ಕೋಲಾರ: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜನರ ಹಣ ಕದ್ದಿದೆ. ಏನೇ ಕೆಲಸ ಮಾಡಿದರೂ ಲಂಚ ಹೊಡೆದಿದ್ದಾರೆ ಎಂದು ಬಿಜೆಪಿ (BJP) ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹರಿಹಾಯ್ದರು.
ಕೋಲಾರದಲ್ಲಿ (Kolar) ನಡೆದ ಜೈ ಭಾರತ್ (Jai Bharath) ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಬಿಟ್ಟು ಏನೂ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಜನರ ಹಣ ಕದ್ದಿದೆ. ಏನೇ ಕೆಲಸ ಮಾಡಿದರೂ ಅದರಲ್ಲಿ 40% ಲಂಚ ಹೊಡೆದಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಕಂಟ್ರಾಕ್ಟರ್ಗಳು ಮೋದಿಗೆ ಪತ್ರ ಬರೆದು ತಿಳಿಸಿದ್ದಾರೆ. ಮೋದಿ ಆ ಪತ್ರಕ್ಕೆ ಏನೂ ಉತ್ತರ ಕೊಟ್ಟಿಲ್ಲ. ಪತ್ರಕ್ಕೆ ಉತ್ತರ ಕೊಟ್ಟಿಲ್ಲ ಎಂದರೆ ಅದರಲ್ಲಿ ಮೋದಿ ಪಾಲು ಇದೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿ ಟೀಚರ್, ಪೊಲೀಸ್ ಹಾಗೂ ಎಂಜಿನಿಯರ್ ನೇಮಕಾತಿಯಲ್ಲಿ ಹಗರಣ ನಡೆದಿದೆ. ನಾನು ಸಂಸತ್ನಲ್ಲಿ ಈ ವಿಚಾರ ಹಾಗೂ ಅದಾನಿ (Adani) ವಿಚಾರವಾಗಿ ಕೇಳಿದೆ. ಕೂಡಲೇ ನನ್ನ ಮೈಕ್ ಆಫ್ ಮಾಡಿದರು. ನಿಮಗೂ ಅದಾನಿಗೂ ಏನು ಸಂಬಂಧ ಎಂದು ಕೇಳಿ ನಾನು ಒಂದು ಫೋಟೋ ತೋರಿಸಿದೆ. ಅದಕ್ಕೆ ಏನು ಸಂಬಂಧ ಎಂದು ಕೇಳಿದೆ. ದೇಶದ ವಿಮಾನ ನಿಲ್ದಾಣವನ್ನು ಕಾನೂನು ಮೀರಿ ಅದಾನಿಗೆ ಕೊಟ್ಟಿದ್ದಾರೆ. ಅದು ಯಾಕೆ ಕೊಟ್ಟರು ಎಂದು ಕೇಳಿದೆ. ಅದಾನಿಗೆ ವಿಮಾನ ನಿಲ್ದಾಣ ವಿಚಾರದಲ್ಲಿ ಯಾವ ಅನುಭವವೂ ಇಲ್ಲ. ಅವರು ನಿಯಮ ಮೀರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಈ ಬಾರಿ ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ: ರಾಹುಲ್ ಗಾಂಧಿ
ಮುಂಬೈ (Mumbai) ವಿಮಾನ ನಿಲ್ದಾಣವನ್ನೂ ಅವರಿಗೆ ಕೊಟ್ಟರು. ಯಾರು ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದರೋ ಅವರಿಗೆ ಸಿಬಿಐ (CBI) ಭಯ ಹುಟ್ಟಿಸಿ ಅವರ ಕೈಯಿಂದ ಅದನ್ನು ತೆಗೆದುಕೊಂಡರು. ನಿರ್ಮಾಣ ಮಾಡಿದವರಿಂದ ಕಿತ್ತು ಅದನ್ನು ಅದಾನಿಗೆ ಕೊಟ್ಟರು. ಆಸ್ಟ್ರೇಲಿಯಾ ಭೇಟಿ ಕೊಟ್ಟಾಗ ಮೋದಿ (Narendra Modi) ಜೊತೆ ಅದಾನಿಯವರು ವಿಮಾನದಲ್ಲಿ ಕೂತಿದ್ದರು. ಬಳಿಕ ಎಸ್ಬಿಐ (SBI) ಅವರು ಅದಾನಿಯವರಿಗೆ ಸಾಲವನ್ನೂ ನೀಡಿದ್ದಾರೆ. ಅದು ಹೇಗೆ ಸಾಧ್ಯ? ಅದಾನಿಯವರದ್ದು ನಕಲಿ ಕಂಪನಿ ಹಾಗೂ ಬೇನಾಮಿ ಆಸ್ತಿಯಿದೆ. 20 ಸಾವಿರ ಕೋಟಿ ಬೇನಾಮಿ ಯಾರದ್ದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯವನ್ನು ರಕ್ಷಣೆ ಮಾಡುವ ಪಕ್ಷಕ್ಕೆ ಅಧಿಕಾರ ಕೊಡಿ: ಸಿದ್ದರಾಮಯ್ಯ
ನನ್ನನ್ನು ಸಂಸತ್ ಸ್ಥಾನದಿಂದ ರದ್ದು ಮಾಡಿದ್ದಾರೆ. ಬಿಜೆಪಿಯವರು ಅನರ್ಹ ಮಾಡಿದರೆ ನಾನು ಭಯ ಬೀಳುವುದಿಲ್ಲ. ನಾನು ಮತ್ತೆ ಸ್ಥಾನವನ್ನು ಕೇಳುತ್ತೇನೆ. ಅದಾನಿಯ 20 ಸಾವಿರ ಕೋಟಿ ಬೇನಾಮಿ ಹಣ ಎಲ್ಲಿಂದ ಬಂತು ಎಂದು ಉತ್ತರ ಕೊಡಿ. ಅವರು ಎಲ್ಲಿಯವರೆಗೆ ಉತ್ತರ ಕೊಡುವುದಿಲ್ಲವೋ ಅಲ್ಲಿಯವರೆಗೆ ನಾನು ಬಿಡುವುದಿಲ್ಲ. ನನ್ನನ್ನು ಜೈಲಿಗೆ ಹಾಕಿ ಅನರ್ಹ ಮಾಡಿದರೂ ನಾನು ಹೆದರುವುದಿಲ್ಲ ಎಂದರು. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ