ಬೆಂಗಳೂರು: ಕರ್ನಾಟಕವು ಕೊನೆಗೂ ಕೇಸರಿಮಯ ಆಗಲಿಲ್ಲ. ಅದು ವರ್ಣರಂಜಿತವಾಗಿ ಮುಂದುವರೆಯುತ್ತಿದೆ ಎಂದು ಚಿತ್ರನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
55 ಗಂಟೆಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದನ್ನು ಮರೆತುಬಿಡಿ 56ನೇ ಗಂಟೆಯಿಂದ ಹೊಸ ಮುಖ್ಯಮಂತ್ರಿ ಬರುತ್ತಿದ್ದಾರೆ ನೀವು ಚಿಂತಿಸಬೇಡಿ ಎಂದು ಜನರಿಗೆ ರೈ ಹೇಳಿದ್ದಾರೆ.
KARNATAKA is not going to be SAFFRON…but will continue to be COLOURFUL….Match over before it began…forget 56 couldn’t hold on for 55 hours..jokes apart…dear CITIZENS now get ready for more muddy politics..will continue to stand for the CITIZENS and CONTINUE #justasking..
— Prakash Raj (@prakashraaj) May 19, 2018
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಗಣೇಶ್, ಕೊಂಕಣ ಸುತ್ತಿ ಮೈಲಾರಕ್ಕೆ ಯಾಕೆ ಬರುತ್ತೀರಿ, ನೇರವಾಗಿ ನಿಮ್ಮ ಗಂಜಿ ಕೇಂದ್ರದ ಬಾಗಿಲು ಮತ್ತೊಮ್ಮೆ ತೆರೆಯಿತು ಎಂದು ನೇರವಾಗಿ ಹೇಳಬಹುದಿತ್ತಲ್ಲ ಪ್ರಕಾಶ್ ರಾಜ್ ಅವರೇ ಎಂದಿದ್ದಾರೆ.
This was semi final between BJP and CONG-JDS . In Next FEW month, Final between Cong and JDS and the champion will be BJP.
— eranna (@R08Eru2015) May 19, 2018
ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಪ್ರಕಾಶ್ ರೈ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಭೇಟಿ ನೀಡಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ ಎಂದು ಮನವಿ ಮಾಡಿದ್ದರು.