Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ರಾಜಕೀಯ ಅನುಭವವಿಲ್ಲದೆ ಸತತ ಎರಡು ಬಾರಿ MLA- ಪಕ್ಷ ಬದಲಿಸಿಯೂ ಗೆದ್ದಿದ್ದ ಡಾ.ಶಿವರಾಜ್ ಪಾಟೀಲ್‍ಗೆ ಈ ಬಾರಿ ಟಫ್

Public TV
Last updated: March 31, 2023 3:01 pm
Public TV
Share
3 Min Read
RAICHUR ELECTION
SHARE

ರಾಯಚೂರು: ಮುಸ್ಲಿಂ ಅಲ್ಪಸಂಖ್ಯಾತರ ಪ್ರಾಬಲ್ಯ ಹೊಂದಿರುವ, ಇದುವರೆಗೂ 7 ಬಾರಿ ಮುಸ್ಲಿಂ ಅಭ್ಯರ್ಥಿಯನ್ನೇ ಶಾಸಕರಾಗಿ ಆಯ್ಕೆ ಮಾಡಿ ವಿಧಾನಸೌಧ (Vidhanasoudha) ಕ್ಕೆ ಕಳುಹಿಸಿರುವ ರಾಯಚೂರು ನಗರ ಕ್ಷೇತ್ರ (Raichur City Constituency) ದಲ್ಲಿ ಹೃದಯರೋಗ ತಜ್ಞ ಡಾ.ಶಿವರಾಜ್ ಪಾಟೀಲ್ (Dr. Shivaraj Patil) ಸತತ ಎರಡು ಬಾರಿ ಶಾಸಕರಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

ಯಾವುದೇ ರಾಜಕೀಯ ಅನುಭವವಿಲ್ಲದೆ ಮೊದಲ ಬಾರಿಗೆ ಜೆಡಿಎಸ್ ನಿಂದ ಚುನಾವಣೆ ಎದುರಿಸಿದ್ದ ಡಾ.ಶಿವರಾಜ್ ಪಾಟೀಲ್ 2013 ರಲ್ಲಿ ಮೊದಲ ಯತ್ನದಲ್ಲೇ ಗೆದ್ದಿದ್ದರು. ಬಳಿಕ 2018 ರಲ್ಲಿ ಜೆಡಿಎಸ್ (JDS) ತೊರೆದು ಬಿಜೆಪಿ (BJP) ಯಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದರು. ಬಿಜೆಪಿ ತುಂಬಾ ವೀಕ್ ಅನ್ನೋ ಕ್ಷೇತ್ರದಲ್ಲೇ ಭರ್ಜರಿ ವಿಜಯ ಸಾಧಿಸಿದ್ದರು.

Dr. Shivaraj Patil

ವೈದ್ಯ ವೃತ್ತಿಯಲ್ಲಿದ್ದ ಡಾ.ಶಿವರಾಜ್ ಪಾಟೀಲ್ ಒಂದೇ ಅವಧಿಗೆ ಮಾಗಿದ ಚುನಾವಣಾ ರಾಜಕಾರಣಿಯಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಗೆಲ್ಲುವ ಮೂಲಕ ಮುಸ್ಲಿಂಯೇತರ ಅಭ್ಯರ್ಥಿ ಸತತ ಎರಡು ಬಾರಿ ಎರಡು ಬೇರೆ ಬೇರೆ ಪಕ್ಷದಿಂದ ಗೆದ್ದ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಪ್ರತಿ ಬಾರಿಯೂ ಗೆದ್ದವರನ್ನು ಸೋಲಿಸುವ ಸಿಂಧನೂರು ಮತದಾರ

2013 ರಲ್ಲಿ ಕಾಂಗ್ರೆಸ್‍ನ ಪ್ರಬಲ ಎದುರಾಳಿ ಸೈಯದ್ ಯಾಸಿನ್ (Syed Yasin) 37392 ಮತ ಪಡೆದರೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಡಾ.ಶಿವರಾಜ್ ಪಾಟೀಲ್ 45,263 ಮತ ಪಡೆದು 7871 ಮತಗಳ ಅಂತರದಲ್ಲಿ ಗೆದ್ದಿದ್ದರು. 2018 ರಲ್ಲಿ ಸೈಯದ್ ಯಾಸಿನ್ 45,520 ಮತ ಪಡೆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಶಿವರಾಜ್ ಪಾಟೀಲ್ 56511 ಮತ ಪಡೆದು 10,991 ಮತಗಳಿಂದ ಎರಡನೇ ಬಾರಿಗೆ ಜಯಭೇರಿ ಬಾರಿಸಿದರು.

CongressFlags1 e1613454851608

2023ರ ಚುನಾವಣೆಗೆ ರಾಯಚೂರು ನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,21,093 ಇದ್ದು, ಇದರಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು, ಲಿಂಗಾಯತರು, ಪರಿಶಿಷ್ಟ ಜಾತಿ ಮತದಾರರು ನಿರ್ಣಾಯಕರಾಗಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ಗೆ ಸರಣಿ ಆಘಾತ – ಐವರು ನಾಯಕರು ಗುಡ್‌ಬೈ

ಕ್ಷೇತ್ರದಲ್ಲಿನ ಜಾತಿವಾರು ಅಂದಾಜು ಲೆಕ್ಕಾಚಾರ ಈ ರೀತಿಯಿದೆ:
* ಮುಸ್ಲಿಂ – 60,000
* ಪರಿಶಿಷ್ಟ ಜಾತಿ- 34,000
* ಲಿಂಗಾಯತ- 35,000
* ಪರಿಶಿಷ್ಟ ಪಂಗಡ- 24,000
* ಬಲಿಜ (ಮುನ್ನೂರುಕಾಪು)- 19,000
* ಬ್ರಾಹ್ಮಣರು- 10,000
* ಆರ್ಯವೈಶ್ಯ- 9,000 ಹಾಗೂ ಉಳಿದ ಇತರೆ ಸಮುದಾಯದ ಮತದಾರು ಇದ್ದಾರೆ.

BJP CONGRESS FLAG

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಲಿಂಗಾಯತ ಮತದಾರರು ಹೆಚ್ಚು ನಿರ್ಣಾಯಕರಾಗಿದ್ದಾರೆ. ಬಿಜೆಪಿ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಲಿಂಗಾಯತರ ಒಲವು ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಸತತ ಎರಡು ಬಾರಿ ಒಮ್ಮೆ ಜೆಡಿಎಸ್, ಇನ್ನೊಮ್ಮೆ ಬಿಜೆಪಿಯಿಂದ ಗೆದ್ದಿರುವ ಶಿವರಾಜ್ ಪಾಟೀಲ್‍ಗೆ ಮೂರನೇ ಚುನಾವಣೆ ಟಫ್ ಆಗಿದೆ. ಕಾಂಗ್ರೆಸ್ ನಿಂದ ಮಾಜಿ ಶಾಸಕ ಎನ್.ಎಸ್ . ಬೋಸರಾಜು ಹಾಗೂ ಮಾಜಿ ಶಾಸಕ ಸೈಯದ್ ಯಾಸಿನ್ ಟಿಕೆಟ್ ಸ್ಪರ್ಧೆಯಲ್ಲಿದ್ದಾರೆ. ಸತತ ಸೋಲು ಹಾಗೂ ಆರೋಗ್ಯ ಸಮಸ್ಯೆ ಕಾರಣಕ್ಕೆ ಸೈಯದ್ ಯಾಸಿನ್ ಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ. ಎನ್ ಎಸ್ ಬೋಸರಾಜು ಸ್ಪರ್ಧಿಸಿದರೆ ತುರಿಸಿನ ಸ್ಪರ್ಧೆ ಏರ್ಪಡಲಿದೆ, ಲಿಂಗಾಯತ, ಮುಸ್ಲಿಂ ಮತಗಳನ್ನು ಹೆಚ್ಚು ಸೆಳೆಯಲಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷದ ಜೊತೆ ಅಭ್ಯರ್ಥಿಗಳೇ ಮುಖ್ಯವಾಗುತ್ತಾರೆ.

2023 ರ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಕನಸು ಕಾಣುತ್ತಿರುವ ಶಿವರಾಜ್ ಪಾಟೀಲ್‍ಗೆ ಈ ಚುನಾವಣೆ ಅಷ್ಟು ಸುಲಭವಾಗಿಲ್ಲ. ರಾಯಚೂರನ್ನ ತೆಲಂಗಾಣಕ್ಕೆ ಸೇರಿಸಿಬಿಡಿ ಅನ್ನೋ ಹೇಳಿಕೆಯಿಂದ ಸಾಕಷ್ಟು ವಿವಾದ ಸೃಷ್ಟಿಸಿದ್ದ ಶಿವರಾಜ್ ಪಾಟೀಲ್, ಸಣ್ಣಪುಟ್ಟ ವಿವಾದಗಳನ್ನ ಮೈಮೇಲೆ ಆಗಾಗ ಎಳೆದುಕೊಂಡಿದ್ದಾರೆ. ಏಮ್ಸ್ ಹೋರಾಟದ ಬಿಸಿ ಸಹ ಡಾ.ಶಿವರಾಜ್ ಪಾಟೀಲ್‍ಗೆ ತಟ್ಟುವ ಸಾಧ್ಯತೆಯಿದೆ.

TAGGED:Dr. Shivaraj PatilelectionKarnataka Election 2023raichurಕರ್ನಾಟಕ ಚುನಾವಣೆ 2023ಚುನಾವಣೆಡಾ.ಶಿವರಾಜ್ ಪಾಟೀಲ್ರಾಯಚೂರು
Share This Article
Facebook Whatsapp Whatsapp Telegram

Cinema Updates

madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
3 hours ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
20 hours ago
shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
1 day ago
Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
2 days ago

You Might Also Like

CID Team Chinnaswamy Stadium Stampede
Bengaluru City

ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಐಡಿ ತಂಡ ಭೇಟಿ – ಕಾಲ್ತುಳಿತ ಸ್ಥಳದಲ್ಲಿ ಪರಿಶೀಲನೆ

Public TV
By Public TV
7 minutes ago
Uttarakhand Rudraparayag Helicopter Emergency Landing
Latest

ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ

Public TV
By Public TV
56 minutes ago
kanachur hospital mangaluru
Dakshina Kannada

ಮಂಗಳೂರು| ಸೆಮಿನಾರ್ ತಪ್ಪಿಸಲು ವಿದ್ಯಾರ್ಥಿನಿಯಿಂದಲೇ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ

Public TV
By Public TV
2 hours ago
Madhavi Latha Chenab Railway Bridge Project
Latest

ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ 17 ವರ್ಷ ಕಳೆದ IISC ಪ್ರೊಫೆಸರ್ ಮಾಧವಿ ಲತಾ

Public TV
By Public TV
2 hours ago
HD Kumaraswamy
Districts

ಪಹಲ್ಗಾಮ್‌ ದಾಳಿಗೂ ಕಾಲ್ತುಳಿತಕ್ಕೂ ಏನ್‌ ಸಂಬಂಧ? ಮನಮೋಹನ್ ಸಿಂಗ್‌ ಪ್ರಧಾನಿಯಾಗಿದ್ದಾಗ ಎಷ್ಟು ಅಟ್ಯಾಕ್ ಆಗಿದ್ವು – ಹೆಚ್‌ಡಿಕೆ ಪ್ರಶ್ನೆ

Public TV
By Public TV
3 hours ago
BJP MP Govind Karjol slams Waqf Board for claiming rights over 15000 acres of ancestral land of farmers
Bengaluru City

Stampede Case | ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಗೋವಿಂದ ಕಾರಜೋಳ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?