ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆ ಬಿಸಿ- ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಕ್ಕೆ ತಡೆ

Public TV
1 Min Read
BLG Goa Vehicle F

ಬೆಳಗಾವಿ: ರಾಜ್ಯಾದ್ಯಂತ ಇಂದು ಕರವೇ ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ಬಂದ್ ನಡೆಯುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆಯ ಬಿಸಿ ತಟ್ಟಿದೆ.

ಬೆಳಗಾವಿಯ ಪೀರನವಾಡಿ ಕ್ರಾಸ್ ಬಳಿ ಕರ್ನಾಟಕದಿಂದ ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಗಳನ್ನು ತಡೆಯಲು ಕರವೇ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ನಗರದಲ್ಲಿ ಬಸ್‍ಗಳು ರಸ್ತೆಗೆ ಇಳಿಯದಿದ್ದರಿಂದ ಕೇಂದ್ರಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಗರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇಂದು ಗೋವಾದಿಂದ ಯಾವುದೇ ಬಸ್ ಗಳು ರಾಜ್ಯದತ್ತ ಬಂದಿಲ್ಲ. ಕರ್ನಾಟಕದ ಬಸ್ ಗಳು ಮಾತ್ರ ರಾಜ್ಯದತ್ತ ಆಗಮಿಸುತ್ತಿವೆ.

BLG Goa Vehicle 2

BLG Goa Vehicle 3

BLG Goa Vehicle 4

BLG Goa Vehicle 5

BLG Goa Vehicle 6

BLG Goa Vehicle 1

Share This Article
Leave a Comment

Leave a Reply

Your email address will not be published. Required fields are marked *