ಬೆಂಗಳೂರು: ರಾಜ್ಯದಲ್ಲಿ ಇಂದು 1,405 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿನಿಂದಾಗಿ 26 ಮಂದಿ ಮೃತಪಟ್ಟಿದ್ದಾರೆ.
ಇಂದಿನ ಕೋವಿಡ್ ಪ್ರಕರಣಗಳ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ರಾಜ್ಯದಲ್ಲಿ ಕೋವಿಡ್ ಪಾಸಿಟಿವಿ ದರ ಶೇ.2ಕ್ಕಿಂತ ಕಡಿಮೆ ದಾಖಲಾಗಿದೆ. ಅಂದರೆ ಶೇ.1.91 ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಗುಲಗಳಲ್ಲಿ ಗಂಟೆ ಸೌಂಡ್ ಜಾಸ್ತಿ ಬಂದ್ರೆ ದಂಡ, ಕೇಸ್- ಮುಜರಾಯಿ ಇಲಾಖೆಯಿಂದ ಹೊಸ ಆದೇಶ
Test positivity rate falls below 2% in Karnataka today:
◾New cases in State: 1,405
◾New cases in B'lore: 765
◾Positivity rate in State: 1.91%
◾Discharges: 5,762
◾Active cases: State- 26,832; B'lore- 11k
◾Deaths:26 (B'lore- 6)
◾Tests: 73,286#COVID19 #Covid_19
— Dr Sudhakar K (@mla_sudhakar) February 15, 2022
ಬೆಂಗಳೂರಿನಲ್ಲಿ ಇಂದು 765 ಮಂದಿಗೆ ಸೋಂಕು ತಗುಲಿದ್ದು, ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸದ್ಯ 26,832 ಸಕ್ರಿಯ ಪ್ರಕರಣಗಳಿವೆ. ಇಂದು 73,286 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈ ತುಂಬಾ ಬಟ್ಟೆ ತೊಟ್ಟರೆ ಉರ್ಫಿ ಹೇಗೆ ಕಾಣಬಹುದು?- ನೆಟ್ಟಿಗರ ಪ್ರಶ್ನೆ