ಮಠಗಳಿಗೆ 25 ಕೋಟಿ ರೂ.: ಯಾವೆಲ್ಲ ಮಠಗಳಿಗೆ ಅನುದಾನ ಸಿಗುತ್ತೆ?

Public TV
1 Min Read
BUDGET MUT

ಬೆಂಗಳೂರು: ಕೃಷಿ ಸಾಲ ಮನ್ನಾ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮಠ ಮತ್ತು ಸಮುದಾಯಗಳಿಗೆ ಕುಮಾರಸ್ವಾಮಿ ಅನುದಾನ ಕಡಿಮೆ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಕುಮಾರಸ್ವಾಮಿ ಪರಿಶಿಷ್ಟ ಜಾತಿ/ ಪಂಗಡದ ಮಠಗಳಿಗೆ 25 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.

ಜಾತ್ಯಾತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಅಭಿವೃಧ್ಧಿಗಾಗಿ ಶ್ರಮಿಸುತ್ತಿರುವ ಮಠಗಳಿಗೆ ಅನುದಾನ ನೀಡಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

bng gdg 18nrd 1a

ಯಾವೆಲ್ಲ ಮಠಗಳಿಗೆ ಅನುದಾನ?
ಶ್ರೀಭಗೀರಥ ಪೀಠ, ಮಧುರೆ(ಉಪ್ಪಾರ); ಶ್ರೀ ಮಾದಾರ ಚೆನ್ನಮ್ಮ ಗುರುಪೀಠ, ಚಿತ್ರದುರ್ಗ; ಶ್ರೀ ಸಿದ್ದರಾಮೇಶ್ವರ ಬೋವಿ ಗುರುಪೀಠ, ಚಿತ್ರದುರ್ಗ; ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ರಾಜನಹಳ್ಳಿ, ಹರಿಹರ ತಾಲೂಕು; ಶ್ರಿ ಯಾದವ ಮಹಾಸಂಸ್ಥಾನ ಮಠ, ಚಿತ್ರದುರ್ಗ; ಶ್ರೀ ನಾರಾಯಣಗುರು ಮಹಾಸಂಸ್ಥಾನ ನಿಟ್ಟೂರು, ತೀರ್ಥಹಳ್ಳಿ ತಾಲೂಕು; ಶ್ರೀ ಮಡಿವಾಳ ಗುರುಪೀಠ, ಚಿತ್ರದುರ್ಗ; ಶ್ರೀ ದೇವಾಂಗ ಗುರುಪೀಠ ಹಂಪಿ; ಹಡದಳ ಅಪ್ಪಣ್ಣ ಗುರುಪೀಠ, ತಂಗಡಂಗಿ ಮುದ್ದೇಬಿಹಾಳ; ಶ್ರೀ ಕಂಬಾರ ಗುರುಪೀಠ. ತೇಲಸಂಗ, ಅಥಣಿ; ಶ್ರೀ ಛಲವಾದಿ ಜಗದ್ಗುರು ಪೀಠ, ಚನ್ನೇನಹಳ್ಳಿ, ಶಿರಾ ತಾಲೂಕು; ಶ್ರೀ ವಿಜಯಸಂಗಮ(ಪ.ಜಾ./ಪ.ಪಂ) ವದ್ಯಾಪೀಠ, ಹೊಸದುರ್ಗ; ಶ್ರೀ ಶಿವಶಕ್ತಿ ಪೀಠ, ಇರಕಲ್ ಮಸ್ಕಿ; ಹೇಮಹೇಮ ಸದ್ಬೋಧನ ಪೀಠ, ಎರೆಹೊಸಳ್ಳಿ, ಹರಿಹರ; ಕರ್ನಾಟಕ ರಾಜ್ಯ ಕುಂಬಾರ ಕ್ಷೇಮಾಭಿವೃಧ್ಧಿ ಸಂಘ, ಬೆಂಗಳೂರು; ಗಂಗಾಮತಸ್ಥ/ಮೊಗವೀರ/ಬೆಸ್ತ/ಕೊಳಿ ಸಮಾಜ ಹಾಗೂ ಸವಿತಾ ಸಮಾಜ ಬೆಂಗಳೂರು ಮೊದಲಾದ ಧಾರ್ಮಿಕ ಪೀಠಗಳು ಹಾಗೂ ಸಂಘ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ಅನುದಾನ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *