ಮಳೆಯ ಮುನ್ಸೂಚನೆ ಹಿನ್ನೆಲೆ ಮೊದಲ ಅವಧಿಯಲ್ಲಿ ಬಂದು ಮತದಾನ ಮಾಡಿ: ಸುರೇಶ್ ಕುಮಾರ್ ಮನವಿ

Public TV
1 Min Read
SURESH KUMAR 1

ಬೆಂಗಳೂರು: ಕರ್ನಾಟಕ ವಿಧಾನಸಭೆ (Karnataka Assembly Election 2023) ಗೆ ಇಂದು ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮೊದಲ ಅವಧಿಯಲ್ಲಿ ಬಂದು ಮತದಾನ ಮಾಡಿ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ (Suresh Kumar) ಮನವಿ ಮಾಡಿಕೊಂಡಿದ್ದಾರೆ.

SURESH KUMAR 1 1

ಆರ್‍ಆರ್ ನಗರ (RR Nagar) ದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವೋಟಿಂಗ್ ಕಡಿಮೆಯಾಗುವ ಬಗ್ಗೆ ಮಾಹಿತಿ ಇದೆ. ಹಾಗಾಗಿ ಬೆಂಗಳೂರಿನಲ್ಲಿ ಹೆಚ್ಚು ಮತದಾನ ಆಗಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

SURESH KUMAR 2

ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮೊದಲ ಅವಧಿಯಲ್ಲಿ ಬಂದು ಮತದಾನ ಮಾಡಿ ಎಂದು ಮನವಿ ಮಾಡಿಕೊಂಡ ಅವರು, ಈ ಸಲ ಚುನಾವಣೆ ಮಹತ್ವ ಪಡೆದುಕೊಂಡಿದೆ. ಮೊದಲು ತಾಯಿ ಜೊತೆ ಮತದಾನ ಮಾಡುತ್ತಿದ್ದೆ. ನಂತರ ಪತ್ನಿ ಮತ್ತು ಮಗಳು ಮತದಾನದಲ್ಲಿ ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ಸದಾ ಕುಟುಂಬ ಸಮೇತ ಮತದಾನದಲ್ಲಿ ಭಾಗಿಯಾಗ್ತಿದ್ದೇವೆ ಎಂದರು.
ಸುರೇಶ್ ಕುಮಾರ್ ತಾಯಿ ಸುಶೀಲಮ್ಮ ಮಾತನಾಡಿ, ಇದು ನನ್ನ ಕೊನೆಯ ಮತದಾನ ಅನ್ನಿಸ್ತಿದೆ. ಮಗನಿಗೆ ಮತದಾನ ಮಾಡಿದ್ದೇನೆ ಅಂತಾ ಮಗನ ಬಗ್ಗೆ ಭಾವುಕರಾದ ಅವರು, 1952 ರಿಂದ ಮತದಾನ ಮಾಡ್ತೀದ್ದೇನೆ ಎಂದರು.

Share This Article