ನಟ ಚೇತನ್‌ ಒಬ್ಬ ನಾಲಾಯಕ್, ಮುಸ್ಲಿಂ ಏಜೆಂಟ್‌: ಯತ್ನಾಳ್

basanagouda patil yatnal

ವಿಜಯಪುರ: ನಟ ಚೇತನ್‌(Actor Chethan) ಒಬ್ಬ ನಾಲಾಯಕ್, ಮುಸ್ಲಿಂ ಏಜೆಂಟ್‌ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್(Basanagouda Patil Yatnal) ಕಿಡಿ ಕಾರಿದ್ದಾರೆ.

ಕಾಂತಾರ ಸಿನಿಮಾದಲ್ಲಿ ಬರುವ ದೈವಾರಾಧನೆ, ಹಿಂದೂ ಸಂಸ್ಕೃತಿಯ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ್‌ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಟ ಚೇತನ ಸಾಬ್ರ (ಮುಸ್ಲಿಂ) ಏಜೆಂಟ್ ಆಗಿದ್ದಾನೆ. ಮುಸ್ಲಿಮರು ದುಡ್ಡು ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ. ಅಂಬೇಡ್ಕರ್‌ ಜಯಂತಿ ವೇಳೆ ನಾಟಕ ಮಾಡಲು ವಿಜಯಪುರಕ್ಕೂ ಅವನು ಬಂದಿದ್ದ ಎಂದರು. ಇದನ್ನೂ ಓದಿ: ಕಾಂತಾರ ಕಾಂಟ್ರವರ್ಸಿ: ನಟ ಚೇತನ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು

chethan 2

ದೈವಾರಾಧನೆ ಸಂಸ್ಕೃತಿಯ ಭಾಗವಾಗಿದೆ. ಹಿಂದೂ ವಿರೋಧಿ ಮಾತನಾಡಿದವರು ಏನೇನು ಆಗಿ ಹೋಗಿದ್ದಾರೆ. ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 5 ವರ್ಷದಲ್ಲಿ 166 ಕ್ರಿಮಿನಲ್‌ಗಳ ಎನ್‌ಕೌಂಟರ್‌, 4453 ಮಂದಿಗೆ ಗಾಯ: ಯೋಗಿ ಆದಿತ್ಯನಾಥ್‌

ಹಿಂದುತ್ವದ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ. ಅಂತಹವರು ವಿಜಯಪುರದಲ್ಲೂ ಕೆಲವರಿದ್ದಾರೆ. ಹಿಂದೂ ವಿರೋಧಿ ಮಾತನಾಡಿದರೆ ಶಹಬ್ಬಾಸ್‌ ಎನ್ನುತ್ತಾರೆ ಎಂದು ಹೇಳಿದರು.

ನಾನು ಯಾರನ್ನು ಬಿಡಲ್ಲ, ಅಬ್ಬರಿಸುತ್ತೇನೆ. ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ  ಅಬ್ಬರಿಸಲು ಸಮಯ ಇಲ್ಲ. ನಾನು ಯಾರ ಮನೆಗೂ ಹೋಗಿ ನಿಂತಿಲ್ಲ ಎಂದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *