ಕಾಂತಾರ ಎಫೆಕ್ಟ್- ಜಾತ್ರೆಗಳಲ್ಲಿ ರಾಜಕೀಯ ಭವಿಷ್ಯ ನುಡಿಯುತ್ತಿರೋ ದೈವಗಳು

Public TV
1 Min Read
RAICHUR 2

ರಾಯಚೂರು: ವಿಧಾನಸಭಾ ಚುನಾವಣಾ (Vidhanasabha Election) ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ದೈವ ಹೇಳಿಕೆಗೆ ರಾಜಕೀಯ ತಟ್ಟಿದ್ದು, ಅಭ್ಯರ್ಥಿ, ಪಕ್ಷಗಳ ಗೆಲುವು ಸೋಲಿನ ದೈವ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.

RAICHUR 1 1

ಕಾಂತಾರ ಸಿನಿಮಾ (Kanatar Film) ಎಫೆಕ್ಟ್ ಜಾತ್ರೆಗಳ ಮೇಲೆ ಬಿದ್ದಿರೋ ಸಾಧ್ಯತೆ ಹೆಚ್ಚಾಗಿದೆ. ಜಾತ್ರೆಗಳಲ್ಲಿ ಈಗ ದೈವಗಳ ಹೇಳಿಕೆಗಳಿಗಾಗಿ ಜನ ಕಾದುಕುಳಿತುಕೊಳ್ಳುತ್ತಿದ್ದಾರೆ. ರಾಯಚೂರು ತಾಲೂಕಿನ ಹೆಂಬರಾಳ ಜಾತ್ರೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ದೈವ ಹೇಳಿಕೆ ನುಡಿದಿದೆ. ಇದನ್ನೂ ಓದಿ: ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

RAICHUR 3

ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‍ (Congress) ನ ಹಾಲಿ ಶಾಸಕ ಬಸನಗೌಡ ದದ್ದಲಗೆ ಮತ್ತೊಮ್ಮೆ ಸೀಟು ಎಂದಿದೆ ದೈವ. ದೇವದುರ್ಗದ ದೇವತಗಲ್ ಜಾತ್ರೆಯಲ್ಲೂ ಕಾಂಗ್ರೆಸ್ ಪರ ದೈವ ಹೇಳಿಕೆ ನುಡಿದಿದೆ. ದೇವದುರ್ಗ ಕ್ಷೇತ್ರ (Devadurga Constituency) ದಲ್ಲಿ ಕಾಂಗ್ರೆಸ್ ಬಿಜೆಪಿ ನಾಮುಂದು ತಾಮುಂದು ಎನ್ನುತ್ತಿವೆ.

RAICHUR

ಕಾಂಗ್ರೆಸ್ ಒಂದು ಹೆಜ್ಜೆ ಮುಂದಿದೆ ಅಂತಾನೆ ಅಜ್ಜ ಎಂದು ದೈವ ನುಡಿದಿದೆ. ಹಾಗಾದ್ರೆ ಹಾಲಿ ಶಾಸಕ ಶಿವನಗೌಡ ನಾಯಕ್‍ಗೆ ಈ ಬಾರಿ ಸೋಲು ಗ್ಯಾರೆಂಟಿನಾ ಅನ್ನೋ ಚರ್ಚೆ ನಡೆದಿವೆ. ದೈವಗಳ ಹೇಳಿಕೆ ಹಿನ್ನೆಲೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ರಾಜಕೀಯ ಚರ್ಚೆಗಳಂತೂ ಜೋರಾಗಿ ನಡೆದಿವೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *