Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

Public TV
Last updated: May 8, 2023 11:21 am
Public TV
Share
5 Min Read
bjp congress jds 1
SHARE

ಕರ್ನಾಟಕ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಸಮಾವೇಶ, ರೋಡ್‌ ಶೋಗಳು ಬಿರುಸಾಗಿ ನಡೆಯುತ್ತಿದೆ. ಪಕ್ಷಗಳ ನಾಯಕರು ತೆರೆಯಲ್ಲಿ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದರೆ ಪಕ್ಷಗಳ ಕಾರ್ಯಕರ್ತರು, ನಾಯಕರ ಹಿಂಬಾಲಕರು ತೆರೆಮರೆಯಲ್ಲಿ ಡಿಜಿಟಲ್‌ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಈ ವಿಧಾನಸಭಾ ಚುನಾವಣೆ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯಿದೆ. 2014ರ ಲೋಕಸಭೆ, 2018ರ ವಿಧಾನಸಭೆ, 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಡಿಜಿಟಲ್‌ ಮೀಡಿಯಾ ಕೆಲಸ ಮಾಡಿತ್ತು. ಆದರೆ ಈ ಬಾರಿ ಭಾರೀ ಪ್ರಮಾಣದಲ್ಲಿ ಡಿಜಿಟಲ್‌ ಪ್ರಚಾರ ಪ್ರಭಾವ ಬೀರಲಿದ್ದು ಯಾರಿಗೆ ಹೊಡೆತ ನೀಡಲಿದೆ ಎನ್ನುವುದು ಮೇ 13ರಂದು ತಿಳಿಯಲಿದೆ.

ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ನಡೆದ 2014ರ ಚುನಾವಣೆ ಸಂದರ್ಭದಲ್ಲಿ ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್‌ ಮಾತ್ರ ಜನಪ್ರಿಯವಾಗಿತ್ತು. ಬೇರೆ ರಾಜಕೀಯ ಪಕ್ಷಗಳು ಇವುಗಳು ಭಾರತದ ಚುನಾವಣೆಯಲ್ಲಿ ಕೆಲಸ ಮಾಡುತ್ತಾ ಎಂದು ಪ್ರಶ್ನಿಸುತ್ತಿದ್ದರೆ ಇತ್ತ ಬಿಜೆಪಿಯ ಡಿಜಿಟಲ್‌ ತಂಡ ಆಗಲೇ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿ ಯುಪಿಎ ಸರ್ಕಾರವನ್ನೇ ಕೆಡವಿ ಹಾಕಿತ್ತು.

narendra modi 5

ಲೋಕಸಭೆ ಚುನಾವಣೆಯ ನಂತರ ಎಲ್ಲಾ ಪಕ್ಷಗಳು ಡಿಜಿಟಲ್‌ ತಂಡವನ್ನು ಕಟ್ಟಿದವು. ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾದರು. ಹಾಗೇ ನೋಡಿದರೆ ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯವರೆಗೂ ಡಿಜಿಟಲ್‌ ಮೀಡಿಯಾದಲ್ಲಿ ಬಿಜೆಪಿಯೇ ಮುಂದಿತ್ತು. ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಕಾಂಗ್ರೆಸ್‌, ಆಪ್‌, ಜನತಾ ದಳ ಸಾಮಾಜಿಕ ಜಾಲತಾಣ ಬಳಕೆಗೆ ಹೆಚ್ಚು ಒತ್ತು ನೀಡಿದ್ದು ಈ ಬಾರಿ ಮೂರು ಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಹಿಂದೆಂದಿಗಿಂತಲೂ ಬಹಳ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿವೆ. ರಾಜ್ಯದ ಕೆಲ ನಾಯಕರು ತಮ್ಮ ಬ್ರ್ಯಾಂಡ್‌ ಪ್ರಚಾರಕ್ಕೆ ಕಂಪನಿಗಳ ಮೊರೆಯನ್ನು ಹೋಗಿರುವುದು ವಿಶೇಷ.

ಡಿಜಿಟಲ್‌ ಮೀಡಿಯಾ ಜಾಹೀರಾತು ವಿಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಮುಂದಿದೆ. ಪರಿಣಾಮಕಾರಿಯಾಗಿ ಯೂಟ್ಯೂಬ್‌, ಫೇಸ್‌ಬುಕ್‌ ಜೊತೆಗೆ ನ್ಯೂಸ್‌ ವೆಬ್‌ಸೈಟ್‌ಗಳಲ್ಲೂ ಜಾಹೀರಾತು ನೀಡುತ್ತಿದೆ. ಈ ಎಲ್ಲಾ ಪ್ರಚಾರಗಳು ತೆರೆಯಲ್ಲಿ ಕಾಣುತ್ತಿದ್ದರೆ ತೆರೆ ಮರೆಯಲ್ಲಿ ಪಕ್ಷಗಳು ವಾಟ್ಸಪ್‌, ರೀಲ್ಸ್‌ ಮೂಲಕ ಪ್ರಚಾರ ನಡೆಸುತ್ತಿವೆ.

Siddaramaiah and DK Shivakumar Rahul Gandhi

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಡೇಟಾ ಪ್ರಕಾರ ಭಾರತದಲ್ಲಿ ಪ್ರತಿ 100 ಮಂದಿಯಲ್ಲಿ 61 ಮಂದಿ ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದರೆ ಕರ್ನಾಟಕದಲ್ಲಿ 74 ಮಂದಿ ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದಾರೆ. ಟ್ರಾಯ್‌ ಮಾರ್ಚ್‌ 31 ರಂದು ಬಿಡುಗಡೆ ಮಾಡಿದ ಡೇಟಾ ಪ್ರಕಾರ ಕರ್ನಾಟಕದಲ್ಲಿ ಒಟ್ಟು 6,62,09,245 ಮೊಬೈಲ್‌ ಚಂದದಾರರು ಇದ್ದಾರೆ. ಇದರಲ್ಲಿ ಹೊರ ರಾಜ್ಯದವರು, ಒಬ್ಬರೇ ಎರಡು ಸಿಮ್‌ ಬಳಕೆ ಮಾಡುವರು ಎಂದು 1 ಕೋಟಿ ಸಂಖ್ಯೆಯನ್ನು ತೆಗೆದರೂ ಈ ಸಂಖ್ಯೆಗೆ 5.62 ಕೋಟಿ ಆಗುತ್ತದೆ. ಈ ಕಾರಣದಿಂದಾಗಿ ಎಲ್ಲಾ ರಾಜಕೀಯ ಪಕ್ಷಗಳು ಡಿಜಿಟಲ್‌ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಿವೆ.

ಕರ್ನಾಟಕದಲ್ಲಿ ಫೇಸ್‌ಬುಕ್‌, ಟ್ವಿಟ್ಟರ್‌ ಖಾತೆಗಳು ಇಲ್ಲದ ಮನೆ ಇರಬಹುದು. ಆದರೆ ವಾಟ್ಸಪ್‌ ಇಲ್ಲದ ಮನೆಯನ್ನು ತೋರಿಸುವುದು ಇಂದು ಬಹಳ ಕಷ್ಟ. ಕೋವಿಡ್‌ ಸಮಯದಲ್ಲಿ ಶಾಲೆಗಳು ಬಂದ್‌ ಆದ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದವರು ಸಹ ಮಕ್ಕಳಿಗಾಗಿ ಫೋನ್‌ ಖರೀದಿಸಿದ್ದರಿಂದ ಪ್ರತಿ ಮನೆಯಲ್ಲಿ ಕನಿಷ್ಠ ಒಂದಾದರೂ ವಾಟ್ಸಪ್‌ ಇದೆ. ಮನೆ ಮನೆಗೆ ಹೋಗಿ ಪ್ರಚಾರ ನಡೆಸುವುದು ಇಂದು ಕಷ್ಟ. ಈ ಕಾರಣಕ್ಕೆ ರಾಜಕೀಯ ಪಕ್ಷಗಳು ಇಂದು ಡಿಜಿಟಲ್‌ ಮೀಡಿಯಾ ಅದರಲ್ಲೂ ವಾಟ್ಸಪ್‌ ಮೂಲಕ ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿವೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ

ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಮಾಧ್ಯಮಗಳು, ರಾಜಕೀಯ ಪಕ್ಷಗಳ ನಾಯಕರು ಹೇಳಿದ್ದು ಸರಿ ಎನ್ನುವ ಕಾಲ ಹೊರಟು ಹೋಗಿದೆ. ಯಾರು ಸರಿ? ಯಾರು ತಪ್ಪು ಎನ್ನುವುದು ಕ್ಷಣ ಮಾತ್ರದಲ್ಲಿ ಬಯಲಾಗುತ್ತದೆ ಮತ್ತು ಪ್ರತಿಯೊಂದಕ್ಕೂ ಸಾಕ್ಷ್ಯವಾಗಿ ಹಳೆಯ ವೀಡಿಯೋ ಸಿಗುತ್ತದೆ. ಪಕ್ಷಗಳ ಡಿಜಿಟಲ್‌ ತಂಡಗಳು ಹೊಸ ಹೇಳಿಕೆ, ಹಳೆಯ ಹೇಳಿಕೆಯನ್ನು ಜೋಡಿಸಿ ವೀಡಿಯೋ ಮಾಡುತ್ತಿರುವುದು ಇದು ಜನರ ಮೇಲೆ ಜಾಸ್ತಿ ಪ್ರಭಾವ ಬೀರುತ್ತಿದೆ. ಇದರ ಜೊತೆ ಪಕ್ಷದ ನಾಯಕರು ಸುಳ್ಳು ಹೇಳಿದರೆ ನೆಟ್ಟಿಗರೇ ಸಾಕ್ಷ್ಯವನ್ನು ತೆಗೆದು ನೀವು ಹೇಳುತ್ತಿರುವುದು ಸುಳ್ಳು ಎಂದು ಅಲ್ಲೇ ಕೌಂಟರ್‌ ಕೊಡುತ್ತಿದ್ದಾರೆ.

HD Kumaraswamy 2 1

ಉದಾಹರಣೆಗೆ ನಮ್ಮಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಬಿಜೆಪಿಯವರು ಹೇಳಿದ್ದಕ್ಕೆ ಈ ಬಾರಿ ಟಿಕೆಟ್‌ ಯಾವೆಲ್ಲ ಕುಟುಂಬಕ್ಕೆ ಮತ್ತು ನಾಯಕರಿಗೆ ನೀಡಲಾಗಿದೆ ಎಂಬುದನ್ನೇ ಅಲ್ಲೇ ಪೋಸ್ಟ್‌ ಮಾಡುತ್ತಾರೆ. ಉಳಿದ ರಾಜ್ಯಗಳಲ್ಲಿ ಚುನಾವಣೆಯ ಮೊದಲು ಘೋಷಣೆ ಮಾಡಿದ ಗ್ಯಾರಂಟಿ ಇನ್ನೂ ಜಾರಿಯಾಗಿಲ್ಲ? ಇಲ್ಲಿ ನೀವು ಜಾರಿ ಹೇಗೆ ಮಾಡ್ತೀರಿ ಎಂದು ಕಾಂಗ್ರೆಸ್‌ಗೆ ಕೇಳುತ್ತಾರೆ. ನಿಮ್ಮದು ಜಾತ್ಯತೀತ ಪಕ್ಷವಲ್ಲ, ನಿಮ್ಮದು ಕುಟುಂಬದ ಪಕ್ಷ ಎಂದು ಜೆಡಿಎಸ್‌ಗೆ ತಿರುಗೇಟು ನೀಡುತ್ತಾರೆ. ಕಾಂಗ್ರೆಸ್‌ ಐಸಿಯುನಲ್ಲಿದೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಜಗದೀಶ್‌ ಶೆಟ್ಟರ್‌ ಅವರಿಗೆ ಟಾಂಗ್‌ ನೀಡುತ್ತಿದ್ದಾರೆ.

2019ರ ಚುನಾವಣೆಯವರೆಗೆ ಮಾಧ್ಯಮಗಳು ಮಾತ್ರ ಚುನಾವಣೆಯ ಸಮಯದಲ್ಲಿ ಲೋಗೋ ಹಿಡಿದುಕೊಂಡು ಜನರ ಅಭಿಪ್ರಾಯವನ್ನು ಕೇಳುತ್ತಿದ್ದವು. ಆದರೆ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ತೆರೆಯಲ್ಪಟ್ಟ ಪೇಜ್‌ಗಳು ಒಂದೊಂದು ಕ್ಷೇತ್ರವನ್ನು ಟಾರ್ಗೆಟ್‌ ಮಾಡಿ ಜನರ ಬಳಿ ಹೋಗಿ ಅಭಿಪ್ರಾಯವನ್ನು ಸಂಗ್ರಹಿಸುತ್ತಿರುವುದು ವಿಶೇಷ. ಮಾಧ್ಯಮಗಳಲ್ಲಿ ಬರುವ ಅಭಿಪ್ರಾಯಗಳು ಪರ/ ವಿರೋಧ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ತೆರೆಯಲ್ಪಟ್ಟ ಮಾಧ್ಯಮ ಸಂಸ್ಥೆಗಳ ವೀಡಿಯೋಗಳು ಒಂದೇ ಪಕ್ಷದ ಪರವಾಗಿ ಬರುತ್ತಿವೆ. ಈ ವೀಡಿಯೋಗಳು 24 ಗಂಟೆಯ ಒಳಗಡೆ ಲಕ್ಷಗಟ್ಟಲೇ ವ್ಯೂ ಪಡೆಯುತ್ತಿದೆ. ಜೊತೆಗೂ ಈ ವೀಡಿಯೋಗಳನ್ನು ವಾಟ್ಸಪ್‌ ಮೂಲಕವೂ ಹರಿಬಿಡಬಹುದು. ನಾಯಕರ ಬಹಿರಂಗ ಪ್ರಚಾರ, ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಕ್ಕಿಂತಲೂ ಜನರ ಅಭಿಪ್ರಾಯ ಇರುವ ಈ ವಿಡಿಯೋಗಳು ಆ ಕ್ಷೇತ್ರದ ಮತದಾರರ ಮೇಲೆ ಬಹಳ ಬೇಗ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ವೇಳೆ ಇದು ಯಶಸ್ವಿಯಾದರೆ ಸಮೀಕ್ಷೆಗಳು ತಲೆಕೆಳಗೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ವಿಷಯ ಟ್ರೆಂಡಿಂಗ್‌ ಆದರೆ ಅದೇ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಈಗ ಈ ಟ್ರೆಂಡಿಂಗ್‌ಗೆ ಮಹತ್ವ ಕಳೆದುಕೊಂಡಿದೆ. ಯಾಕೆಂದರೆ ಹೊರ ರಾಜ್ಯದಲ್ಲಿ, ವಿದೇಶದಲ್ಲಿ ಕುಳಿತು ಆ ಹ್ಯಾಶ್‌ ಟ್ಯಾಗ್‌ ಬಳಕೆ ಮಾಡಿ ಟ್ರೆಂಡ್‌ ಮಾಡುತ್ತಾರೆ. ಇದರ ಜೊತೆ ನಕಲಿ ಖಾತೆಗಳೇ ಜಾಸ್ತಿ ಇರುತ್ತದೆ. ರಾಜಕೀಯ ಪಕ್ಷಗಳ ಬಣ್ಣಗಳು ಅಲ್ಲೇ ರಿವೀಲ್‌ ಆಗುವುದರಿಂದ ಟ್ರೆಂಡಿಂಗ್‌ ಟಾಪಿಕ್‌ಗಳಿಗೆ ಮೊದಲು ಇದ್ದಷ್ಟು ಮಹತ್ವ ಈಗ ಇಲ್ಲ.

ಈ ಚುನಾವಣೆ ಸೇರಿದಂತೆ ಇಲ್ಲಿಯವರೆಗೆ ಕರ್ನಾಟಕ ಚುನಾವಣೆಯಲ್ಲಿ ಜಾಸ್ತಿ ಚರ್ಚೆಯಾಗುವುದು ಜಾತಿ. ಒಂದು ಜಾತಿಯ ಮತದಾರರ ಸಂಖ್ಯೆ ಜಾಸ್ತಿ ಇದ್ದರೆ ಆ ಜಾತಿಯ ವ್ಯಕ್ತಿಗೆ ಟಿಕೆಟ್‌ ನೀಡಲಾಗುತ್ತದೆ. ಡಿಜಿಟಲ್‌ ಮೀಡಿಯಾದ ಪ್ರಭಾವ ಹೆಚ್ಚಾಗುತ್ತಿದ್ದಂತೆ ಈ ಚಿಂತನೆಗಳು ನಿಧಾನವಾಗಿ ಕಡಿಮೆ ಆಗುತ್ತಿದ್ದು ಜಾತಿ ನೋಡಿ ಮತವನ್ನು ಹಾಕದೇ ವ್ಯಕ್ತಿಯ ಆರ್ಹತೆ, ಕೆಲಸ ನೋಡಿ ಮತ ಹಾಕುವುದಾಗಿ ಜನತೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಾವು ಗಮನಿಸಬಹುದು. ಹಿರಿಯ ಮತದಾರರು ಅಭ್ಯರ್ಥಿಯ ಜಾತಿಯನ್ನು ನೋಡಿ ಪಕ್ಷಗಳನ್ನು ಈಗಲೂ ಬೆಂಬಲಿಸಿದರೆ ವಿಶೇಷವಾಗಿ ಯುವ ಮತದಾರರು ಅಭಿವೃದ್ಧಿ ವಿಚಾರ ನೋಡಿ ಮತ ಹಾಕುವುದಾಗಿ ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣವನ್ನು ಯುವ ಜನತೆಯೇ ಹೆಚ್ಚು ಬಳಕೆ ಮಾಡುತ್ತಿರುವ ಕಾರಣ ಡಿಜಿಟಲ್‌ ಮೀಡಿಯಾದಲ್ಲಿ ಯಾರು ಚೆನ್ನಾಗಿ 40 ವರ್ಷದ ಒಳಗಿನ ಯುವ ಮತದಾರರನ್ನು ಸೆಳೆಯುತ್ತಾರೋ ಅವರಿಗೆ ಈ ಚುನಾವಣೆಯಲ್ಲಿ ಗೆಲುವು ಸಿಗುವ ಸಾಧ್ಯತೆ ಹೆಚ್ಚಿದೆ.

– ಅಶ್ವಥ್‌ ಸಂಪಾಜೆ

TAGGED:bjpcongresselectionjdskarnatakasocial mediaಕರ್ನಾಟಕಕಾಂಗ್ರೆಸ್ಚುನಾವಣೆಜೆಡಿಎಸ್ಬಿಜೆಪಿಸಾಮಾಜಿಕ ಜಾಲತಾಣ
Share This Article
Facebook Whatsapp Whatsapp Telegram

Cinema News

kiccha sudeep birthday Bigg Boss promo released
ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌
Cinema Latest Main Post TV Shows
Pushpa Arunkumar Deepika Das
ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್
Cinema Latest Sandalwood
Actresses request for posthumous Karnataka Ratna award for late Dr. Vishnuvardhan Sarojadevi
ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ
Bengaluru City Cinema Karnataka Latest Sandalwood Top Stories
darshan ballari jail 1
ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ
Cinema Court Latest Main Post
Bharathi vishnuvardhan
ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್
Cinema Karnataka Latest National Sandalwood Top Stories

You Might Also Like

End of BBMP era 500 members to be elected to Greater Bengaluru Authority
Bengaluru City

ಇತಿಹಾಸದ ಪುಟ ಸೇರಿದ ಬಿಬಿಎಂಪಿ – ಜಿಬಿಎಗೆ ಆಯ್ಕೆಯಾಗಲಿದ್ದಾರೆ 500 ಸದಸ್ಯರು

Public TV
By Public TV
52 minutes ago
KC Veerendra Pappi ED Raid
Chitradurga

‘ಕೈ’ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇ.ಡಿ ದಾಳಿ – ಆರು ಐಷಾರಾಮಿ ಕಾರುಗಳು ವಶಕ್ಕೆ

Public TV
By Public TV
55 minutes ago
Koppal Mother death 1
Districts

ಸಂತಾನಹರಣ ಚಿಕಿತ್ಸೆ ವೇಳೆ ತಾಯಿ ಸಾವು – ಅನಸ್ತೇಶಿಯಾ ನೀಡದೇ ಶಸ್ತ್ರಚಿಕಿತ್ಸೆ ಮಾಡಿದ್ದಾಗಿ ಕುಟುಂಬಸ್ಥರ ಆರೋಪ

Public TV
By Public TV
3 hours ago
Bagalkote District Magistrates property seized for not paying compensation to farmers
Bagalkot

ರೈತರಿಗೆ ಪರಿಹಾರ ಹಣ ನೀಡದ ಸರ್ಕಾರ – ಬಾಗಲಕೋಟೆ ಜಿಲ್ಲಾಧಿಕಾರಿಗಳ ವಸ್ತುಗಳು ಜಪ್ತಿ

Public TV
By Public TV
3 hours ago
Chitradurga Croploss
Chitradurga

ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ಬೆಳೆಹಾನಿ – ಜಮೀನುಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

Public TV
By Public TV
4 hours ago
Dr Manjunath
Districts

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?