ಬೆಂಗಳೂರು: ನನಗೆ ಶಾಸಕ ಸ್ಥಾನ ಮುಖ್ಯವಲ್ಲ, ದೇವೇಗೌಡರ ಆರೋಗ್ಯ ಮುಖ್ಯ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಭವಾನಿಯನ್ನು (Bhavani Revanna) ನಿಲ್ಲಿಸೋಕೆ ಅಭಿಪ್ರಾಯಪಟ್ಟಿದ್ದರು. ಆದರೆ ಭವಾನಿ ನನ್ನ ಮಾವನವರ ಆರೋಗ್ಯ ಮುಖ್ಯ ಎಂದಿದ್ದಾರೆ. ನನಗೆ ಯಾವುದೇ ಬೇಸರವಿಲ್ಲ. ದೇವೆಗೌಡರ ಆದೇಶ ತಪ್ಪಿಲ್ಲ ಎಂದರು. ನನಗೆ ಬೇಕಾಗಿರೋದು ದೇವೆಗೌಡರ (HD Devegowda) ಆರೋಗ್ಯ. ದೇವೆಗೌಡರು ಏನ್ ಹೇಳ್ತಾರೆ ಅದ್ಕೆ ಬದ್ಧನೆಂದು ಭವಾನಿ 1 ತಿಂಗಳ ಮುಂಚೆಯೇ ಹೇಳಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ (HD Kumaraswamy), ದೇವೇಗೌಡ ನಿರ್ಧಾರವೇ ಅಂತಿಮ. ಜಿಲ್ಲೆಯಲ್ಲಿ ನಮ್ಮ ಪಕ್ಷ ಉಳಿಬೇಕು. ಕುಟುಂಬದ ತೀರ್ಮಾನದಂತೆ ಸ್ವರೂಪ್ಗೆ ಟಿಕೆಟ್ ಕೊಡ್ತಿದ್ದೇವೆ. ಹಾಸನದಲ್ಲಿ (Hassan) 4 ವರ್ಷದಿಂದ ಬಿಜೆಪಿ ಲೂಟಿ ಮಾಡಿದ್ದಾರೆ. ಹಾಸನದಲ್ಲಿ 7 ಕ್ಕೆ 7 ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಡೂರಿನಿಂದ ದತ್ತಾ : 1 ಕ್ಷೇತ್ರ ಬಿಟ್ಟು 49 ಕ್ಷೇತ್ರಗಳ ಜೆಡಿಎಸ್ ಪಟ್ಟಿ ಬಿಡುಗಡೆ
ದೇವೆಗೌಡರಿಗೆ, ದತ್ತಾರಿಗೆ 50 ವರ್ಷ ಸಂಬಂಧವಿದೆ. ದತ್ತಾ ಅವರನ್ನು ಕಾಂಗ್ರೆಸ್ ಕರೆದುಕೊಂಡು ಹೋಗಿ ಮೋಸ ಮಾಡಿದರು. ಸಣ್ಣ ತಪ್ಪು ಮಾಡಿರಬಹುದು. ಅವರು ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ತಿ ಸಹಕಾರ ದತ್ತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೊನೆಗೂ ಹಾಸನ ಟಿಕೆಟ್ ಗೆದ್ದ ಸ್ವರೂಪ್