ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲೀಗ ದೋಸ್ತಿಗಳ ನಡುವೆಯೇ ಸವಾಲು ಎದುರಾಗಿದೆ. ಕೆಆರ್ಪಿ ಪಕ್ಷ ಘೋಷಣೆ ಬೆನ್ನಲ್ಲೇ ಜನಾರ್ದನ ರೆಡ್ಡಿ (Janardhan Reddy) ಅಖಾಡಕ್ಕಿಳಿದು ಚುನಾವಣಾ ಸಮರ ಸಾರಿದ್ದಾರೆ.
ರಾಜಕೀಯದಲ್ಲಿ ಸಹೋದರ, ಮಿತ್ರ ಅಂತ ನೋಡದೇ ತೊಡೆ ತಟ್ಟಿ ನಿಂತಿದ್ದಾರೆ. ಈ ಮಧ್ಯೆ ರೆಡ್ಡಿ ಹಾಗೂ ರಾಮುಲು (Sriramulu) ದೋಸ್ತಿ ಒಂದು ರೀತಿಯಲ್ಲಿ ಅಂತ್ಯವಾದ ಹಾಗೆ ಕಾಣುತ್ತಿದೆ. ಇದಕ್ಕೆ ಕಾರಣ ರೆಡ್ಡಿ ಬಳ್ಳಾರಿ ಬಿಜೆಪಿ ಮೇಲೆ ಕಣ್ಣು ಹಾಕಿದ್ದಾರೆ. ಸ್ಥಳೀಯ ನಾಯಕರನ್ನು ತಮ್ಮ ಪಕ್ಷ ಕೆಆರ್ ಪಿಪಿಗೆ ಸೆಳೆಯುತ್ತಿದ್ದಾರೆ. ಇದು ಇಲ್ಲಿನ ಗಾಲಿ ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ನುಂಗಲಾರದ ತುತ್ತಾಗಿದೆ.
ಸಚಿವ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಮತಗಳು ರೆಡ್ಡಿಯ ಪಕ್ಷ ಕೆಆರ್ಪಿಗೆ ಇಬ್ಭಾಗವಾಗುವ ಆತಂಕ ಬಿಜೆಪಿಯಲ್ಲಿ ಕಾಡಿದೆ. ಇದೇ ಕಾರಣಕ್ಕಾಗಿ ರೆಡ್ಡಿ ವಿರುದ್ಧ ಶ್ರೀರಾಮುಲು ಕೆಂಡಕಾರಿದ್ದಾರೆ. ಇನ್ನೇನಿದ್ದರೂ ಚುನಾವಣೆ, ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳ್ತೀವಿ. ಮುಂದೆ ಏನ್ ಆಗತ್ತೆ ಗೊತ್ತಿಲ್ಲ ಅಂತ ರೆಡ್ಡಿಯನ್ನ ಚುನಾವಣಾ ಅಖಾಡಕ್ಕೆ ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಅಖಾಡಕ್ಕಿಳಿಯೋ ಹುಮ್ಮಸ್ಸಿನಲ್ಲಿದ್ದ ಸಿದ್ದರಾಮಯ್ಯ ಕೈ ಸೇರಿತು ಸೀಕ್ರೆಟ್ ರಿಪೋರ್ಟ್!
ರೆಡ್ಡಿ ತಮ್ಮ ಹೊಸ ಪಕ್ಷ ಸಂಘಟನೆಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಕಲ್ಯಾಣ ಕರ್ಣಾಟಕದಲ್ಲಿ ಸುತ್ತಾಟ ನಡೆಸಿದ್ದಾರೆ. ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರುತ್ತಿರೋ ಜನಾರ್ದನ ರೆಡ್ಡಿ, ಆಸ್ತಿ ಮುಟ್ಟುಗೋಲು ಹಾಕಿ, ನನ್ನ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ಆದ್ರೆ ನಾನು ಯಾರಿಗೂ ಹೆದರುವ ಮಗನೇ ಅಲ್ಲಾ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ರೆಡ್ಡಿ ಸಿದ್ಧತೆ ನಡೆಸಿದ್ದಾರೆ.
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ರೆಡ್ಡಿ, ರಾಮುಲು ದೋಸ್ತಿಯಲ್ಲಿ ಉಂಟಾದ ಈ ಬೆಳವಣಿಗೆ ನೋಡಿದ್ರೆ ಗೊತ್ತಾಗುತ್ತೆ. ಇನ್ನೂ ಚುನಾವಣೆಗೆ ಕೇವಲ ಎರಡು ತಿಂಗಳ ಮಾತ್ರ ಇದ್ದು ಮುಂದೆ ಏನೆಲ್ಲಾ ಬೆಳವಣಿಗೆ ಆಗಲಿದೆ ಕಾದು ನೋಡಬೇಕು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k