Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿರಾಜಪೇಟೆ ಕ್ಷೇತ್ರದಲ್ಲಿ ನೇರಾನೇರ ಹಣಾಹಣಿ- ಯಾರ ಕೊರಳಿಗೆ ಬೀಳುತ್ತೆ ಜಯದ ಮಾಲೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ವಿರಾಜಪೇಟೆ ಕ್ಷೇತ್ರದಲ್ಲಿ ನೇರಾನೇರ ಹಣಾಹಣಿ- ಯಾರ ಕೊರಳಿಗೆ ಬೀಳುತ್ತೆ ಜಯದ ಮಾಲೆ?

Districts

ವಿರಾಜಪೇಟೆ ಕ್ಷೇತ್ರದಲ್ಲಿ ನೇರಾನೇರ ಹಣಾಹಣಿ- ಯಾರ ಕೊರಳಿಗೆ ಬೀಳುತ್ತೆ ಜಯದ ಮಾಲೆ?

Public TV
Last updated: May 6, 2023 11:26 pm
Public TV
Share
3 Min Read
BOPAIAH PONNANNA
SHARE

ಮಡಿಕೇರಿ: ವಿರಾಜಪೇಟೆ ಕ್ಷೇತ್ರ (Virajpete Constituency) ದಲ್ಲಿ ಭಾರತೀಯ ಜನತಾ ಪಾರ್ಟಿ (BJP)- ಕಾಂಗ್ರೆಸ್ (Congress) ಅಭ್ಯರ್ಥಿಗಳು ಈ ಬಾರಿ ನೇರ ಸ್ಪರ್ಧಿಗಳಾಗಿ ಸೆಣಸುತ್ತಾರೆ. ಕಾಂಗ್ರೆಸ್‍ನಿಂದ ಈ ಬಾರಿ ಎ.ಎಸ್ ಪೊನ್ನಣ್ಣ ಸ್ಪರ್ಧಿಸಿದರೆ ಬಿಜೆಪಿಯಿಂದ ಎಂದಿನಂತೆ ಕೆ.ಜಿ ಬೋಪಯ್ಯ ಅಖಾಡದಲ್ಲಿದ್ದಾರೆ.

ಉತ್ಸಾಹಿ ರಾಜಕಾರಣಿ, ಕರ್ನಾಟಕ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ, ಸುಪ್ರೀಂಕೋರ್ಟ್ ವಕೀಲ ಎ.ಎಸ್ ಪೊನ್ನಣ್ಣ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೊಡಗಿನಲ್ಲಿ ಚುನಾವಣೆಗೆ ಪೂರ್ವತಯಾರಿ ಮಾಡಿಕೊಂಡಿದ್ದು, ಕ್ಷೇತ್ರದಲ್ಲಿ ಅವರ ಪರವಾಗಿ ಮತದಾರರಲ್ಲಿ ಒಂದಿಷ್ಟು ಒಲವು ಮೂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಾಂಗ್ರೆಸ್‍ನಿಂದ ಯಾವುದೇ ಬಂಡಾಯ ವಿರಾಜಪೇಟೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಇರುವುದು ಪೊನ್ನಣ್ಣನವರಿಗೆ ಸಮಾಧಾನವನ್ನೂ ತಂದಿರುತ್ತದೆ.

ponnanna

ಎ.ಕೆ ಸುಬ್ಬಯ್ಯನವರ ಮಗ ಎ.ಎಸ್ ಪೊನ್ನಣ್ಣ: ಕೊಡಗಿನಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಹೆಸರುಗಳಿಸಿರುವ ಎ.ಕೆ ಸುಬ್ಬಯ್ಯನವರ ಶಿಷ್ಯ ಬಣ ರಾಜ್ಯದಾದ್ಯಂತ ಈಗಲೂ ಇದ್ದು ನೇರ ಹಾಗೂ ನಿಷ್ಠುರತೆಗೆ ಹೆಸರು ವಾಸಿಯಾಗಿದ್ದ ಸುಬ್ಬಯ್ಯನವರ ಪುತ್ರ ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡುತ್ತಿರುವುದು ವಿಶೇಷ. ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಸುಬ್ಬಯ್ಯನವರಿಗೆ ಅಷ್ಟೇ ಸಂಖ್ಯೆಯ ವಿರೋಧಿಗಳು ಇದ್ದಾರೆ. ಹೋರಾಟ ಹಾಗೂ ಕೊಡಗಿನ ನಾಡು, ನುಡಿ, ವೈಚಾರಿಕತೆಗಳ ವಿಚಾರದಲ್ಲಿ ಇದ್ದ ಅವರ ನಿಲುವು ಈ ಚುನಾವಣೆಯಲ್ಲಿ ಪೊನ್ನಣ್ಣನವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದಾ? ಅಥವಾ ಮತವಾಗಿ ಪರಿವರ್ತನೆ ಆಗುತ್ತದಾ ಎಂಬುದು ಯಕ್ಷಪ್ರಶ್ನೆಯಾಗಿದೆ. ನಯವಾದ ಮಾತುಗಾರಿಕೆ, ವಿನಯವಂತಿಕೆ ಹಾಗೂ ವೈಚಾರಿಕವಾಗಿ ಪೊನ್ನಣ್ಣನವರ ನಿಲುವು ತಂದೆಗಿಂತ ಭಿನ್ನವಾಗಿದೆ ಎಂದು ಈಗಾಗಲೇ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

congress

ಇತ್ತ ಟಿಕೆಟ್‍ಗಾಗಿ ಭಾಜಪದಲ್ಲಿ ಈ ಹಿಂದೆ ಎಂದೂ ಕಾಣಿಸದಷ್ಟು ಪೈಪೋಟಿಯ ನಡುವೆಯೂ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಕೆ.ಜಿ ಬೋಪಯ್ಯನವರಿಗೆ ಈ ಬಾರಿಯೂ ಬಿಜೆಪಿ ಹೈಕಮಾಂಡ್ ಅಸ್ತು ಅಂದಿದೆ. ಆದರೂ ಇತರೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಬೋಪಯ್ಯನವರಿಗೆ ಒಂದಿಷ್ಟು ತಲೆ ಬಿಸಿ ತಂದಂತೆ ಕಾಣುತ್ತಿದೆ. ಬೋಪಯ್ಯನವರು ಎಂದಿನಂತೆ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ. ಬೂತ್ ಮಟ್ಟದಲ್ಲಿ ಸಧೃಡವಾಗಿರುವ ಪಕ್ಷದ ಕಾರ್ಯಕರ್ತರೂ ಹಾಗೂ ಬಿಜೆಪಿಯ ಕಾಯಂ ಮತದಾರರು ಅವರನ್ನು ಗೆಲ್ಲಿಸುತ್ತಾರೆ ಅನ್ನುವುದು ಅವರ ನಂಬಿಕೆಯಾಗಿದೆ.

kg bopaiah

ಯಾರಿಗೆ ಪ್ಲಸ್:
ಹಿಂದೂ ಪರ ಸಂಘಟನೆಗಳು ಪ್ರಬಲವಾಗಿರುವ ಕೊಡಗಿನಲ್ಲಿ ಬಿಜೆಪಿ ಗೆಲುವಿಗೆ ಪ್ರತಿಬಾರಿಯಂತೆ ಈ ಬಾರಿಯೂ ಆಂತರಿಕ ಅಸಮಾಧಾನವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಾರೆ ಅನ್ನುವುದು ಬಿಜೆಪಿಯ ಮಡಿಕೇರಿ ಹಾಗೂ ವಿರಾಜಪೇಟೆ ಈ ಎರಡೂ ಕ್ಷೇತ್ರದ ಅಭ್ಯರ್ಥಿಗಳ ನಂಬಿಕೆ. ಮೋದಿ ಅಲೆ ಕೊಡಗಿನಲ್ಲಿ ಒಂದಿಷ್ಟು ಕಡಿಮೆ ಆಗಿದೆ ಅನ್ನುವುದು ಬಿಟ್ಟರೆ ಮೋದಿ ಹೆಸರಿನಲ್ಲಿ ಬಿಜೆಪಿಗೆ ಮತಚಲಾವಣೆ ಮಾಡುವ ಮತದಾರರು ಅಧಿಕ ಸಂಖ್ಯೆಯಲ್ಲಿ ಕೊಡಗಿನಲ್ಲಿ ಇದ್ದು ಕೆ.ಜಿ ಬೋಪಯ್ಯ ಅವರು ಕಳೆದ 20 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳು ಶ್ರೀ ರಕ್ಷೆಯಾಗುವ ಸಾಧ್ಯತೆಯು ಇದೆ. ಇದನ್ನೂ ಓದಿ: ಜಿದ್ದಾಜಿದ್ದಿನ ಹೋರಾಟಕ್ಕಿಳಿದ ಕೈ, ಬಿಜೆಪಿ ಅಭ್ಯರ್ಥಿಗಳು- ಯಾರಿಗೆ ಒಲಿಯಲಿದೆ ಮಡಿಕೇರಿ ಕ್ಷೇತ್ರ?

bjp flag

ಯಾರಿಗೆ ಮೈನಸ್:
ಎಎಸ್ ಪೊನ್ನಣ್ಣ ಕಳೆದ ನಾಲ್ಕು ವರ್ಷಗಳಿಂದ ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಕೊಡಗಿನ ಕೋವಿ ಹಕ್ಕು ಜಮ್ಮಬಾಣೆ ಸಮಸ್ಯೆಗಳ ಬಗ್ಗೆ ನ್ಯಾಯಲಯದಲ್ಲಿ ಧ್ವನಿ ಎತ್ತಿ ಜಿಲ್ಲೆಯ ಸಮಸ್ಯೆಗಳಿಗೆ ಮುಕ್ತಿ ನೀಡಿದ್ದಾರೆ. ಅಲ್ಲದೇ ಯುವಕರ ಹಾದಿಯಾಗಿ ಹಿಂದುಳಿದ ವರ್ಗ ಹಾಡಿ ಜನರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡಿದ್ದಾರೆ ತನ್ನ ತಂದೆ ಹೆಸರಿನಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಪೊನ್ನಣ್ಣ ಅವರಿಗೆ ವಿರಾಜಪೇಟೆ ಕ್ಷೇತ್ರದಲ್ಲಿ ವರ್ಚಸ್ಸು ಜಾಸ್ತಿ ಅಗಿದೆ. ಕೊಡವ ಮತ್ತು ಅಲ್ಪಸಂಖ್ಯಾತ ಮತಗಳೇ ಈ ಬಾಗದಲ್ಲಿ ನಿರ್ಣಾಯಕವಾಗಿದು. ಕೊಡವ ಮತಗಳು ಬಿಜೆಪಿ ಕಾಂಗ್ರೆಸ್ ಗೆ ವಿಭಜನೆ ಅಗುವ ಲಕ್ಷಣಗಳು ಇರುವುದರಿಂದ ಪೊನ್ನಣ್ಣ ಅವರಿಗೆ ಸೋಲಿನ ಭೀತಿಯು ಎದುರಾಗಿದೆ.

kolkata vote

ತಲಾ 269 ಮತಗಟ್ಟೆಗಳಲ್ಲಿ ಎರಡೂ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು. 4,19,550 ಕ್ಕೂ ಹೆಚ್ಚು ಮತದಾರರು ಕೊಡಗಿನ ಎರಡೂ ಕ್ಷೇತ್ರದಲ್ಲಿ ಇದ್ದಾರೆ. ಈ ಬಾರಿ ಶೇಕಡಾ 80%ಕ್ಕಿಂತಲೂ ಹೆಚ್ಚಿನ ಮತದಾನ ಆಗುವ ಸಾಧ್ಯತೆಯೂ ಕೊಡಗಿನಲ್ಲಿ ಇದೆ. ಎರಡೂ ಕ್ಷೇತ್ರಗಳ ಅಷ್ಟೂ ಮತಗಟ್ಟೆಗಳಲ್ಲೂ ಭಾರತೀಯ ಜನತಪಾರ್ಟಿಯ ಸಕ್ರಿಯ ಕಾರ್ಯಕರ್ತರು ಇರುವುದು ಬಿ.ಜೆ.ಪಿಗೆ ವರದಾನ ಆಗುತ್ತಾ ಬಂದಿದೆ. ಇತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಸ್ಥಿತಿ ಹಾಗಿಲ್ಲ. ಕೆಲವೊಂದು ಮತಗಟ್ಟೆಗಳಲ್ಲಿ ಅವರು ಕಾರ್ಯಕರ್ತರ ಕೊರತೆಯನ್ನು ಈ ಹಿಂದೆಯೂ ಎದುರಿಸುತ್ತಾ ಬಂದಿದ್ದಾರೆ. ಅಂತಹಾ ಬೂತ್‍ಗಳಲ್ಲಿ ಅವರಿಗೆ ಮತ ಕಡಿಮೆ ಬೀಳುವ ಸಾಧ್ಯತೆ ಇದೆ. ಈ ಬಾರಿ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿರಾಜಪೇಟೆ ಕ್ಷೇತ್ರದ ಜಾತಿವಾರು ಲೆಕ್ಕಾಚಾರ ಇಂತಿದೆ:
ಲಿಂಗಾಯತ _22117
ಒಕ್ಕಲಿಗ ಹಾಗೂ ಅರೇಬಾಷೆ ಗೌಡ _27708
ಪ.ಪಂಗಡ _25469
ಕುರುಬ _440
ಮುಸಲ್ಮಾನ_37273
ಕ್ರೈಸ್ತ_8800
ಬ್ರಾಹ್ಮಣ_1800
ಕೊಡವ ಹಾಗೂ ಕೊಡವ ಬಾಷಿಕ_47543
ಮಲಯಾಳಿ_11508
ತಮಿಳ_7118
ಬಿಲ್ಲವ_6241
ಬಂಟ್ಸ್_2800
ವಿಶ್ವಕರ್ಮ_1274
ಮಡಿವಾಳ_1900
ದೇವಾಂಗ ಶೆಟ್ಟಿ_3476
ಸವಿತಾ ಸಮಾಜ_2441
ನಾಯಕ್_1034
ಜೈನರು,_273
ಇತರೆ_5472

TAGGED:bjpcongressKarnataka Election 2023virajpeteಕರ್ನಾಟಕ ಚುನಾವಣೆಕಾಂಗ್ರೆಸ್ಬಿಜೆಪಿವಿರಾಜಪೇಟೆ
Share This Article
Facebook Whatsapp Whatsapp Telegram

Cinema news

Arijith Singh
ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಅರಿಜಿತ್ ಸಿಂಗ್
Bollywood Cinema Latest Main Post
kavya gowda
ನಟಿ ಕಾವ್ಯ ಗೌಡ, ಪತಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
Cinema Latest Main Post Sandalwood
Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories
Gilli Nata 6
ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Cinema Districts Karnataka Latest Ramanagara States Top Stories

You Might Also Like

Gujarat Giants 1
Cricket

23 ರನ್‌ ಬಿಟ್ಟು ಕೊಟ್ರೂ ಕೊನೆಯಲ್ಲಿ ಸೋಫಿ ಮ್ಯಾಜಿಕ್‌ – ಗುಜರಾತ್‌ಗೆ ರೋಚಕ 3 ರನ್‌ ಜಯ

Public TV
By Public TV
4 hours ago
DySP Nanda Reddy
Bellary

ಬಳ್ಳಾರಿ ಗಲಭೆ| ಸ್ಥಳ ನಿಯೋಜನೆ ಮಾಡದೇ ಡಿವೈಎಸ್ಪಿ ನಂದಾರೆಡ್ಡಿ ವರ್ಗಾವಣೆ

Public TV
By Public TV
5 hours ago
Koppal Heart Attack
Districts

ಹೃದಯಾಘಾತಕ್ಕೆ ಪಿಯುಸಿ ವಿದ್ಯಾರ್ಥಿನಿ ಬಲಿ

Public TV
By Public TV
5 hours ago
T20 World Cup ICC votes to replace Bangladesh if it doesnt play in India
Cricket

ಟಿ20 ವಿಶ್ವಕಪ್‌ | ಪಾಕ್‌ ಜಾಗದಲ್ಲಿ ಆಡುತ್ತಾ ಬಾಂಗ್ಲಾದೇಶ?

Public TV
By Public TV
6 hours ago
Dharmendra Pradhan
Latest

ಯಾವುದೇ ತಾರತಮ್ಯ ಮಾಡಲ್ಲ, ಕಾನೂನು ದುರುಪಯೋಗಪಡಿಸಲು ಸಾಧ್ಯವಿಲ್ಲ – UGC ಹೊಸ ನಿಯಮಕ್ಕೆ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ

Public TV
By Public TV
6 hours ago
Pariksha Pe charcha
Latest

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ದಾಖಲೆಯ 6.76 ಕೋಟಿ ಅಭ್ಯರ್ಥಿಗಳು ನೋಂದಣಿ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?