Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಾತು ತಪ್ಪದ ಯಡಿಯೂರಪ್ಪ ಮಾತು ತಪ್ಪಿ ಬಿಟ್ರಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಾತು ತಪ್ಪದ ಯಡಿಯೂರಪ್ಪ ಮಾತು ತಪ್ಪಿ ಬಿಟ್ರಾ?

Bengaluru City

ಮಾತು ತಪ್ಪದ ಯಡಿಯೂರಪ್ಪ ಮಾತು ತಪ್ಪಿ ಬಿಟ್ರಾ?

Public TV
Last updated: February 7, 2020 1:25 pm
Public TV
Share
3 Min Read
BS Yeddyurappa Session
SHARE

– ಸುಕೇಶ್ ಡಿಎಚ್
ರಾಜ್ಯ ರಾಜಕಾರಣದಲ್ಲಿ ನುಡಿದಂತೆ ನಡೆಯುವ ನಾಯಕ ಅನ್ನೋ ಇಮೇಜ್ ಉಳಿಸಿಕೊಂಡ ಏಕೈಕ ನಾಯಕ ಅಂದರೆ ನೋ ಡೌಟ್ ಅದು ಒನ್ ಅಂಡ್ ಓನ್ಲಿ ಯಡಿಯೂರಪ್ಪ. ಆಡಳಿತದ ವಿಷಯದಲ್ಲಿ ಯಡಿಯೂರಪ್ಪ ನೂರಕ್ಕೆ ನೂರು ನುಡಿದಂತೆ ನಡೆದಿದ್ದಾರೆ ಎಂದರೆ ಅದು ಖಂಡಿತ ಸುಳ್ಳು. 2008ರಲ್ಲೇ ಇರಬಹುದು, ಈಗಲೇ ಇರಬಹುದು ಹೇಳಿದ್ದನ್ನೆಲ್ಲ ಮಾಡಿಲ್ಲ, ಮಾಡ್ತೀನಿ ಅಂದ ಎಲ್ಲ ಕೆಲಸವೂ ಮಾಡಿ ಮುಗಿಸಿಲ್ಲ. ಆದರೆ ತಮ್ಮನ್ನು ನಂಬಿ ಬಂದವರನ್ನ ಎಂದಿಗೂ ಕೈ ಬಿಡಲ್ಲ ಅನ್ನೋದರಲ್ಲಿ ಕೊನೆ ಪಕ್ಷ ನಂಬಿದವರನ್ನ ಕೈ ಹಿಡಿಯುವ ಪ್ರಯತ್ನವನ್ನಾದರೂ ಪ್ರಾಮಾಣಿಕವಾಗಿ ಮಾಡುವುದರಲ್ಲಿ ಯಡಿಯೂರಪ್ಪಗೆ ಯಡಿಯೂರಪ್ಪನವರೇ ಸಾಟಿ.

SUKESH STRAIGHT HIT

ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅನ್ನೋ ಕಾಲದಿಂದ ಈಗಿನವರೆಗೂ ಹಿಡಿದ ಹಟ ಸಾಧಿಸುವುದರಲ್ಲಿ ಯಡಿಯೂರಪ್ಪ ಛಲದಂಕ ಮಲ್ಲ ಅನ್ನೋದರಲ್ಲಿ ನೋ ಡೌಟ್. ತಮ್ಮ ರಾಜಕೀಯ ಜೀವನದ ಉದ್ದಕ್ಕೂ `ಕೊಟ್ಟ ಮಾತಿಗೆ ತಪ್ಪದ ಯಡಿಯೂರಪ್ಪ’ ಎಂದೇ ಹೆಸರು ಗಳಿಸಿದವರು. ಕೆಲವೊಮ್ಮೆ ಎಡವಿದರೂ ಅದನ್ನು ಇನ್ನೊಂದು ರೀತಿಯಲ್ಲಿ ಸರಿಪಡಿಸಿಕೊಂಡು ಮಾತು ಕೊಟ್ಟವರನ್ನು ಸಮಾಧಾನ ಪಡಿಸುವ ಛಾತಿಯೂ ಯಡಿಯೂರಪ್ಪನವರಿಗೆ ಹೊಸತಲ್ಲ. ಆದರೆ ಇತರೇ ನಾಯಕರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ ಎಂಬಂತ ವರ್ತನೆಗಿಂತ ಯಡಿಯೂರಪ್ಪ ನೂರು ಪಾಲು ಮೇಲು. ಅವರ ಆ ಗುಣ ಅವರಿಗೆ ಪಕ್ಷವನ್ನು ಮೀರಿದ ಇಮೇಜನ್ನ ತಂದುಕೊಟ್ಟಿದ್ದು ಸುಳ್ಳಲ್ಲ. ಆದರೆ ಈ ಬಾರಿ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಬಿಎಸ್ ವೈ ಎಡವಿದ್ರು ಅನ್ನೋದು ಸುಳ್ಳಲ್ಲ.

CABINET BSY 2 copy

ರಾಜೀನಾಮೆ ಕೊಟ್ಟು ಸಮ್ಮಿಶ್ರ ಸರಕಾರವನ್ನ ಕೆಡವಿದ 17 ಜನರಿಗೂ ಮಂತ್ರಿ ಭಾಗ್ಯ ಗ್ಯಾರಂಟಿ ಅನ್ನೋ ಭರವಸೆ ನೀಡಲಾಗಿತ್ತು. ಪ್ರತಾಪ ಗೌಡ ಪಾಟೀಲ್ ಹಾಗೂ ಮುನಿರತ್ನರನ್ನು ಹೊರತು ಪಡಿಸಿ ಉಳಿದ 15 ಜನ ಮಂತ್ರಿ ಸ್ಥಾನದ ಕನಸನ್ನ ಕಣ್ಣು ತುಂಬಿ ತುಂಬಿಕೊಂಡವರೆ. ಆದರೆ ಸೋಲು ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಕನಸಿಗೆ ತಣ್ಣೀರು ಎರಚಿದ್ರೆ ಚುನಾವಣೆಯಲ್ಲಿ ಸ್ಪರ್ಧೆಯೇ ಮಾಡದ ರೋಶನ್ ಬೇಗ್ ಹಾಗೂ ಆರ್.ಶಂಕರ್ ಮಂತ್ರಿಗಿರಿಯ ಕನವರಿಕೆಯಲ್ಲೇ ದಿನ ಕಳೆಯುವಂತಾಗಿದೆ. ಹಾಗೆ ನೋಡೋದಾದರೆ ಗೆದ್ದವರ ಪೈಕಿ 11 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಸಾಹುಕಾರನ ನೆರಳಿನಂತೆ ಕಾಣುವ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದಿಂದ ವಂಚಿತರಾದರು. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿ ಕುಮಟಳ್ಳಿಯನ್ನ ಸೈಡಿಗೆ ತಳ್ಳಿದರು. ಪ್ರತಿಭಟನೆಯ ಧ್ವನಿ ಇಲ್ಲದೆ ಮಹೇಶ್ ಕುಮಟಳ್ಳಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ಮೌನಕ್ಕೆ ಜಾರಿದ್ದಾರೆ.

ಇನ್ನೊಂದೆಡೆ ಸೋಲಾಗಲಿ, ಗೆಲುವಾಗಲಿ ನಮ್ಮ ತ್ಯಾಗಕ್ಕೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆಯಲ್ಲೇ ವಿಶ್ವನಾಥ್, ಎಂಟಿಬಿ, ರೋಶನ್ ಬೇಗ್ ಹಾಗೂ ಆರ್.ಶಂಕರ್ ಆಶಾವಾದಿಗಳಾಗಿದ್ದರು. ಅವರಿಗಿದ್ದ ಧೈರ್ಯ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ ಅನ್ನೋದು. ಆದರೆ ಕೊಟ್ಟ ಮಾತಿಗೆ ತಪ್ಪಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪಗೆ ಎದುರಾಗಿದೆ. ವೈಯಕ್ತಿಕ ನೆಲೆಗಟ್ಟಲ್ಲಿ ಯಡಿಯೂರಪ್ಪ ಎಷ್ಟೇ ಪ್ರಬಲರಿರಬಹುದು ಆದರೆ ಹೈಕಮಾಂಡ್ ನಿರ್ದೆಶನ ಹಾಗೂ ಪ್ರಸ್ತುತ ರಾಜಕೀಯ ಸನ್ನಿವೇಶ ಎರಡೂ ಯಡಿಯೂರಪ್ಪನವರ ಕೈ ಕಟ್ಟಿ ಹಾಕಿರುವುದಂತು ಸತ್ಯ.

BY vijayendra 6

ಎಲ್ಲಕ್ಕಿಂತ ಮುಖ್ಯವಾಗಿ ಸ್ವತಃ ಯಡಿಯೂರಪ್ಪನವರೇ ಕೈ ಕೈ ಹಿಸುಕಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದ್ದು ಮೂಲ ಬಿಜೆಪಿಗರ ವಿಷಯದಲ್ಲೇ. ಉಮೇಶ್ ಕತ್ತಿಯಂತ ಅಸಮಾಧಾನಿತರನ್ನ ಸಮಾಧಾನ ಪಡಿಸುವ ಭರದಲ್ಲಿ ಸಚಿವ ಸ್ಥಾನದ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಮಾತು ಉಳಿಸಿಕೊಳ್ಳಲಾರದೆ ಕೈ ಚೆಲ್ಲಿದ್ದಾರೆ. ಇನ್ನು ನೂತನ ಸಚಿವರಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆಯ ಭರವಸೆ ನೀಡಿದ್ದಾರೋ ಗೊತ್ತಿಲ್ಲ. ಕೊಟ್ಟ ಮಾತಿನಂತೆ ಖಾತೆ ಹಂಚಲಾಗದಿದ್ದರೆ ಸಿಎಂ ಮತ್ತಷ್ಟು ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.

ಹಾಗೇ ನೋಡಿದರೆ ಇಂತಹುದೆ ಸಂದಿಗ್ಧ ಪರಿಸ್ಥಿತಿಯನ್ನ 2013 ರಲ್ಲೂ ಯಡಿಯೂರಪ್ಪ ಎದುರಿಸಿದ್ದರು. ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಕಟ್ಟಿದಾಗಲೂ ಇಂತಹುದೇ ಸ್ಥಿತಿ ನಿರ್ಮಾಣವಾಗಿತ್ತು. ಭರವಸೆ ನೀಡಿ ತಮ್ಮೊಂದಿಗೆ ಕರೆದೊಯ್ದ ನಾಯಕರಿಗೆ ಸೂಕ್ತ ಸ್ಥಾನಮಾನ ಕೊಡಿಸುವಲ್ಲಿಯೂ ವಿಫಲರಾಗಿದ್ದರು. ಯಡಿಯೂರಪ್ಪರನ್ನು ನಂಬಿಕೊಂಡು ದಿನ ಬೆಳಗಾದರೆ ಬಿಜೆಪಿ ನಾಯಕರಿಗೆ ಬೈಯ್ಯುತ್ತಿದ್ದ ಲಕ್ಷ್ಮಿನಾರಾಯಣ ಹಾಗೂ ಧನಂಜಯ ಕುಮಾರ್ ಆನಂತರ ಎಷ್ಟೇ ಬಾಗಿಲು ಬಡಿದರೂ ಬಿಜೆಪಿ ಬಾಗಿಲು ಅವರ ಪಾಲಿಗೆ ತೆರೆಯಲೇ ಇಲ್ಲ.

yeddyurappa bsy 4

ಬಿಜೆಪಿ ಭೀಷ್ಮ ಅಡ್ವಾಣಿಯವರಿಗೆ ಬೈದ ಧನಂಜಯ್ ಕುಮಾರ್ ಅವರ ರಾಜಕೀಯ ಭವಿಷ್ಯವೇ ಮುಗಿದು ಹೋಯ್ತು. ಯಡಿಯೂರಪ್ಪರನ್ನ ನಂಬಿದರೆ ಅತಂತ್ರವೇ ಖಾಯಂ ಅಂದುಕೊಂಡ ಲಕ್ಷ್ಮಿನಾರಾಯಣ್ ಕಾಂಗ್ರೆಸ್ ಸೇರಿಕೊಂಡರು. ವಾಪಸ್ ಬಿಜೆಪಿಗೆ ಬಂದು ಮತ್ತೆ ಹಳೆಯ ಹಿಡಿತವನ್ನೇ ಸಾಧಿಸಿದರು. ತಮ್ಮ ಬೆಂಬಲಿಗರ ಹಿತ ಕಾಯುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಲಿಲ್ಲ. ಈಗ ಅಂತಹುದೆ ಸಂಕಷ್ಟಕ್ಕೆ ಯಡಿಯೂರಪ್ಪ ಸಿಲುಕಿದ್ದಾರೆ. ಸ್ವತಃ ಅವರೇ ಅಧಿಕಾರ ನಡೆಸುತ್ತಿದ್ದಾರೆ, ಆದರೆ ಭರವಸೆ ನೀಡಿದವರಿಗೆಲ್ಲಾ ಅಧಿಕಾರ ಕೊಡಿಸಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ.

ಯಡಿಯೂರಪ್ಪ ಮಾತು ಕೊಟ್ಟರೆ ಮುಗಿಯಿತು ಅನ್ನೋ ಮಾತು ನಿಧಾನಕ್ಕೆ ಸುಳ್ಳಾಗುತ್ತಿದೆಯೇ ಗೊತ್ತಿಲ್ಲ ಆದರೆ ಹೊಸದಾಗಿ ಯಾರಿಗೂ ಮಾತು ಕೊಡದಂತಹ ಸ್ಥಿತಿಯಲ್ಲಿ ಯಡಿಯೂರಪ್ಪ ಇದ್ದಾರೆ ಅನ್ನುವುದಂತೂ ನಿಜ.

TAGGED:bengalurubjpkarnatakaminister postyeddyurappaಕರ್ನಾಟಕಕಾಂಗ್ರೆಸ್ಕೆಜೆಪಿಕ್ಯಾಬಿನೆಟ್ಬಿಜೆಪಿಮಹೇಶ್ ಕುಮಟಳ್ಳಿಯಡಿಯೂರಪ್ಪಸಂಪುಟ ವಿಸ್ತರಣೆ
Share This Article
Facebook Whatsapp Whatsapp Telegram

Cinema news

Bharti Singh Haarsh Limbachiyaa
ಹಾಸ್ಯನಟಿ ಭಾರ್ತಿ ಸಿಂಗ್‌, ಹರ್ಷ್‌ ಲಿಂಬಾಚಿಯಾ ದಂಪತಿಗೆ 2ನೇ ಮಗು ಜನನ
Bollywood Cinema Latest Top Stories
Koragajja Kannada Film 1
ಕೊರಗಜ್ಜ ಚಿತ್ರಕ್ಕಿದೆ ಮೆಸ್ಸಿ ಹಾಡು ಕ್ರಿಯೇಟ್ ಮಾಡಿದ ತಂಡದ ಲಿಂಕ್
Cinema Latest TV Shows
Ranya Rao 1
ಕಾಫಿಪೋಸಾ ಆದೇಶ ಪ್ರಶ್ನಿಸಿದ್ದ ರನ್ಯಾಗೆ ಮತ್ತೆ ಶಾಕ್ – ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru City Cinema Court Districts Karnataka Latest Top Stories
Vijay Deverakonda
ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಅಪ್‌ಡೇಟ್‌
Cinema Latest South cinema

You Might Also Like

Bangladesh Hindu Man
Latest

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕ್ರೂರ ಹತ್ಯೆ – 7 ಮಂದಿ ಅರೆಸ್ಟ್‌

Public TV
By Public TV
17 minutes ago
Suicide attempt by jumping onto railway tracks Loco pilot stops train and rushes to rescue in Sagar Shivamogga
Crime

ಸಾಗರ | ರೈಲ್ವೇ ಹಳಿಗೆ ಹಾರಿ ಆತ್ಮಹತ್ಯೆ ಯತ್ನ – ರೈಲು ನಿಲ್ಲಿಸಿ ರಕ್ಷಣೆಗೆ ಧಾವಿಸಿದ ಲೋಕೋ ಪೈಲಟ್‌

Public TV
By Public TV
30 minutes ago
Sea turtle nest
Latest

ಕಾರವಾರ| ಮಂಜುಗುಣಿ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ

Public TV
By Public TV
44 minutes ago
JCB
Bengaluru City

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ – 200 ಮನೆಗಳು ನೆಲಸಮ

Public TV
By Public TV
47 minutes ago
Shubam gill
Cricket

ಟಿ20 ವಿಶ್ವಕಪ್‌ಗೆ ತಂಡ ಪ್ರಕಟ – ಗಿಲ್‌ ಔಟ್‌, ಅಕ್ಷರ್‌ ಪಟೇಲ್‌ಗೆ ಉಪನಾಯಕನ ಪಟ್ಟ

Public TV
By Public TV
56 minutes ago
teacher and Hotel worker die of heart attack in Hassan
Districts

ಹಾಸನ | ಹೃದಯಾಘಾತಕ್ಕೆ ಶಿಕ್ಷಕಿ ಸೇರಿ ಇಬ್ಬರು ಬಲಿ

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?