ನಗರಕ್ಕೆ ನೀರು ಕೊಡಲು ರೈತರ ಬೆಳೆಗಳಿಗೆ ವಿಷವಿಟ್ಟ ಅಧಿಕಾರಿಗಳು- ಮುಖ್ಯಮಂತ್ರಿಗಳೇ ಇದು ನಿಮ್ಮ ಕ್ಷೇತ್ರದ ಕಥೆ!

Public TV
1 Min Read
MYS RAITA WATER 1

ಮೈಸೂರು: ಹೊಲಕ್ಕೆ, ತೋಟಕ್ಕೆ ನೀರಿಲ್ಲ ಅಂತಾ ರೈತರು ಕಂಗಾಲಾಗಿರುವುದನ್ನು ನೋಡಿದ್ವೀವಿ. ಆದರೆ ಇಲ್ಲಿ ತೋಟಕ್ಕೆ ನೀರು ಹರಿಯುತ್ತಿರುವುದೇ ರೈತರ ಪಾಲಿಗೆ ಕಂಟಕವಾಗಿದೆ. ನೀರು ಒಂದರ್ಥದಲ್ಲಿ ರೈತರ ಪಾಲಿಗೆ ಮರಣ ಶಾಸನ ಬರೆಯುತ್ತಿದೆ. ಯಾಕಂದ್ರೆ ನೀರುನೀರಾಗಿ ಉಳಿದಿಲ್ಲ ವಿಷವಾಗಿ ಮಾರ್ಪಟ್ಟಿದೆ.

ಈ ಘಟನೆ ನಡೆದಿರೋದು ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾ ವ್ಯಾಪ್ತಿಯ ಬಿದರಗೂಡು ಗ್ರಾಮದಲ್ಲಿ. ಮೈಸೂರು ನಗರಕ್ಕೆ ಕಬಿನಿ ನದಿಯಿಂದ ಕುಡಿಯುವ ನೀರು ಹರಿಸಲು ಬಿದರಗೂಡು ಸಮೀಪ ನೀರು ಶುದ್ಧೀಕರಣ ಘಟಕವನ್ನು ಕರ್ನಾಟಕ ಕುಡಿಯುವ ನೀರು ಸರಬರಾಜು ಇಲಾಖೆ ಸ್ಥಾಪಿಸಿದೆ. ಈ ಘಟಕದಲ್ಲಿ ನೀರು ಶುದ್ಧೀಕರಿಸಿ ಉಳಿಯುವ ಅನುಪಯುಕ್ತ ನೀರನ್ನು ವ್ಯವಸ್ಥಿತವಾಗಿ ವಿಸರ್ಜಿಸದೆ ಆ ನೀರನ್ನು ಅಕ್ಕಪಕ್ಕದ ಜಮೀನುಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ.

MYS RAITA WATER 2

ಕಳೆದ ಐದಾರು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಿದೆ. ಅಡಕೆ, ತೆಂಗು, ಶುಂಠಿ, ಬಾಳೆ ಬೆಳೆಯುತ್ತಿದ್ದ ರೈತರು, ಹೀಗೆ ತೋಟಕ್ಕೆ ನೀರು ತುಂಬುತ್ತಿರುವ ಕಾರಣ ಬೆಳೆ ಬೆಳೆಯಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ರೈತರು ನೂರು ಬಾರಿ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಇತ್ತ ಗಮನ ಹರಿಸಿ ರೈತರ ನೆರವಿಗೆ ಧಾವಿಸಬೇಕಿದೆ. ವಿಷದ ನೀರನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.

MYS RAITA WATER 3

MYS RAITA WATER 5

MYS RAITA WATER 6

MYS RAITA WATER 7

MYS RAITA WATER 8

MYS RAITA WATER 9

MYS RAITA WATER 11

MYS RAITA WATER 10

MYS RAITA WATER 12

MYS RAITA WATER 13

MYS RAITA WATER 14

MYS RAITA WATER 15

Share This Article
Leave a Comment

Leave a Reply

Your email address will not be published. Required fields are marked *