Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

Public TV
Last updated: June 12, 2017 12:00 pm
Public TV
Share
3 Min Read
NARAYNA VATAL
SHARE

ಬೆಂಗಳೂರು: ಬಂದ್ ಗೆ ಬೆಂಬಲ ನೀಡದವರು ಕನ್ನಡ ವಿರೋಧಿಗಳು ಅಂತಾ ತೀರ್ಮಾನ ಮಾಡಲು ವಾಟಾಳ್ ನಾಗರಾಜ್ ಅವರಿಗೆ ಕರ್ನಾಟಕವನ್ನು ಬರೆದುಕೊಟ್ಟಿಲ್ಲ. ಕನ್ನಡದ ಕೆಲಸ ಮಾಡುವವರೆಲ್ಲರೂ ಕನ್ನಡಾಭಿಮಾನಿಗಳೇ ಅಂತಾ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ ನಡೆಸಿದ್ದಾರೆ.

ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬಂದ್‍ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಗೌಡ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ಯಾರೋ ಒಬ್ಬ ಕನ್ನಡ ಚಳವಳಿ ಅಥವಾ ಹೋರಾಟದಲ್ಲಿ ಭಾಗವಹಿಸಿಲ್ಲ ಅಂದ ತಕ್ಷಣ ಆತ ಕನ್ನಡ ವಿರೋಧಿಯಾಗಲು ಸಾಧ್ಯವಿಲ್ಲ. ಕರ್ನಾಟದಲ್ಲಿ ಕನ್ನಡದ ಬಗ್ಗೆ ಅಭಿಮಾನವಿರುವ ಎಲ್ಲರೂ ಕನ್ನಡಾಭಿಮಾನಿಗಳೇ ಆಗಿರುತ್ತಾರೆ. ಹೋರಾಟಗಾರರಷ್ಟೇ ಕನ್ನಡದ ಅಭಿಮಾನಿಗಳು, ಕನ್ನಡದ ಪರವಾಗಿ ಇರುವವರು ಅಂತಾ ಅರ್ಥ ಅಲ್ಲ. ನಮಗಿಂತಲೂ ಚೆನ್ನಾಗಿ ಕನ್ನಡವನ್ನು ಪ್ರೀತಿಸೋರು, ಬಲ್ಲವರು ಇದ್ದಾರೆ ಅಂತಾ ಹೇಳಿದ್ರು.

ಬಂದ್‍ನಲ್ಲಿ ಸಫಲರು ಯಾರು, ವಿಫಲರು ಯಾರು ಅಂತಾ ಹೇಳೋದಕ್ಕಿಂತ ಎಲ್ಲ ಸಂದರ್ಭಗಳಲ್ಲೂ ಜನ ನಾವು ಹೇಳಿದ ಹಾಗೇ ಕೇಳ್ತಾರೆ ಅನ್ನೋ ಅಹಂಕಾರದ ಗುಣ ಸರಿಯಾದ ಕ್ರಮವಲ್ಲ. ಇದನ್ನು ಜನರ ಪರವಾದ ಬಂದ್ ಅಂತಾ ಹೇಗೆ ಹೇಳ್ತೀರಿ. ಜನರ ಪರವಾದ ಬಂದ್ ಅಂತಾ ಆದ್ರೆ ಜನಈ ಬಂದ್ ಸ್ವೀಕರಿಸುತ್ತಿದ್ದರು ಅಂತಾ ಹೇಳಿದ್ರು.

ಇದನ್ನೂ ಓದಿ: ಕೋಲಾರದಲ್ಲಿ ಸರ್ಕಾರಿ ಬಸ್‍ಗೆ ಕಲ್ಲು- ತೆಲುಗು ನಟ ನಂದಮೂರಿ ತಾರಕರತ್ನ ಕಾರಿಗೆ ತಡೆ


ಸಂಸದರಿಗೆ ಬಿಸಿ ಮುಟ್ಟಿಸಿ: ಹೋರಾಟಗಾರರಿಗೆ ನಾನಾ ರೀತಿಯ ಹೋರಾಟದ ಮಾರ್ಗಗಳಿರುತ್ತವೆ. ಎಲ್ಲೋ ಒಂದು ಬಾರಿ ಜನ ನಮಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಅಂದ್ರೆ ಅದನ್ನು ದುರುಪಯೋಗಪಡಿಸಿಕೊಳ್ಳೋದು ಸರಿಯಲ್ಲ. ಪ್ರತೀ ಸಾರಿನೂ ಬಂದ್ ಬಂದ್ ಅಂತಾ ಕುಳಿತುಕೊಂಡ್ರೆ ಶ್ರೀ ಸಾಮಾನ್ಯರ ಮೇಲೆ ಆಗುವ ಪರಿಣಾಮದ ಹೊಣೆಯನ್ನು ಯಾರು ಹೊತ್ತು ಮಾತನಾಡಲು ಸಾಧ್ಯವಿದೆ? ಕೇಂದ್ರಕ್ಕೆ ಮುಟ್ಟಿಸಲು ನಮ್ಮ ರಾಜ್ಯದಿಂದ 28 ಜನ ಲೋಕಸಭಾ ಸದಸ್ಯರನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇವಲ್ವಾ. ಹೀಗಾಗಿ ಕೇಂದ್ರಕ್ಕೆ ಮುಟ್ಟಿಸಬೇಕಾದ್ರೆ ಮೊದಲು ಅವರಿಗೆ ಬಿಸಿ ಮುಟ್ಟಿಸಬೇಕು. ಅವರ ಮನೆ ಮುಂದೆ ಹೋಗಿ ಧರಣಿ ಮಾಡೋಣ. ಈ ಮೂಲಕ ಅವರನ್ನು ಎಚ್ಚರಗೊಳಿಸೋಣ. ರಾಜ್ಯದ ಸಮಸ್ಯೆಯ ಬಗ್ಗೆ ಜಾಗೃತಿಗೊಳಿಸೋಣ. ಕೇಂದ್ರಕ್ಕೆ ಯಾವ ರೀತಿ ರಾಜ್ಯದ ಸಮಸ್ಯೆಯನ್ನು ಮುಟ್ಟಿಸಬೇಕು ಅದೇ ರೀತಿ ತಲುಪಿಸೋಣ. ಇಲ್ಲವೇ ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಹೋಗಿ ಅಲ್ಲಿಯ ಜಂತರ್ ಮಂತರ್ ಮುಂದೆ ಕುಳಿತು ಪ್ರತಿಭಟನೆ ಮಾಡೋಣ ಅಂತಾ ತಿಳಿ ಹೇಳಿದ್ರು.

ಪ್ರತಿಷ್ಠೆ ಬಿಡಿ, ಒಮ್ಮತವಿರಲಿ: ಯಾವುದೇ ಒಂದು ಹೋರಾಟಕ್ಕೂ ಒಮ್ಮತವಿರಬೇಕು. ಒಗ್ಗಟ್ಟಿನಿಂದ ನಾವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತೀ ಬಾರಿನೂ ನಾನು ಇದೇ ಮಾತನ್ನ ಹೇಳ್ತಾ ಇದ್ದೀನಿ. ನಾವು ನಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಒಮ್ಮತದ ಹೋರಾಟ ಮಾಡೋಣ. ರಾಜ್ಯದ ಜನರ ಹಿತಕ್ಕೋಸ್ಕರ ಪ್ರತಿಭಟನೆಗಳನ್ನು ಮಾಡಬೇಕಾದ್ರೆ ನಾವು ನಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಬಿಡಬೇಕು. ಒಟ್ಟಿನಲ್ಲಿ ಒಗ್ಗಟ್ಟಿನಿಂದ ಈ ನಾಡು ಕಟ್ಟುವ ಕೆಲಸ ಮಾಡಬೇಕು. ಒಮ್ಮತ ಅಂದ್ರೆ ನನ್ನಿಂದ, ನಾನು, ನನ್ನ ಮಾತನ್ನು ಎಲ್ಲರೂ ಕೇಳಬೇಕು ಅನ್ನೋ ಪ್ರತಿಷ್ಠೆ ಬಿಟ್ಟು ಬಿಡಬೇಕು ಅಂದ್ರು.

ಇದನ್ನೂ ಓದಿ: ಕರ್ನಾಟಕ ಬಂದ್: ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್

 

ಬಂದ್‍ಗೆ ವಿರೋಧವಿಲ್ಲ: ಇಂದಿನ ರಾಜ್ಯ ಬಂದ್ ಗೆ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ನನಗೆ ಬಂದ್ ಇಷ್ಟ ಇಲ್ಲ. ಅದಕ್ಕಾಗಿ ನಾನು ಬಂದ್ ನಿಂದ ದೂರ ಉಳಿದ್ದೀನಿ. ಆದ್ರೆ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕಾರ್ಯಕರ್ತರಿಗೆ ಕರೆ ಮಾಡಿ ಬಂದ್ ಗೆ ಬೆಂಬಲ ಸೂಚಿಸಲು ತಿಳಿಸಿದ್ದೇನೆ. ಯಾಕಂದ್ರೆ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಭೆಯ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಕನ್ನಡಿಗರನ್ನು ಜೈಲಿಗೆ ಹಾಕಿದ್ರು. ಅಂದು ಅವರನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದೆ. ಅಂದು ಅವರಲ್ಲಿ ಕಣ್ಣೀರು ಹಾಕಿದ್ದನ್ನು ನೋಡಿದ್ರೆ ನಮಗೆ ಇಂತಹ ವ್ಯವಸ್ಥೆ ಬೇಕಾ ಅಂತಾ ಅನ್ನಿಸ್ತು. ಆದ್ರೆ ಯಾರು ಹೋಗಿ ಅವರನ್ನು ಜೈಲಲ್ಲಿ ನೋಡಿದ್ದಾರೆ ಅಂತಾ ಪ್ರಶ್ನಿಸಿದರು.

https://www.youtube.com/watch?v=fAzg4duUVEY

bandh 4

bandh 5

bandh 17

bandh 21

bandh

bandh 1

bandh 3

 

TAGGED:bengalurukaravekarnataka bandhnarayana gowdapublictvvatal nagarajಕರವೇಕರ್ನಾಟಕ ಬಂದ್ನಾರಾಯಣ ಗೌಡಪಬ್ಲಿಕ್ ಟಿವಿಬೆಂಗಳೂರುರಾಜ್ಯಾಧ್ಯಕ್ಷವಾಟಾಳ್ ನಾಗರಾಜ್
Share This Article
Facebook Whatsapp Whatsapp Telegram

Cinema Updates

Harshika Poonacha Bhuvan Ponnanna toured 3 countries with Tridevi 1
ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್
Cinema Latest Sandalwood
Darshan Thailand
ಥಾಯ್ಲೆಂಡ್‌ನಿಂದ ದರ್ಶನ್ ವಾಪಸ್ ಬರೋ ದಿನಾಂಕ ಫಿಕ್ಸ್
Cinema Latest Sandalwood Top Stories
B Saroja Devi
ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ
Cinema Latest
Yash mother
ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ – ಯಶ್‌ ತಾಯಿ ಮಾತು
Cinema Latest Sandalwood Top Stories
Vijay Devarakonda
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ
Cinema Latest Top Stories

You Might Also Like

India vs England 4th Test Day 1 India Suffer Huge Rishabh Pant Blow Reach 264 4
Cricket

ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ – ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

Public TV
By Public TV
3 hours ago
Kadugodi andhra murder
Bengaluru City

ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ

Public TV
By Public TV
3 hours ago
ಸಾಂದರ್ಭಿಕ ಚಿತ್ರ
Latest

ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

Public TV
By Public TV
3 hours ago
IPS Soumyalatha
Bengaluru City

ಧರ್ಮಸ್ಥಳ ಹೂತಿಟ್ಟ ಶವ ಕೇಸ್‌- ಓರ್ವ ಐಪಿಎಸ್ ಅಧಿಕಾರಿಯನ್ನು ಕೈಬಿಡಲು ಸರ್ಕಾರಕ್ಕೆ ಶಿಫಾರಸು

Public TV
By Public TV
4 hours ago
big bulletin 23 July 2025 part 1
Big Bulletin

ಬಿಗ್‌ ಬುಲೆಟಿನ್‌ 23 July 2025 ಭಾಗ-1

Public TV
By Public TV
4 hours ago
big bulletin 23 July 2025 part 2
Big Bulletin

ಬಿಗ್‌ ಬುಲೆಟಿನ್‌ 23 July 2025 ಭಾಗ-2

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?