Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ನಾನು ಮಾತಾಡಿದರೂ.. ಮಾತನಾಡದೇ ಮೌನವಾಗಿದ್ದರೂ ಅದಕ್ಕೆ ನೂರಾರು ಅರ್ಥ – ಅನಂತ್‍ಕುಮಾರ್ ಹೆಗ್ಡೆ ಕಿಡಿ

Public TV
Last updated: January 18, 2019 3:15 pm
Public TV
Share
2 Min Read
Ananthkumar hegde
SHARE

– ಬಿಎಸ್‍ವೈ ಪರ ಬ್ಯಾಟ್ ಬೀಸಿದ ಕೇಂದ್ರ ಸಚಿವರು

ಬೆಂಗಳೂರು: ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ವೇದಿಕೆಯ ಮುಂದೆ ಕುಳಿತಿದ್ದಕ್ಕೆ ಸ್ಪಷ್ಟೀಕರಣ ನೀಡಿ, ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಕಿಡಿಕಾರಿದ್ದಾರೆ.

ನಾನೇನು ಮಾತಾಡಿದರೂ.. ಮಾತನಾಡದೇ ಮೌನವಾಗಿದ್ದರೂ ಅದಕ್ಕೆ ನೂರಾರು ಅರ್ಥ- ಅಪಾರ್ಥ ಕಲ್ಪಿಸಿ, ಅದಕ್ಕೊಂದಿಷ್ಟು ತಮ್ಮ ಕಾಲ್ಪನಿಕ ಲದ್ದಿ ಸೇರಿಸಿ ಸುದ್ದಿ ಮಾಡುವ, ಪ್ಯಾನಲ್ ಡಿಸ್ಕಶಸ್ ನಡೆಸುವ ಇವರಿಗೆ ಇದೊಂದು ಘಟನೆ ಸುಗ್ರಾಸ ಭೋಜನ ಒದಗಿಸಿತು ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ನಾನೇನು ಮಾತಾಡಿದರೂ… ಮಾತನಾಡದೇ ಮೌನವಾಗಿದ್ದರೂ ಅದಕ್ಕೆ ನೂರಾರು ಅರ್ಥ- ಅಪಾರ್ಥ ಕಲ್ಪಿಸಿ, ಅದಕ್ಕೊಂದಿಷ್ಟು ತಮ್ಮ ಕಾಲ್ಪನಿಕ ಲದ್ದಿ ಸೇರಿಸಿ ಸುದ್ದಿ ಮಾಡುವ, panel discussion ನಡೆಸುವ ಇವರಿಗೆ ಇದೊಂದು ಘಟನೆ ಸುಗ್ರಾಸ ಭೋಜನ ಒದಗಿಸಿತು.

— Anantkumar Hegde (@AnantkumarH) January 18, 2019

ಆಗಿದ್ದೇನು?:
ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗಾಗಿ ಕರ್ನಾಟಕದ ಬಿಜೆಪಿಯ ಶಾಸಕರು ಮತ್ತು ಸಂಸದರ ಸಭೆ ದೆಹಲಿಯಲ್ಲಿ ನಡಿದಿತ್ತು. ಆ ಸಭೆಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಭಾಗವಹಿಸಿದ್ದರು. ಆದರೆ ಕೇಂದ್ರ ಸಚಿವರಾಗಿ ವೇದಿಕೆಯ ಮೇಲೆ ಕೂರುವ ಬದಲಾಗಿ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದರು. ಬಳಿಕ ಬಂದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಚಿವರನ್ನು ವೇದಿಕೆಗೆ ಕರೆದುಕೊಂಡು ಹೋಗಿದ್ದರು. ಈ ಘಟನೆಯಿಂದ ಬಿಜೆಪಿ ನಾಯಕರು ಅನಂತ್‍ಕುಮಾರ್ ಅವರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಚರ್ಚೆ ಆರಂಭವಾಗಿತ್ತು.

ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗಿದ್ದನ್ನು ಕಂಡು ಈಗ ಅನಂತ್‍ಕುಮಾರ್ ಅವರು ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ತಮ್ಮ ಬ್ಲಾಗ್‍ನಲ್ಲಿ ಘಟನೆಯ ಕುರಿತು ವಿವರಣೆ ನೀಡಿದ್ದಾರೆ.

ಕೇಂದ್ರ ಸಚಿವರ ಟ್ವೀಟ್‍ನಲ್ಲಿ ಏನಿದೆ?:
ಇಷ್ಟು ಚಿಕ್ಕ ಘಟನೆಗೆ ಒಂದಷ್ಟು ರೆಕ್ಕೆ ಪುಕ್ಕ ಕಟ್ಟಿ, ಒಂದಿಷ್ಟು ಬಣ್ಣ ಮೆತ್ತಿ ರೂಪಬದಲಿಸಿ ಹಾರಿಬಿಡಲು ಸಿದ್ಧವಾಗಿ ಕೂತಿದ್ದರಲ್ಲಾ ಕೆಲಮಂದಿ. ಅವರಿಗೆ ಒಂದೇ ಏಟಿಗೆ ಎರಡು ಮೂರು ಗುರಿಗಳನ್ನು ಹೊಡೆಯುವ ಕೆಟ್ಟ ಚಾಳಿ!

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ… ಒಳಗೊಳಗೇ ಅವರ ನಾಯಕರ ಮಧ್ಯೆಯೇ ಕಚ್ಚಾಟ ಇದೆ ಅಂತ ತೋರಿಸುವುದು… ರಾಜ್ಯ ರಾಜಕಾರಣದಿಂದ ಹೆಗಡೆಯವರನ್ನು ದೂರವಿಡಲಾಗುತ್ತಿದೆ ಎಂದು ಬಿಂಬಿಸುವುದು…!!!  ಇದು ಇವರ ಹಿಡನ್ ಅಜೇಂಡಾ ಆಗಿತ್ತು…. ಇದರಲ್ಲಿ ಈ ಮಂದಿ ತಕ್ಕ ಮಟ್ಟಿಗೆ ತಮ್ಮ ಕಾರ್ಯ ನಿರ್ವಹಿಸಿದರು..! pic.twitter.com/afPBRsFRHV

— Anantkumar Hegde (@AnantkumarH) January 18, 2019

ಈ ಬಾರಿ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಇದು ನಡೆದಿದ್ದರಿಂದ, ಇದರಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನೂ ಎಳೆದು ತರಲಾಯಿತು. ಪಾಪ ನಿಜಕ್ಕಾದರೆ ಕೆಳಗೆ ಕುಳಿತಿದ್ದ ನನ್ನನ್ನು ವೇದಿಕೆಯ ಮೇಲೆ ಕರೆಸಿ ಕೂರಿಸಿದವರೇ ಯಡಿಯೂರಪ್ಪನವರು. ಆದರೆ ಅವರೇ ನನ್ನನ್ನು ಅವಮಾನಿಸಿದರು ಎನ್ನುವ ರೀತಿಯಲ್ಲಿ ಸುದ್ದಿ ಹಬ್ಬಿಸಲಾಯಿತು. ಇದರಿಂದ ಈ ವಿಘ್ನ ಸಂತೋಷಿ ಎಡಚರು ಎರಡು ರೀತಿಯ ಈಡು ಹೊಡೆದರು. ಒಂದು, ಅನಂತ್‍ಕುಮಾರ್ ಹೆಗ್ಡೆಯನ್ನು ತೇಜೋವಧೆ ಮಾಡುವುದು. ಇನ್ನೊಂದು, ಯಡಿಯೂರಪ್ಪನವರ ಇಮೇಜನ್ನೂ ಹಾಳುಮಾಡುವುದು.

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಒಳಗೊಳಗೇ ಅವರ ನಾಯಕರ ಮಧ್ಯೆಯೇ ಕಚ್ಚಾಟ ಇದೆ ಅಂತ ತೋರಿಸುವುದು. ರಾಜ್ಯ ರಾಜಕಾರಣದಿಂದ ಹೆಗ್ಡೆಯವರನ್ನು ದೂರವಿಡಲಾಗುತ್ತಿದೆ ಎಂದು ಬಿಂಬಿಸುವುದು. ಇದು ಇವರ ಹಿಡನ್ ಅಜೆಂಡಾ ಆಗಿತ್ತು. ಇದರಲ್ಲಿ ಈ ಮಂದಿ ತಕ್ಕ ಮಟ್ಟಿಗೆ ತಮ್ಮ ಕಾರ್ಯ ನಿರ್ವಹಿಸಿದರು.

ಆದರೆ ಅವರೇ ನನ್ನನ್ನು ಅವಮಾನಿಸಿದರು ಅನ್ನೋ ರೀತಿಯಲ್ಲಿ ಸುದ್ದಿ ಹಬ್ಬಿಸಲಾಯಿತು…!  ಇದರಿಂದ ಈ ವಿಘ್ನ ಸಂತೋಷಿ ಎಡಚರು ಎರಡು ರೀತಿಯ ಈಡು ಹೊಡೆದರು.  ಒಂದು, ಅನಂತಕುಮಾರ ಹೆಗಡೆಯನ್ನು ತೇಜೋವಧೆ ಮಾಡುವುದು; ಇನ್ನೊಂದು, ಶ್ರೀ ಯಡ್ಯೂರಪ್ಪನವರ ಇಮೇಜನ್ನೂ ಹಾಳುಮಾಡುವುದು…!

— Anantkumar Hegde (@AnantkumarH) January 18, 2019

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:ananth kumar hegdebjpkarnatakaPublic TVಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆಟ್ವೀಟ್ದೆಹಲಿಪಬ್ಲಿಕ್ ಟಿವಿಬಿಜೆಪಿರಾಷ್ಟ್ರೀಯ ಕಾರ್ಯಕಾರಿಣಿಯ ಸಭೆ
Share This Article
Facebook Whatsapp Whatsapp Telegram

You Might Also Like

Jawahar Singh Bedham
Latest

ಉರ್ದು, ಪರ್ಷಿಯನ್‌ ಬದಲಿಗೆ ಹಿಂದಿಯಲ್ಲಿ ಮಾತನಾಡಿ: ಪೊಲೀಸರಿಗೆ ರಾಜಸ್ಥಾನ ಸಚಿವ ಸೂಚನೆ

Public TV
By Public TV
2 minutes ago
Devimane Ghat Land slide
Districts

ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ – ವಾಹನ ಸಂಚಾರ ಸಂಪೂರ್ಣ ಬಂದ್

Public TV
By Public TV
14 minutes ago
Kedarnath Temple
Crime

ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ – ಪೈಲೆಟ್, ಮಗು ಸೇರಿ 6 ಮಂದಿ ಸಜೀವ ದಹನ

Public TV
By Public TV
26 minutes ago
Hoskote Accident
Bengaluru City

Bengaluru | ಆಟೋಗೆ ಕಾರು ಡಿಕ್ಕಿ – ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

Public TV
By Public TV
58 minutes ago
Israeli strikes hit irans oil Depot
Latest

Israel vs Iran War: ಹೊತ್ತಿ ಉರಿದ ಟೆಹ್ರಾನ್‌- ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ

Public TV
By Public TV
1 hour ago
Ahmedabad Air India Plane Crash Money
Latest

ಅಹಮದಾಬಾದ್ ವಿಮಾನ ದುರಂತ – ಅವಶೇಷಗಳಡಿ ಸೂಟ್‌ಕೇಸ್‌ನಲ್ಲಿದ್ದ ಹಣ ಪತ್ತೆ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?