಹಣ ಕೊಡೋದು ಅಲ್ಲ. ಕರೆಂಟ್‌ಗೂ ಹಣ ಇಡಬೇಕು ಎಂದು ಕಿಡಿಕಾರಿದರು.  ಇದನ್ನೂ ಓದಿ: ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ

 

ಬಿಜೆಪಿ, ಜೆಡಿಎಸ್ ಸರ್ಕಾರ ಇದ್ದಾಗ ರೈತರಿಗೆ 7 ಗಂಟೆ 3 ಫೇಸ್ ಕರೆಂಟ್ ನೀಡುತ್ತಿದ್ದೆವು. ಈಗ ಸರ್ಕಾರ ಕರೆಂಟ್ ಕಟ್ ಮಾಡಿದೆ. ಕಾಂಗ್ರೆಸ್ ಸರ್ಕಾರ ಕೂಡಾ 7 ಗಂಟೆ ವಿದ್ಯುತ್ ಕೊಡಬೇಕು ಅಂತ ಆಗ್ರಹಿಸಿದರು.

ರಾಜ್ಯ ಸರಕಾರ 5 ಗಂಟೆ ವಿದ್ಯುತ್ ಕೊಡ್ತೀವಿ ಅಂತ ಸರ್ಕಾರ ಹೇಳಿದೆ. ಕುಮಾರಸ್ವಾಮಿ, ಬಿಜೆಪಿ ಸರ್ಕಾರ 7 ಗಂಟೆ ವಿದ್ಯುತ್ ಕೊಟ್ಟಿತ್ತು.ಆದರೆ ಈ ಸರ್ಕಾರ ಕರೆಂಟ್ ಕೊಡ್ತಿಲ್ಲ.ಬರ ಇದೆ.ಈ‌ ಸಮಯದಲ್ಲಿ ಕರೆಂಟ್ ಇಲ್ಲದೆ ಹೋದರೆ ಬೆಳೆ ಬೆಳೆಯಲು ಆಗುವುದಿಲ್ಲ. ಸಿಎಂ ಅವರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ.  7 ಗಂಟೆ ವಿದ್ಯುತ್ ರೈತರಿಗೆ ಕೊಡಿ. 5 ಗಂಟೆ ಬದಲಿಗೆ 7 ಗಂಟೆ ಕರೆಂಟ್ ಕೊಡಲೇಬೇಕು ಎಂದು ಒತ್ತಾಯ ಮಾಡಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article