Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಂಬಳ ಋತುವಿನಲ್ಲಿ ಮಾಂಸಾಹಾರವಿಲ್ಲ, ಕುಚ್ಚಿಲು ಅಕ್ಕಿ ಗಂಜಿ ಚಟ್ನಿ- ನಿಶಾಂತ್ ಶೆಟ್ಟಿಯ ಲೈಫ್ ಸ್ಟೋರಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಂಬಳ ಋತುವಿನಲ್ಲಿ ಮಾಂಸಾಹಾರವಿಲ್ಲ, ಕುಚ್ಚಿಲು ಅಕ್ಕಿ ಗಂಜಿ ಚಟ್ನಿ- ನಿಶಾಂತ್ ಶೆಟ್ಟಿಯ ಲೈಫ್ ಸ್ಟೋರಿ

Districts

ಕಂಬಳ ಋತುವಿನಲ್ಲಿ ಮಾಂಸಾಹಾರವಿಲ್ಲ, ಕುಚ್ಚಿಲು ಅಕ್ಕಿ ಗಂಜಿ ಚಟ್ನಿ- ನಿಶಾಂತ್ ಶೆಟ್ಟಿಯ ಲೈಫ್ ಸ್ಟೋರಿ

Public TV
Last updated: February 19, 2020 3:17 pm
Public TV
Share
4 Min Read
UDP Kambala App A
SHARE

– ಶ್ರೀನಿವಾಸ ಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ
– ವರ್ಷಕ್ಕೆ 2 ಯಜಮಾನರ ಜೊತೆ ಒಪ್ಪಂದ

ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕಂಬಳ ಕೋಣದ ಓಟಗಾರರು ಒಬ್ಬರಿಗಿಂತ ಒಬ್ಬರು ದಾಖಲೆಗಳನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಶ್ವತ್ಥಪುರ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ಗಿಂತ ಚೆನ್ನಾಗಿ ಓಡಿದರೆ, ಉಡುಪಿ ಬಜಗೋಳಿಯ ನಿಶಾಂತ್ ಶೆಟ್ಟಿ ಗೌಡರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಕಟ್ಟುಮಸ್ತಾದ ದೇಹ. ಆದರೆ ಒಂದು ದಿನವೂ ಜಿಮ್ಮಿಗೆ ಹೋದವರಲ್ಲ. ಗದ್ದೆ, ಹಟ್ಟಿ, ತೆಂಗಿನ ತೋಟದಲ್ಲಿ ಕೆಲಸ, ಅಮ್ಮ ರುಚಿರುಚಿಯಾದ ತಿಂಡಿ ಮಾಡಿದರೂ ನಿಶಾಂತ್ ಅವರು ತಿನ್ನುವುದು ಕುಚ್ಚಿಲು ಅಕ್ಕಿ ಗಂಜಿ. ಅದಕ್ಕೆ ಉಪ್ಪಿನಕಾಯಿ ಮತ್ತು ಚಟ್ನಿ. ಗಂಜಿ ಊಟ ಮಾಡಿದರೆ ಮತ್ತೆ ಅಡಿಕೆ ತೋಟದಲ್ಲಿ ಕೆಲಸ ಮಾಡಲು ಹೊರಡುತ್ತಾರೆ. ಇದನ್ನೂ ಓದಿ:  ಶ್ರೀನಿವಾಸ ಗೌಡ್ರನ್ನು ಮೀರಿಸಿದ ಮತ್ತೋರ್ವ ಕಂಬಳ ಓಟಗಾರ- ಉಡುಪಿಯಲ್ಲಿ ನಿಶಾಂತ್ ಶೆಟ್ಟಿ ಸಾಧನೆ

UDP Kambala Ba

ಕಾರ್ಕಳದ ಬಜಗೋಳಿಯ ಜೋಗಿಬೆಟ್ಟು ಎಂಬಲ್ಲಿ ನಿಶಾಂತ್ ಶೆಟ್ಟಿ ಅವರ ಮನೆಯಿದೆ. ಮನೆಯ ಸುತ್ತಲೂ ತೋಟ ಇದೆ. ತೋಟದಲ್ಲಿ ಕೆಲಸ ಮಾಡುತ್ತಾ ಹಟ್ಟಿಯಲ್ಲಿ ದನಗಳ ಜೊತೆ ಇರುವ ನಿಶಾಂತ್ ಶೆಟ್ಟಿ ಅವರು ರಾತ್ರಿ ಬೆಳಗಾಗುವುದರ ಒಳಗೆ ಕಂಬಳ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗಿನ್ನೂ ಇಪ್ಪತ್ತೆಂಟು ವಯಸ್ಸಿನ ನಿಶಾಂತ್ ಶೆಟ್ಟಿ ಕಂಬಳ ಕೋಣಗಳನ್ನು ಓಡಿಸಲು ಆರಂಭಿಸಿ ಕೇವಲ ಆರು ವರ್ಷ ಆಗಿದೆ. ಆರು ವರ್ಷದಲ್ಲೇ ನಿಶಾಂತ್ ಶೆಟ್ಟಿ ಐವತ್ತಕ್ಕಿಂತಲೂ ಹೆಚ್ಚು ಮೆಡಲ್‍ಗಳನ್ನು ಬಾಚಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್

ದಕ್ಷಿಣ ಕನ್ನಡ ಜಿಲ್ಲೆಯ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಸದ್ಯ ಕಂಬಳ ಕ್ಷೇತ್ರದ ಸವ್ಯಸಾಚಿ. ಉಸೇನ್ ಬೋಲ್ಟ್ ಗಿಂತಲೂ ಒಂದು ಕೈ ಹೆಚ್ಚು ಮೀರಿ ಶ್ರೀನಿವಾಸ್ ಗೌಡ ದಾಖಲೆಗಳನ್ನು ಮಾಡಿದ್ದಾರೆ. ಶ್ರೀನಿವಾಸಗೌಡ ಕಿನ್ನಿಗೋಳಿಯ ಐಕಳದಲ್ಲಿ ಮಾಡಿದ ದಾಖಲೆಯನ್ನು ಉಡುಪಿಯ ನಿಶಾಂತ್ ಶೆಟ್ಟಿ ಒಂದು ವಾರದಲ್ಲಿ ಅಳಿಸಿ ಹಾಕಿದ್ದಾರೆ. ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಅತಿ ಹೆಚ್ಚು ವೇಗದಲ್ಲಿ ಓಡಿ ದಾಖಲೆಯನ್ನು ನಿರ್ಮಿಸಿದ್ದಾರೆ.

MNG KAMBALA RECORD 5

ನಿಶಾಂತ್ ಶೆಟ್ಟಿ ಕೃಷಿ ಮೂಲದಿಂದ ಬಂದವರು. ಎರಡು ಸಾವಿರ ಹದಿನಾರರ ಕಂಬಳ ಅಕಾಡೆಮಿ ನಡೆಸಿದ ತರಬೇತಿಯಲ್ಲಿ ಹತ್ತು ದಿವಸಗಳ ಓಟದ ತರಬೇತಿಯನ್ನು ಪಡೆದಿದ್ದಾರೆ. ಕೋಣಕ್ಕೆ ಆಹಾರ ಕೊಡುವುದು ಕೋಣಕ್ಕೆ ಹಗ್ಗ ಕಟ್ಟುವುದು, ನೇಗಿಲು ಬಿಗಿಯುವುದು, ಓಡಿಸುವುದು ಎಣ್ಣೆ ಹಚ್ಚುವುದು ಕೋಣಗಳ ಸಂಪೂರ್ಣ ಆರೈಕೆ ನಿಶಾಂತ್ ಶೆಟ್ಟಿ ಅವರಿಗೆ ಗೊತ್ತಿದೆ.

ನಿಶಾಂತ್ ಶೆಟ್ಟಿ ಅವರಿಗೆ ದೊಡ್ಡ ಗೆಳೆಯರ ಬಳಗವೇ ಇದೆ. ಚಿಕ್ಕಂದಿನಿಂದ ಕಂಡವರು ನಿಶಾಂತ್ ಶೆಟ್ಟಿ ಕಂಬಳದ ಕೋಣಗಳನ್ನು ಓಡಿಸಲು ಹುಟ್ಟಿದವರು ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಇದನ್ನೂ ಓದಿ: ಕಂಬಳ ಹೀರೋಗೆ ಸಖತ್ ಡಿಮ್ಯಾಂಡ್- ಒಲಂಪಿಕ್ಸ್‌ಗೆ ಇಳಿಯೋ ಮುನ್ನವೇ ಶೂ ಕಂಪನಿಗಳಿಂದ ಕರೆ

UDP Kambala A copy

ಪ್ರಕೃತಿ ಕಂಬಳದ ಗದ್ದೆಯಲ್ಲಿ ಚಾಕಚಕ್ಯತೆ ಕೇವಲ ಓಡಿಸುವುದು ಮಾತ್ರ ಅಲ್ಲ. ಕೋಣಗಳನ್ನು ಓಡುವಂತೆ ಮಾಡುವ ಚಾಕಚಕ್ಯತೆಯೂ ಬೇಕು. ಈ ಎರಡೂ ನಿಶಾಂತ್ ಶೆಟ್ಟಿ ಅವರಲ್ಲಿದೆ. ಶ್ರೀನಿವಾಸ ಗೌಡ ಅವರು ಅದು ಮನೆತನದ ಎಂಟರಿಂದ ಹತ್ತು ಕೋಣಗಳನ್ನು ಓಡಿಸಿದರೆ ನಿಶಾಂತ್ ಕೇವಲ ಎರಡು ಜೊತೆ ಕೋಣಗಳನ್ನು ಓಡಿಸುತ್ತಾರೆ.

ಪ್ರತಿ ವರ್ಷ ಎರಡು ಯಜಮಾನರ ಕೋಣಗಳನ್ನು ಓಡಿಸುವ ನಿಶಾಂತ್ ಮುಂದಿನ ವರ್ಷ ಮತ್ತೆ ಬೇರೆ ಕೋಣಗಳತ್ತ ಮುಖ ಮಾಡುತ್ತಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೂರ ಐವತ್ತು ಜೊತೆ ಕೋಣಗಳು ಕಂಬಳ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತವೆ. ಹದಿನೈದಕ್ಕಿಂತಲೂ ಹೆಚ್ಚು ಕೋಣದ ಯಜಮಾನರು ನಿಶಾಂತ್ ಶೆಟ್ಟಿ ಅವರಿಗೆ ಬೇಡಿಕೆಯನ್ನು ಇಡುತ್ತಾರೆ. ಆದರೆ ನಿಶಾಂತ್ ಶೆಟ್ಟಿ ಇಬ್ಬರ ನಾಲ್ಕು ಜೊತೆ ಕೋಣವನ್ನು ಮಾತ್ರ ಓಡಿಸುತ್ತಾರೆ.

mng kambala

ಮಾಂಸಾಹಾರ ಸೇವನೆಯಿಲ್ಲ:
ಕಾರ್ಕಳ ತಾಲೂಕು ಬಜಗೋಳಿಯ ಜೋಗಿ ಬೆಟ್ಟುವಿನ ನಿಶಾಂತ್ ಶೆಟ್ಟಿ ಅವರು ಜಾತಿಯಲ್ಲಿ ಬಂಟರು. ಶೇಕಡಾ ನೂರು ಬಂಟರು ನಾನ್ವೆಜ್ ಪ್ರಿಯರು ಎಂದರೆ ತಪ್ಪಲ್ಲ. ಆದರೆ ನಿಶಾಂತ್ ಶೆಟ್ಟಿ ಕಂಬಳಕ್ಕೋಸ್ಕರ ನಾನ್ವೆಜ್ ತ್ಯಾಗ ಮಾಡಿದ್ದಾರೆ. ತರಕಾರಿಯಲ್ಲಿರುವ ಶಕ್ತಿ ನಾನ್ವೆಜ್‍ನಲ್ಲಿ ಇಲ್ಲ ಎನ್ನುವುದು ಅವರ ಅನುಭವವಾಗಿದೆ.

ಬೆಳಗಿನ ಗಂಜಿ ಊಟ ಮಧ್ಯಾಹ್ನದ ಊಟ ರಾತ್ರಿಯ ಊಟ ಎಲ್ಲವನ್ನೂ ತರಕಾರಿಯ ಜೊತೆಯೇ ಮಾಡುತ್ತಾರೆ. ಮೀನು ಮತ್ತು ಕೋಳಿಯಲ್ಲಿ ಕೊಬ್ಬು ಮತ್ತು ಜಿಡ್ಡು ಇರೋದರಿಂದ ಚಾಕಚಕ್ಯತೆಯಿಂದ ಓಡಾಡಲು ಸಾಧ್ಯವಿಲ್ಲ ಮತ್ತು ಚುರುಕುತನ ಹೊಂದಲು ಸಾಧ್ಯವಿಲ್ಲ ಎನ್ನುವುದು ನಿಶಾಂತ್ ಶೆಟ್ಟಿ ಅವರ ಲೆಕ್ಕಾಚಾರವಾಗಿದೆ.

UDP KAMBALA

ದೊಡ್ಡ ಅಭಿಮಾನಿ:
ನಿಶಾಂತ್ ಶೆಟ್ಟಿ ಅವರ ತಂದೆ ಕೂಡ ಕಂಬಳದ ದೊಡ್ಡ ಅಭಿಮಾನಿಯಾಗಿದ್ದಾರೆ. ಹಾಗಂತ ಅವರು ಕ್ರೀಡೆಯ ಕಂಬಳದಲ್ಲಿ ಓಟವನ್ನು ಮಾಡಿಲ್ಲ. ಗದ್ದೆಗಳಲ್ಲಿ ತಮ್ಮ ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಕೋಣಗಳನ್ನು ಓಡಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ನಿಶಾಂತ್ ಶೆಟ್ಟಿ ಕಂಬಳ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಕಂಡು ಅವರ ತಂದೆ ಹಿಗ್ಗಿ ಹೋಗಿದ್ದಾರೆ. ಮಗನ ಓಟ ಮತ್ತು ಆತನಿಗೆ ಕಂಬಳ ಕ್ಷೇತ್ರದಲ್ಲಿ ಸಿಕ್ಕಿರುವ ಹೆಸರು ಕಂಡು ಬಹಳ ಖುಷಿಪಟ್ಟಿದ್ದಾರೆ.

ನಿಶಾಂತ್ ಶೆಟ್ಟಿ ಅವರ ತಾಯಿ ತಾರಾ ಮನೆಯನ್ನು ನೋಡುವ ಜೊತೆ ಮಗನ ಕಂಬಳ ಕ್ಷೇತ್ರಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ. ಹೊತ್ತು ಹೊತ್ತಿಗೆ ಯಾವುದೇ ಆರೋಗ್ಯಕ್ಕೆ ಸಮಸ್ಯೆ ಆಗುವಂತಹ ಆಹಾರವನ್ನು ಅವರು ಕೊಡುವುದಿಲ್ಲ.

kambala

ಕಂಬಳ ಸೀಸನ್‍ನಲ್ಲಿ ಕಂಬಳ ಬಿಟ್ಟರೆ ನಿಶಾಂತ್ ಶೆಟ್ಟಿ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಕಂಬಳ ಕ್ಷೇತ್ರದಲ್ಲಿ ಹೆಸರು ಗಳಿಸಿದರೂ ನಿಶಾಂತ್ ಶೆಟ್ಟಿ ಅವರ ಜೀವನೋಪಾಯಕ್ಕೆ ಅರಸಿದ್ದು ಕೃಷಿ. ಅಡಕೆ ತೋಟ, ಭತ್ತದ ಬೇಸಾಯ ಇವರ ಪ್ರಮುಖ ಬೆಳೆಗಳು. ಹಸು ಸಾಕಣೆ ಮತ್ತು ಎಮ್ಮೆ ಸಾಕಣೆಯನ್ನು ಕೂಡ ಅವರು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

TAGGED:kambalaKambala Racerlifestylenishanth shettyPublic TVudupiಉಡುಪಿಕಂಬಳನಿಶಾಂತ್ ಶೆಟ್ಟಿಪಬ್ಲಿಕ್ ಟಿವಿಶ್ರೀನಿವಾಸ ಗೌಡ
Share This Article
Facebook Whatsapp Whatsapp Telegram

Cinema news

KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood
darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood

You Might Also Like

HD Devegowda Mallikarjun Kharge
Bengaluru City

ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು

Public TV
By Public TV
30 minutes ago
ಸಾಂದರ್ಭಿಕ ಚಿತ್ರ
Bengaluru City

ಯುಗಾದಿಗೆ `ಗೃಹಲಕ್ಷ್ಮಿ’ಯರಿಗೆ ಗುಡ್‌ನ್ಯೂಸ್ – 27ನೇ ಕಂತಿನ ಹಣ ಬಿಡುಗಡೆ

Public TV
By Public TV
43 minutes ago
Hailstones thunder and lightning heavy rain in Shivamogga 1
Districts

ಆಲಿಕಲ್ಲಿನ ರಾಶಿ, ಗುಡುಗು, ಸಿಡಿಲಿನ ನರ್ತನ – ಮಳೆ ಅಬ್ಬರಕ್ಕೆ ನಲುಗಿದ ಶಿವಮೊಗ್ಗ

Public TV
By Public TV
1 hour ago
PRAJWAL REVANNA
Bengaluru City

70 ಪೆನ್‌ ಡ್ರೈವ್‌ ಬಳಕೆ – ಆಪ್ತ ವ್ಯಕ್ತಿಗಳಿಂದಲೇ ಪ್ರಜ್ವಲ್‌ ರೇವಣ್ಣಗೆ ಖೆಡ್ಡಾ

Public TV
By Public TV
1 hour ago
Flight Seat
Latest

ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ವಿಮಾನದ ಶೇ.60ರಷ್ಟು ಸೀಟುಗಳ ಆಯ್ಕೆ ಫ್ರೀ

Public TV
By Public TV
2 hours ago
UPSC Rank Bihar Youth Arrest
Chikkaballapur

ಕನ್ನಡಿಗ ಪಡೆದಿದ್ದ ರ‍್ಯಾಂಕ್‌ ತನ್ನದೆಂದು ಹೇಳಿ ಸನ್ಮಾನ – ಬಿಹಾರದ ಯುವಕ ಅರೆಸ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?