ಬೆಂಗಳೂರು : ಬಡ ಜನರಿಗೆ ಕರೆಂಟ್ ಕೊಡದ ಕಾಂಗ್ರೆಸ್ (Congress) ಅವ್ರು ಎಸಿಯಲ್ಲಿ ನಾಯಿ ಸಾಕೋರಿಗೆ ಕರೆಂಟ್ ಕೊಡ್ತೀರಾ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಕಿಡಿಕಾರಿದರು.
ಕಾಂಗ್ರೆಸ್ನ 200 ಯುನಿಟ್ ವಿದ್ಯುತ್ ಘೋಷಣೆ ಮತ್ತು 2 ಸಾವಿರ ಗೃಹಿಣಿಯರಿಗೆ ಹಣ ಘೋಷಣೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ಮತ ಪಡೆಯಲು ಈ ರೀತಿಯ ಆಶ್ವಾಸನೆ ನೀಡುತ್ತಿದ್ದಾರೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್ಗಢದಲ್ಲಿ ಅವರ ಸರ್ಕಾರವೇ ಇದೆ. ಅಲ್ಲಿ ಮಾಡಿ ತೋರಿಸಬೇಕಿತ್ತು. ಅವರು ಅಲ್ಲಿ ಮಾಡದೇ ಇಲ್ಲಿ ಹೇಗೆ ಮಾಡುತ್ತಾರೆ. ಇವೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ರೈತರಿಗೆ ವಿದ್ಯುತ್ ಕೊಡುವುದಕ್ಕೆ ಆಗುವುದಿಲ್ಲ ನಿಮಗೆ. ನಗರದಲ್ಲಿ ಎಸಿ ರೂಂನಲ್ಲಿ ನಾಯಿ ಸಾಕಲು ಕರೆಂಟ್ ಕೊಡುತ್ತೀರಾ. ಬರೀ ನಗರ ಪ್ರದೇಶದ ಜನರಿಗೆ ಕೊಟ್ಟರೆ ಹಳ್ಳಿ ಜನರಿಗೆ ಏನ್ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಏನು ಮಾಡದೆ ಈಗ ಇಲ್ಲಿ ಮಾಡುತ್ತೇವೆ ಎನ್ನುತ್ತಾರೆ. ಗೃಹಲಕ್ಷ್ಮಿ, ಸಂತಾನ ಲಕ್ಷ್ಮಿ, ಅಷ್ಠಲಕ್ಷ್ಮಿ ಎಲ್ಲ ಮೊದಲು ಅಧಿಕಾರ ಇರುವ ರಾಜ್ಯದಲ್ಲಿ ಮಾಡಿ ತೋರಿಸಿ. ಆ ಮೇಲೆ ಇಲ್ಲಿ ಮಾಡುವರಂತೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್, ಬಿಜೆಪಿ ಸರ್ಕಾರ ಬಂದಾಗ ರಾಜ್ಯದಲ್ಲಿ ದರಿದ್ರ ಲಕ್ಷ್ಮಿ ಬರುತ್ತದೆ. ಕಾಂಗ್ರೆಸ್ ಅವರು 120 ರಿಂದ 70ಕ್ಕೆ ಬಂದರೂ ಈಗ 58ಕ್ಕೆ ಕಾಂಗ್ರೆಸ್ ಇಳಿಯುತ್ತದೆ ಎಂದು ಭವಿಷ್ಯ ನುಡಿದರು.
ಜನರಿಗೆ ಟೋಪಿ ಹಾಕುವ ಕೆಲಸ ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹೋಗಿ ಕ್ಯಾಂಪೇನ್ ಮಾಡಿದರೂ ಏನಾಯ್ತು ಅಲ್ಲಿ. ಊರಿನಲ್ಲಿ ನಡೆದಿಲ್ಲ ಅಂದರೆ ಪರರ ಊರಲ್ಲಿ ನಡೆಯುತ್ತಾ. ರೈತರಿಗೆ 3 ಫೇಸ್, 8 ಗಂಟೆ ಕರೆಂಟ್ ಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಕುಮಾರಸ್ವಾಮಿ ಬದ್ಧತೆ ಎಂದು ಹೇಳಿದರು. ಇದನ್ನೂ ಓದಿ: ಜ.20ರಂದು ಬೆಂಗಳೂರಿನಲ್ಲಿ ಹಂಪಿ ಉತ್ಸವದ ಲೋಗೋ ಬಿಡುಗಡೆ: ಸಚಿವೆ ಶಶಿಕಲಾ ಜೊಲ್ಲೆ
ರೈತರ ಬಗ್ಗೆ ಪ್ರಿಯಾಂಕಾ ಗಾಂಧಿ ಅಮ್ಮ ಮಾತನಾಡಿಲ್ಲ. ರೈತರ ಬಗ್ಗೆ ಅವರಿಗೆ ಗೊತ್ತೆ ಇಲ್ಲ. ಕನಿಷ್ಠ ರೈತರ ಕಷ್ಟದ ಬಗ್ಗೆ ಡಿ.ಕೆ ಶಿವಕುಮಾರ್ ಆದರೂ ಹೇಳಿಕೊಡಬೇಕಿತ್ತು. ಸಿಟಿಯಲ್ಲಿರುವ ಮನೆಗೆ ಕರೆಂಟ್ ಕೊಟ್ಟರೆ ಸಾಕು. ರೈತರ ಮನೆಯಲ್ಲಿ ದೀಪ ಹಚ್ಚಬಾರದಾ? ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಇಲ್ಲ ಅಂದರೆ ಹೇಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: 2023ರ ಚುನಾವಣೆ ಗೆಲುವಿಗೆ ‘ಕೈ’ ಪಾಳಯಕ್ಕೆ ಸ್ತ್ರೀ ಶಕ್ತಿಯೇ ಆಧಾರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k