ಬೆಂಗಳೂರು/ಬೆಳಗಾವಿ: ನನ್ನದೊಂದು, ಇನ್ನೊಂದು.. ಎರಡು ಕ್ಷೇತ್ರಗಳಲ್ಲಿ ನಂದೇ ಆಟ. ಮರ್ಯಾದೆಯೂ ಹೋಯ್ತು.. ಅಧಿಕಾರ ಹೋಯ್ತು.. ಆದ್ರೀಗ ನಾನು ಗೆಲ್ಲಬೇಕು. ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕ್ಷೇತ್ರದಲ್ಲಿ ನಾನು ಹೇಳಿದವರಿಗೆ ಟಿಕೆಟ್ ಕೊಡಬೇಕೆಂಬ ಹಠಕ್ಕೆ ಬಿದ್ದಂತೆ ರಮೇಶ್ ಜಾರಕಿಹೊಳಿ (Ramesh Jarkiholi) ನಡೆ ಇದೆ.
ನನ್ನ ಈ ಒಂದು ಮಾತಿಗಾದ್ರೂ ಬೆಲೆ ಕೊಡಿ ಅಂತಾ ರಮೇಶ್ ಜಾರಕಿಹೊಳಿ ಮನವಿ ಮಾಡಿರುವ ಬಗ್ಗೆ ಬಿಜೆಪಿ (BJP) ವೇದಿಕೆಯಲ್ಲಿ ಚರ್ಚೆ ಆಗ್ತಿದೆ. ಹಾಗಾದ್ರೆ ಬೆಳಗಾವಿ (Belagavi) ಗ್ರಾಮೀಣದಲ್ಲಿ ರಮೇಶ್ ಆಟ ಹೇಗೆ ನಡೆಯತ್ತಾ? ಏನಿದೆ ಪ್ಲ್ಯಾನ್? ಎಂಬ ಕುತೂಹಲ ಗರಿಗೆದರಿದೆ. ಇದನ್ನೂ ಓದಿ: OTP ಕೊಟ್ರೆ ರೇಷ್ಮೆ ಸೀರೆ ಗಿಫ್ಟ್ – ಮಹಿಳಾ ಮತದಾರರ ಓಲೈಕೆಗೆ ಹೊಸ ತಂತ್ರ
ಅಂದಹಾಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೋಟೆಯಲ್ಲಿ ರಮೇಶ್ ಜಾರಕಿಹೊಳಿ ನಯಾ ಫೇಸ್ ಗೇಮ್ ಶುರು ಮಾಡಿದ್ದಾರಂತೆ. ಪದೇ ಪದೇ ಸೋತವರಿಗೆ ಟಿಕೆಟ್ ಕೊಡುವುದು ಬೇಡ, ಹೊಸ ಫೇಸ್ಗೆ ಟಿಕೆಟ್ ಕೊಡಿ. ನಾನು ಹೇಳಿದ ಹೊಸ ಫೇಸ್ಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಬ್ದಾರಿ ನನ್ನದು ಎಂದು ಮನವಿ ಮಾಡಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯದ ರಾಷ್ಟ್ರೀಯ ನಾಯಕರೊಬ್ಬರ ಮುಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಚಾರದಲ್ಲಿ ಹೊಸ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಸ್ತೆ ಅಗೆದ್ರೆ ಎಂಜಿನಿಯರ್ಗಳ ಸಂಬಳ ಕಟ್- ಚುನಾವಣೆ ಹೊತ್ತಲ್ಲೇ BBMP ಖಡಕ್ ಆದೇಶ
ಬಿಜೆಪಿ ವರಿಷ್ಠರಿಂದ ಸದ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ. ಆದಾದ ಬಳಿಕವೇ ರಮೇಶ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಬ್ಬರಿಸಿದ್ರು. ವೈಯುಕ್ತಿಕ ಪ್ರತಿಷ್ಠೆಯ ಫೈಟ್ಗೆ ವೇದಿಕೆ ಆಗಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ರಂಗೇರುತ್ತಿದ್ದು, ಬಿಜೆಪಿಯಲ್ಲಿ ಕಳೆದ ಬಾರಿ ಸೋತಿದ್ದ ಸಂಜಯ್ ಪಾಟೀಲ್ಗೆ ಟಿಕೆಟ್ ಕೊಡ್ತಾರೋ? ಅಥವಾ ಹೊಸ ಫೇಸ್ ಹುಡುಕಾಟವೋ? ಎಂಬ ಕುತೂಹಲ ಮನೆ ಮಾಡಿದೆ. ರಮೇಶ್ ಜಾರಕಿಹೊಳಿ ಮಾತಿಗೆ ಹೈಕಮಾಂಡ್ ಮಣೆ ಹಾಕಿದ್ರೆ ರಾಜ್ಯದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಸ್ಟಾರ್ ವಾರ್ ರಿವೇಂಜ್ ಕ್ಷೇತ್ರ ಆಗುತ್ತೆ ಅನ್ನೋದಂತೂ ಪಕ್ಕಾ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k