ಮೈತ್ರಿ ಸರ್ಕಾರದ ಬೈ ಎಲೆಕ್ಷನ್ ಚಕ್ರವ್ಯೂಹ ಭೇದಿಸಲು ಬಿಜೆಪಿ ಪ್ಲಾನ್-ಹೈಕಮಾಂಡ್‍ನಿಂದ 2+1 ಫಾರ್ಮುಲಾ

Public TV
2 Min Read
BJP Flag 1

ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ನಿರತವಾಗಿವೆ. ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೈತ್ರಿ ಸರ್ಕಾರಕ್ಕೆ ತಿರುಗೇಟು ನೀಡಲು ಉಪಕದನದ ರಣತಂತ್ರಗಳನ್ನು ರಚಿಸಲು ಬಿಜೆಪಿ ಮುಂದಾಗಿದೆ.

BJP 1

ಹೀಗಾಗಿ ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜ್ಯ ನಾಯಕರಿಗೆ 2+1 ಫಾರ್ಮುಲಾ ಅನುಸರಿಸುವಂತೆ ಸೂಚಿಸಿದೆ. ಉಪ ಚುನಾವಣೆ ಇಷ್ಟವಿಲ್ಲದಿದ್ದರೂ ಬಿಜೆಪಿಗೆ ಬೈ ಎಲೆಕ್ಷನ್ ನಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. 3 ಕ್ಷೇತ್ರಗಳ ಲೋಕಸಭೆ ಉಪಚುನಾವಣೆಯಲ್ಲಿ ಎರಡು ಕ್ಷೇತ್ರ ಗೆಲ್ಲೋದು, ಎರಡು ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ 1 ಕ್ಷೇತ್ರ ಗೆಲ್ಲೋದು ಬಿಜೆಪಿಯ 2+1 ಫಾರ್ಮುಲಾ. ಚುನಾವಣೆಯ 5 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಬಿಜೆಪಿ 5 ತಂಡಗಳನ್ನು ರಚಿಸಿದೆಯಂತೆ. ಈ ಎಲ್ಲ ಟೀಂಗಳು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

2+1 ಬಿಜೆಪಿ ಟಾಸ್ಕ್

ಟೀಂ ನಂಬರ್ 1:
ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಶಿವಮೊಗ್ಗ ಉಸ್ತುವಾರಿ
ಯಡಿಯೂರಪ್ಪರಿಗೆ ಈಶ್ವರಪ್ಪ, ವಿಜಯೇಂದ್ರ ಸಾಥ್
ಒಟ್ಟು ಮೂವರ ನೇತೃತ್ವದ ಟೀಂಗೆ ಸಾಥ್ ನೀಡಲು 10 ಶಾಸಕರು ಉಸ್ತುವಾರಿಗಳು

ಟೀಂ ನಂಬರ್ 2:
ಶಾಸಕ ಶ್ರೀ ರಾಮುಲು ನೇತೃತ್ವದಲ್ಲಿ ಬಳ್ಳಾರಿ ಉಸ್ತುವಾರಿ
ರಾಮುಲು ಅವರಿಗೆ ಸಂಸದೆ ಶೋಭಾ, ಶಾಸಕ ಸೋಮಶೇಖರ್ ರೆಡ್ಡಿ ಸಾಥ್
ಮೂವರ ನೇತೃತ್ವದ ಟೀಂಗೆ ಸಾಥ್ ನೀಡಲು 10 ಶಾಸಕರು ಉಸ್ತುವಾರಿಗಳು

ಟೀಂ ನಂಬರ್ 2:
ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ಮಂಡ್ಯ ಉಸ್ತುವಾರಿ
ಅಶೋಕ್ ಗೆ ಪ್ರತಾಪ್ ಸಿಂಹ, ಸಿ.ಟಿ.ರವಿ ಸಾಥ್
ಮೂವರ ಟೀಂಗೆ ಸಾಥ್ ನೀಡಲು 8 ಶಾಸಕರುಗಳ ಉಸ್ತುವಾರಿ

BJP JDS

ಟೀಂ ನಂಬರ್ 4:
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ
ಯೋಗೇಶ್ವರ್ ಅವರಿಗೆ ಪರಿಷತ್ ಸದಸ್ಯರಾದ ರವಿಕುಮಾರ್, ತೇಜಸ್ವಿನಿ ಗೌಡ ಸಾಥ್
ಮೂವರ ಟೀಂಗೆ 5 ಮಂದಿ ಹಾಲಿ ಶಾಸಕರು, 3 ಮಂದಿ ಮಾಜಿ ಶಾಸಕರುಗಳ ಉಸ್ತುವಾರಿ

ಟೀಂ ನಂಬರ್ 5:
ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ
ಶೆಟ್ಟರ್ ಅವರಿಗೆ ಶಾಸಕರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಸಾಥ್
ಮೂವರ ಟೀಂಗೆ 10 ಮಂದಿ ಶಾಸಕರುಗಳ ಉಸ್ತುವಾರಿ

Election BJP

ಇತ್ತ ಬಳ್ಳಾರಿ ಮತ್ತು ಶಿವಮೊಗ್ಗ ಎರಡು ಕ್ಷೇತ್ರಗಳು ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿವೆ. ಹೀಗಾಗಿ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಸರ್ಕಾರ ನಿರ್ಧರಿಸಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸುವುದು ಖಚಿತವಾಗಿದೆ. ಬಳ್ಳಾರಿಯಲ್ಲಿ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ ಅಂತಾ ಶಾಸಕ ಶ್ರೀರಾಮುಲು ಹೇಳಿಕೊಂಡಿದ್ದಾರೆ. ಹಾಗಾಗಿ ಬಳ್ಳಾರಿಯಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *