ಬೆಂಗಳೂರಿನಿಂದ ಮಡಿಕೇರಿಗೆ ರಾಜಹಂಸದಲ್ಲಿ ತೆರಳಿದ್ದ ಕೊರೊನಾ ಪೀಡಿತ

Public TV
1 Min Read
madikeri cariappa circle 2

ಬೆಂಗಳೂರು: ಕೊರೊನಾ ಪೀಡಿತ 15ನೇ ವ್ಯಕ್ತಿ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಡಿಕೇರಿವರೆಗೆ ರಾಜಹಂಸ ಬಸ್ಸಿನಲ್ಲಿ ತೆರಳಿದ್ದ ವಿಚಾರ ಈಗ ಲಭ್ಯವಾಗಿದೆ.

ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಮಾರ್ಚ್ 15ರ  ರಾತ್ರಿ ಬಸ್ಸಿನಲ್ಲಿ ಮೈಸೂರಿನ ಸ್ಯಾಟಲೈಟ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿಂದ ರಾತ್ರಿ 11.15ರ ರಾಜಹಂಸ ಬಸ್ಸಿನಲ್ಲಿ ಮಡಿಕೇರಿಗೆ ಪ್ರಯಾಣ ಮಾಡಿ ಬಳಿಕ ಗ್ರಾಮಕ್ಕೆ ತೆರಳಿದ್ದಾನೆ.

coronavirus test

ರಾಜಹಂಸ ಬಸ್ ಮೈಸೂರಿನಲ್ಲಿ ಟೀ, ಕಾಫಿಗೆ ನಿಲ್ಲಿಸಿತ್ತು. ಈ ವೇಳೆ ವ್ಯಕ್ತಿ ಹೋಟೆಲಿಗೆ ತೆರಳಿ ಕಾಫಿ ಸೇವಿಸಿದ್ದಾನೆ. ಸಂಜೆ ಮನೆಗೆ ಬಂದ ನಂತರ ಸುಸ್ತು, ಜ್ವರದ ಲಕ್ಷಣ ಕಂಡು ಬಂದಿದೆ. ಕೂಡಲೇ ಮನೆಯವರು ಆತನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿರುವ ಎಲ್ಲಾ ಬಸ್ ಗಳಿಗೆ ಈಗ ಫ್ಯೂಮಿಗೇಷನ್ ಮಾಡಲಾಗುತ್ತಿದೆ. ಚಾಲಕ ನಿರ್ವಾಹಕ ಸೇರಿದಂತೆ ಸೋಂಕಿತ ವ್ಯಕ್ತಿ ಟ್ರಾವೆಲ್ ಮಾಡಿದ ಬಸ್ ಮಾಹಿತಿಯನ್ನು ಪತ್ತೆ ಮಾಡುವಾಗ ಸಾಕಷ್ಟು ಜನ ಪ್ರಯಾಣಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸೋಂಕು ಲಕ್ಷಣ ಕಂಡು ಬಂದ ಕೂಡಲೇ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *