ಬೆಂಗಳೂರು: ಕೋಲಾರ (Kolar) ಅಖಾಡಕ್ಕಿಳಿದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ನೂರೆಂಟು ವಿಘ್ನ ಶುರುವಾಗಿದೆ. ಬಿಜೆಪಿ (BJP), ಕಾಂಗ್ರೆಸ್ ಆಂತರಿಕ ವಿರೋಧದ ಬಳಿಕ ಜೆಡಿಎಸ್ (JDS) ನಿಂದಲೂ ಸಿದ್ದರಾಮಯ್ಯಗೆ ಮುಹೂರ್ತ ಫಿಕ್ಸ್ ಆಗಿದೆ.
ಸೈಲೆಂಟಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಕೆಣಕಿದ ಸಿದ್ದರಾಮಯ್ಯಗೆ ಸೋಲಿನ ಪಾಠ ಕಲಿಸೋದಾಗಿ ಕುಮಾರಸ್ವಾಮಿ (HD Kumaraswamy) ಶಪಥ ಮಾಡಿದ್ದಾರೆ. ಸಿದ್ದು ಸೋಲಿಸಲು ಅಖಾಡಕ್ಕೆ ಇಳಿಯುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಹೆಚ್ಡಿಕೆ ಮೇಲೆ ಡಿಕೆಗೆ, ರೇವಣ್ಣ ಮೇಲೆ ಸಿದ್ರಾಮಣ್ಣಗೆ ಸಾಫ್ಟ್ ಕಾರ್ನರಾ?
ಒಕ್ಕಲಿಗ, ಮುಸ್ಲಿಂ (Muslims Vote), ಕುರುಬ ಸಮುದಯಗಳ ಸಮೀಕರಣದಲ್ಲಿ ಸಿದ್ದರಾಮಯ್ಯಗೆ ಚಕ್ರವ್ಯೂಹ ಫಿಕ್ಸ್ ಆಗುತ್ತಾ? ಹೆಚ್.ಡಿ ಕುಮಾರಸ್ವಾಮಿ, ಇಬ್ರಾಹಿಂ, ವರ್ತೂರ್ ಪ್ರಕಾಶ್ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡ್ತಾರಾ? ಅನ್ನೋ ಚಿಂತೆ ಈಗ ಶುರುವಾಗಿದೆ.
ಹೆಚ್ಡಿಕೆ ಮಾಸ್ಟರ್ ಪ್ಲಾನ್ ಏನು?: ಕೋಲಾರದಲ್ಲಿ ಒಕ್ಕಲಿಗ, ಮುಸ್ಲಿಂ, ಕುರುಬ ಮತಗಳೇ ನಿರ್ಣಾಯಕವಾಗಿದ್ದು, ಈ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಕುಮಾರಸ್ವಾಮಿ ಪ್ರಚಾರದಿಂದ ಒಕ್ಕಲಿಗರ ಮತ ಪಡೆಯೋದು. ಇಬ್ರಾಹಿಂ ಪ್ರಚಾರದಿಂದ ಮುಸ್ಲಿಮರ ಮತಗಳನ್ನ ಪಡೆಯೋದು ಜೆಡಿಎಸ್ ಪ್ಲಾನ್ ಆಗಿದೆ.
ಇನ್ನೂ ವರ್ತೂರ್ ಪ್ರಕಾಶ್ ಬಿಜೆಪಿ ಅಭ್ಯರ್ಥಿ ಆಗೋದ್ರಿಂದ ಕುರುಬ ಸಮುದಾಯದ ಮತಗಳು ಇಬ್ಭಾಗ ಆಗೋದು ನಿಶ್ಚಿತ. ಹೀಗಾಗಿ ಕುರುಬ ಮತಗಳ ಮೇಲೂ ಜೆಡಿಎಸ್ ಕಣ್ಣಿಟ್ಟಿದೆ. ಸಿದ್ದರಾಮಯ್ಯರನ್ನ ಸೋಲಿಸೋಕೆ ಪ್ರತ್ಯೇಕ ಸಮಾವೇಶ ಮಾಡಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ರಂಗೇರಿದ ಚುನಾವಣಾ ಅಖಾಡ- ಡಿಕೆಶಿ ಭೇಟಿ ಬೆನ್ನಲ್ಲೇ ಶಿವರಾಮೇಗೌಡ ಶಕ್ತಿ ಪ್ರದರ್ಶನ
ಪಕ್ಷದ ಅಭ್ಯರ್ಥಿ ಶ್ರೀನಾಥ್ ಪರ 2 ಬಹಿರಂಗ ಸಮಾವೇಶ ಮಾಡುವುದು. ಸಿ.ಎಂ ಇಬ್ರಾಹಿಂ ಅವರಿಂದ ಅಲ್ಪಸಂಖ್ಯಾತ ಸಮಾವೇಶ ಮಾಡಲು ಸಿದ್ಧತೆ. ಬಹಿರಂಗ ಸಮಾವೇಶ ಅಲ್ಲದೇ ಕೋಲಾರದಲ್ಲಿ ರೋಡ್ ಶೋ, ಕೋಲಾರದ ಬೂತ್ ಮಟ್ಟದ ವಿಶೇಷ ಸಭೆ ಮಾಡೋದು, ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಅಂತ ಪ್ರಚಾರ ಮಾಡಿ ಮತ ಪಡೆಯಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ.
ಸಿದ್ದರಾಮಯ್ಯ ಒಕ್ಕಲಿಗರು ಸಿಎಂ ಆಗೋಕೆ ಬಿಡೋದಿಲ್ಲ. ಸಿದ್ದರಾಮಯ್ಯಗೆ ಪಾಠ ಕಲಿಸಿ ಅನ್ನೋ ಸಂದೇಶ ರವಾನೆ ಮಾಡೋ ಮೂಲಕ ಸಿದ್ದರಾಮಯ್ಯರನ್ನ ಸೋಲಿಸಲು ಹೆಚ್ಡಿಕೆ ಪಕ್ಕಾ ಪ್ಲಾನ್ ಮಾಡಿದ್ದಾರೆ ಎಂದು ಜೆಡಿಎಸ್ ಆಪ್ತ ಮೂಲಗಳು ತಿಳಿಸಿವೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k